ಮುಂಬೈ: ಭಾರತಕ್ಕೆ ಎರಡು ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಗೆಲ್ಲಿಸಿರುವ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶಕರಾಗಲಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಬುಧವಾರ ಟಿ 20 ವಿಶ್ವಕಪ್ಗಾಗಿ 15 ಜನರ ತಂಡವನ್ನು ಘೋಷಿಸುವ ಮೂಲಕ ಇದನ್ನು ಖಚಿತಪಡಿಸಿದ್ದಾರೆ.
"ಎಂಎಸ್ ಧೋನಿಗೆ ಸಂಬಂಧಪಟ್ಟಂತೆ, ನಾನು ದುಬೈನಲ್ಲಿದ್ದಾಗ ಅವರೊಂದಿಗೆ ಮಾತನಾಡಿದ್ದೆ. ಅವರು ಟಿ 20 ವಿಶ್ವಕಪ್ಗಾಗಿ ತಂಡಕ್ಕೆ ಮಾರ್ಗದರ್ಶನ ನೀಡಲು ಮಾತ್ರ ಒಪ್ಪಿಕೊಂಡರು. ನಾನು ಈ ವಿಷಯವನ್ನು ನನ್ನ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರೆಲ್ಲರೂ ಅದನ್ನು ಒಪ್ಪುತ್ತಾರೆ. ನಾನು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದೇನೆ" ಎಂದು ಜಯ್ ಶಾ ಹೇಳಿದ್ದಾರೆ.
ಇದನ್ನು ಓದಿ: ಧೋನಿ ವಿರುದ್ಧ ಹಿತಾಸಕ್ತಿ ಸಂಘರ್ಷದ ದೂರು
2007ರ ಟಿ-20 ವಿಶ್ವಕಪ್, 2011 ವಿಶ್ವಕಪ್(ಏಕದಿನ) ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಒಳಗೊಂಡಿರುವ ಧೋನಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ಗಮನಾರ್ಹ.
ಭಾರತ ಕ್ರಿಕೆಟ್ ತಂಡವು ತನ್ನ ಟಿ 20 ವಿಶ್ವಕಪ್ 2021ರ ಅಭಿಯಾನವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24 ರಂದು ದುಬೈನಲ್ಲಿ ಆರಂಭಿಸಲಿದೆ. ಇದು ಅಕ್ಟೋಬರ್ 31 ರಂದು ಇಲ್ಲಿ ನ್ಯೂಜಿಲ್ಯಾಂಡ್ನ್ನು ಎದುರಿಸಲಿದ್ದು, ಅಬುಧಾಬಿಯಲ್ಲಿ ನವೆಂಬರ್ 3 ರಂದು ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಭಾರತ ತಂಡ ಗುಂಪು ಹಂತದಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಲಿದೆ.
Advertisement