ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಪರ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ ಇನ್ನೂ ಐಪಿಎಲ್ ಆಡುವುದನ್ನು ಬಿಟ್ಟಿಲ್ಲ ಎಂದು ದೃಢಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಫೈನಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಸಿಎಸ್ಕೆಗಾಗಿ ಐಪಿಎಲ್ ಆಡುವುದನ್ನು ಮುಂದುವರಿಸಬೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ, "ಇದು ಬಿಸಿಸಿಐ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ಮುಂದಿನ ಋತುವಿನಿಂದ ಎರಡು ಹೊಸ ತಂಡಗಳು ಬರಲಿದ್ದು, ಸಿಎಸ್ ಕೆ ಗೆ ಯಾವುದು ಒಳ್ಳೆಯದು ಎಂದು ನಾವು ನಿರ್ಧರಿಸಬೇಕು. ತಂಡಕ್ಕೆ ತೊಂದರೆ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಲವಾದ ಕೋರ್ ಅನ್ನು ನಿರ್ಮಿಸುವುದು ಮುಖ್ಯ ವಿಷಯವಾಗಿದೆ. ಮುಂದಿನ 10 ವರ್ಷಗಳಲ್ಲಿ ಯಾವ ಕೊಡುಗೆ ನೀಡಬಹುದು ಎಂಬುದನ್ನು ನೋಡಲು ಕೋರ್ ಗುಂಪಿನಲ್ಲಿರುವ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದರು.
ಸಿಎಸ್ ಕೆ ನಾಯಕ ಪಂದ್ಯದ ನಂತರ ತನ್ನ ಅಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. "ನಾವು ಆಡುವ ಎಲ್ಲೆಲ್ಲಿ ಹೋಗುತ್ತೇವೊ, ಅದು ದಕ್ಷಿಣ ಆಫ್ರಿಕಾ, ಮೆಲ್ಬರ್ನ್ ಅಥವಾ ದುಬೈ ಆಗಿರಲಿ, ನಮ್ಮನ್ನು ಬೆಂಬಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಪ್ರತಿಯೊಬ್ಬ ಆಟಗಾರ ಮತ್ತು ತಂಡವು ಇದಕ್ಕಾಗಿ ಹಾತೊರೆಯುತ್ತದೆ. ಇಂದು ಇಲ್ಲಿ ಆಡುವಾಗ, ನಾವು ದುಬೈನಲ್ಲಿ ಆಡುತ್ತಿರುವಂತೆ ಅನಿಸಲಿಲ್ಲ, ನಾವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಡುತ್ತಿರುವಂತೆ ಭಾಸವಾಯಿತು. ನಮ್ಮ ಅಭಿಮಾನಿಗಳಿಗಾಗಿ ಚೆನ್ನೈಗೆ ಮರಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸಿಎಸ್ ಕೆ ಬಗ್ಗೆ ಮಾತನಾಡುವ ಮೊದಲು ಕೆಕೆಆರ್ ಬಗ್ಗೆ ಮಾತನಾಡುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ಯಾವುದೇ ತಂಡ ಐಪಿಎಲ್ ಗೆಲ್ಲಲು ಅರ್ಹವಾಗಿದ್ದರೆ ಅದು ಕೆಕೆಆರ್ ಎಂದು ಹೇಳಿದ್ದಾರೆ.
Advertisement