ಕುಶಾಲ್ ಪೆರೆರಾ
ಕ್ರಿಕೆಟ್
ಭಾರತ ವಿರುದ್ಧದ ಸರಣಿಗೂ ಲಂಕಾಗೆ ಶಾಕ್: ಸಂಪೂರ್ಣ ಟೂರ್ನಿಯಿಂದ ಹೊರಬಿದ್ದ ಕುಶಾಲ್ ಪೆರೆರಾ
ಭುಜದ ನೋವಿನ ಹಿನ್ನೆಲೆಯಲ್ಲಿ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಿಂದ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕುಶಾಲ್ ಪೆರೆರಾ ಹೊರಬಿದ್ದಿದ್ದಾರೆ.
ಕೊಲಂಬೋ: ಭುಜದ ನೋವಿನ ಹಿನ್ನೆಲೆಯಲ್ಲಿ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಿಂದ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕುಶಾಲ್ ಪೆರೆರಾ ಹೊರಬಿದ್ದಿದ್ದಾರೆ.
ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡ ಸರಣಿ ಆರಂಭಕ್ಕೆ ಮುನ್ನವೇ ಆಘಾತ ಎದುರಾಗಿದೆ. ಪೆರೆರಾ ಸರಣಿಯಿಂದ ಹೊರಬಿದ್ದಿರುವುದರಿಂದ ಬೇರೊಬ್ಬ ವಿಕೆಟ್ ಕೀಪರ್ನ ಆಯ್ಕೆ ನಡೆಯಬೇಕಿದೆ.
ಇದೇ ವೇಳೆ, ಶ್ರೀಲಂಕಾದ ವೇಗಿ ಬಿನುರಾ ಫರ್ನಾಂಡೊ ಸಹ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಬಿನುರಾ ನಿನ್ನೆ ನಡೆದ ಅಭ್ಯಾಸದ ವೇಳೆ ಎಡ ಪಾದದ ನೋವು ಕಾಣಿಸಿಕೊಂಡಿತ್ತು.
ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು ಜುಲೈ 18ರಿಂದ ಸರಣಿ ಆರಂಭಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ