ಬಿಸಿಸಿಐ ಪ್ಯಾನಲ್ ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ನಿಧನ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಸೇರಿದ ದೆಹಲಿ ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.
ಸುಮಿತ್ ಬನ್ಸಾಲ್
ಸುಮಿತ್ ಬನ್ಸಾಲ್
Updated on

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಸೇರಿದ ದೆಹಲಿ ಅಂಪೈರ್ ಸುಮಿತ್ ಬನ್ಸಾಲ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.

ಅಕ್ಟೋಬರ್ 2 ರಂದು ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ನಡುವಿನ ಅಂಡರ್ -19 ವಿನೂ ಮಂಕಡ್ ಟ್ರೋಫಿ ಪಂದ್ಯದ ವೇಳೆ ಸುಮಿತ್ ಅವರಿಗೆ ಬಲವಾಗಿ ಚೆಂಡು ಬಿದ್ದಿದ್ದರಿಂದ ಕಣ್ಣಿಗೆ ಹತ್ತಿರ ಗಾಯವಾಗಿತ್ತು. ಸ್ವಲ್ಪ ಸಮಯದ ನಂತರ, ಸುಮಿತ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಎಲ್ಲವೂ ಸರಿಯಾಗಿದ್ದ ಎರಡು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. 

ಆದಾಗ್ಯೂ, ಅವರ ಮುಖದ ಊತವು ಇನ್ನೂ ಹೋಗಿರಲಿಲ್ಲ. ಅಕ್ಟೋಬರ್ 8 ರಂದು, ಸುಮಿತ್‌ಗೆ ಎದೆ ನೋವು ಕಾಣಿಸಿಕೊಂಡಿತು. ಅಕ್ಟೋಬರ್ 9 ರಂದು ನೋವು ಮರುಕಳಿಸಿತು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು, ಅಲ್ಲಿ ಅವರು 10 ಅಕ್ಟೋಬರ್ ಬೆಳಿಗ್ಗೆ ನಿಧನರಾದರು.

ಸುಮಿತ್ 2006 ರಲ್ಲಿ ತಮ್ಮ ಅಂಪೈರಿಂಗ್ ವೃತ್ತಿಯನ್ನು ಆರಂಭಿಸಿದರು. ಅವರು ಒಂದು ಪ್ರಥಮ ದರ್ಜೆ ಮತ್ತು 19 ಲಿಸ್ಟ್ ಎ ಪಂದ್ಯಗಳೊಂದಿಗೆ ವಯೋಮಾನದ ಕ್ರಿಕೆಟ್‌ನಲ್ಲಿ ಕಾರ್ಯನಿರ್ವಹಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com