ಪಂದ್ಯಕ್ಕೆ ತಿರುವು ಕೊಟ್ಟ ವಿಜಯ್‌ ಶಂಕರ್ ವಿಕೆಟ್‌ ಪಡೆಯಲು ಎಬಿಡಿ ನೀಡಿದ ಸಲಹೆ ಬಹಿರಂಗಪಡಿಸಿದ ಚಹಲ್‌

ದೇವದತ್‌ ಪಡಿಕ್ಕಲ್‌ ಚೊಚ್ಚಲ ಅರ್ಧಶತಕ ಹಾಗೂ ಯಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ತನ್ನ ಮೊದಲನೇ ಹಣಾಹಣಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿತು.
ಚಹಲ್-ಡಿವಿಲಿಯರ್ಸ್
ಚಹಲ್-ಡಿವಿಲಿಯರ್ಸ್
Updated on

ನವದೆಹಲಿ: ದೇವದತ್‌ ಪಡಿಕ್ಕಲ್‌ ಚೊಚ್ಚಲ ಅರ್ಧಶತಕ ಹಾಗೂ ಯಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ತನ್ನ ಮೊದಲನೇ ಹಣಾಹಣಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿತು.

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿಯೇ ಕರ್ನಾಟಕದ ದೇವದತ್ ಪಡಿಕ್ಕಲ್‌ ನಿರೀಕ್ಷೆಗೂ ಮೀರಿ ಬ್ಯಾಟಿಂಗ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಚೊಚ್ಚಲ ಅರ್ಧಶತಕ ಸಿಡಿಸಿದ ಆರ್‌ಸಿಬಿ ಓಪನರ್‌, ವಿರಾಟ್‌ ಕೊಹ್ಲಿಯ ಆತ್ಮ ವಿಶ್ವಾಸವನ್ನು ವೃದ್ದಿಸಿದರು. ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ 42 ಎಸೆತಗಳಲ್ಲಿ 56 ರನ್‌ ಗಳಿಸಿದರು. ಅಲ್ಲದೆ, ಆರೋನ್‌ ಫಿಂಚ್‌ ಅವರ ಜತೆಗೆ ಮೊದಲನೇ ವಿಕೆಟ್‌ಗೆ 90 ರನ್‌ಗಳಿಸಿ ತಂಡಕ್ಕೆ ಉತ್ತಮ ಆರಂಭ ನಿಡಿದ್ದರು. 

ನಂತರ, 164 ರನ್‌ಗಳ ಗುರಿ ಬೆನ್ನತ್ತಿದ್ದ ಸನ್‌ ರೈಸರ್ಸ್ ಹೈದರಾಬಾದ್‌ ತಂಡ ನಾಯಕ ಹಾಗೂ ಸ್ಟಾರ್‌ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು ಬೇಗ ಕಳೆದುಕೊಂಡರೂ, ಜಾನಿ ಬೈರ್‌ಸ್ಟೋವ್‌ ತಂಡಕ್ಕೆ ಆಸರೆಯಾದರು. 

ಆರ್‌ಸಿಬಿಯ ಉಮೇಶ್‌ ಯಾದವ, ಡೇಲ್‌ ಸ್ಟೇನ್‌ ಅವರ ಬೌಲಿಂಗ್‌ನಲ್ಲಿ ಜಾನಿ ಬೈರ್‌ಸ್ಟೋವ್‌ ಹಾಗೂ ಮನೀಶ್‌ ಪಾಂಡೆ ಅರ್ಭಟಿಸಿದರು. ಆದರೆ, ಯಜ್ವೇಂದ್ರ ಚಹಲ್‌ ಬೌಲಿಂಗ್‌ನಲ್ಲಿ ನಿರ್ಣಾಯಕ ಪ್ರದರ್ಶನ ತೋರಿದ್ದರಿ ಸನ್‌ ರೈಸರ್ಸ್ ಹೈದರಾಬಾದ್‌ ತಂಡ ಕೇವಲ 32 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ವಾರ್ನರ್‌ ಪಡೆ 153 ರನ್‌ಗಳಿಗೆ ಆಲವಟ್‌ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com