ಭಾರತ ವಿರುದ್ಧದ ಸರಣಿಗೂ ಲಂಕಾಗೆ ಶಾಕ್: ಸಂಪೂರ್ಣ ಟೂರ್ನಿಯಿಂದ ಹೊರಬಿದ್ದ ಕುಶಾಲ್ ಪೆರೆರಾ

ಭುಜದ ನೋವಿನ ಹಿನ್ನೆಲೆಯಲ್ಲಿ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಿಂದ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕುಶಾಲ್ ಪೆರೆರಾ ಹೊರಬಿದ್ದಿದ್ದಾರೆ.
ಕುಶಾಲ್ ಪೆರೆರಾ
ಕುಶಾಲ್ ಪೆರೆರಾ

ಕೊಲಂಬೋ: ಭುಜದ ನೋವಿನ ಹಿನ್ನೆಲೆಯಲ್ಲಿ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಿಂದ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕುಶಾಲ್ ಪೆರೆರಾ ಹೊರಬಿದ್ದಿದ್ದಾರೆ. 

ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡ ಸರಣಿ ಆರಂಭಕ್ಕೆ ಮುನ್ನವೇ ಆಘಾತ ಎದುರಾಗಿದೆ. ಪೆರೆರಾ ಸರಣಿಯಿಂದ ಹೊರಬಿದ್ದಿರುವುದರಿಂದ ಬೇರೊಬ್ಬ ವಿಕೆಟ್ ಕೀಪರ್‌ನ ಆಯ್ಕೆ ನಡೆಯಬೇಕಿದೆ. 

ಇದೇ ವೇಳೆ, ಶ್ರೀಲಂಕಾದ ವೇಗಿ ಬಿನುರಾ ಫರ್ನಾಂಡೊ ಸಹ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಬಿನುರಾ ನಿನ್ನೆ ನಡೆದ ಅಭ್ಯಾಸದ ವೇಳೆ ಎಡ ಪಾದದ ನೋವು ಕಾಣಿಸಿಕೊಂಡಿತ್ತು. 

ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು ಜುಲೈ 18ರಿಂದ ಸರಣಿ ಆರಂಭಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com