ಕೊಪ್ಪಳ: ಪಿಡಿಒ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಬಂಧಿ ಕಿರುಕುಳದಿಂದ ಬೇಸತ್ತ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಅಂಟ್ರಠಾಣಾ ಗ್ರಾಮದಲ್ಲಿ ಘಟನೆ ನಡೆದಿದೆ. ಅಂಟ್ರಠಾಣಾ ಗ್ರಾಪಂ ವ್ಯಾಪ್ತಿಯ ಯರಿಗೋನಾಳ ಗ್ರಾಮದ ರಾಜಶೇಖರ ತಮ್ಮಣ್ಣವರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಂಪ್ಯೂಟರ್ ಆಪರೇಟರ್ ರಾಜಶೇಖರ ತಮ್ಮಣ್ಣವರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಯಲ್ಲಿ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.
ರಾಜಶೇಖರ ತಮ್ಮಣ್ಣವರ ಆತ್ಮಹತ್ಯೆಗೆ ಪಿಡಿಒ ಅಮಿನಸಾಬ್ ಕಲಂದರ್, ಅಧ್ಯಕ್ಷೆ ಮೈದುನ ಕಿರುಕುಳವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
Advertisement