ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ್ದು ಸಂತಸ ತಂದಿದೆ: ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಗೆದ್ದು, ಹೊಸ ವರ್ಷವನ್ನು ಆರಂಭಿಸಿದ್ದು ಸಂತಸ ತಂದಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಪುಣೆ:  ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಗೆದ್ದು, ಹೊಸ ವರ್ಷವನ್ನು ಆರಂಭಿಸಿದ್ದು ಸಂತಸ ತಂದಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 78 ರನ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ಟಿ-20 ಸರಣಿಯನ್ನು 2-0ಯಿಂದ ಗೆದ್ದು ಕೊಂಡಿತು. ಉಭಯ ತಂಡಗಳ ನಡುವಣ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

“ಗೆಲುವಿನೊಂದಿಗೆ ವರ್ಷವನ್ನು ಪ್ರಾರಂಭಿಸುವುದು ತುಂಬಾ ಆಹ್ಲಾದಕರವಾಗಿರುತ್ತದೆ. ಎರಡನೇ ಪಂದ್ಯವನ್ನು ಗೆದ್ದ ನಂತರ ನಾವೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವು. ತಂಡದ ಸಾಧನೆ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. 200 ರನ್‌ಗಳ ಗುರಿಯನ್ನು ನಿಗದಿಪಡಿಸುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಇದು ಈ ಪಂದ್ಯದಲ್ಲಿ ನಮಗೆ ಸಹಾಯ ಮಾಡಿತು” ಎಂದು ವಿರಾಟ್ ಹೇಳಿದ್ದಾರೆ.

“ನಾವು ಇನ್ನಿಂಗ್ಸ್ ಮಧ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದೇವೆ ಆದರೆ ಮನೀಶ್ ಪಾಂಡೆ ಮತ್ತು ಶಾರ್ದುಲ್ ಠಾಕೂರ್ ಕೊನೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದ, ಒಂದು ಸಮಯದಲ್ಲಿ ನಾವು 180 ರನ್ ಗಳಿಸುವ ಬಗ್ಗೆ ಯೋಚಿಸುತ್ತಿದ್ದೆವು ಆದರೆ ನಾವು ಯಶಸ್ವಿಯಾಗಿ 200 ರನ್ ಗಡಿ ದಾಟಿದೆವು. ಅದೇ ರೀತಿ ಮುಂಬೈಯಲ್ಲಿ ನಾವು 200 ರನ್ ಗಳಿಸುವ ಬಗ್ಗೆ ಯೋಚಿಸಿದ್ದೆವು ಆದರೆ ತಂಡವು 230 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ ” ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com