ಇಸ್ಲಾಮಾಬಾದ್: ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರಾದ ವಾಸಿಂ ಅಕ್ರಂ ಅವರು 2009 ರ ಘಟನೆಯನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ನಂತರ, ವಾಸಿಂ ಅಕ್ರಮ್ ಯಾವುದೇ ದೇಶವನ್ನು ಇಷ್ಟಪಟ್ಟರೆ ಅದು ಭಾರತವಾಗಿದೆ. ಇದನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.
ಸ್ಪೋರ್ಟ್ಸ್ಟಾರ್ನೊಂದಿಗಿನ ಸಂಭಾಷಣೆಯಲ್ಲಿ, ವಾಸಿಂ ಅಕ್ರಮ್ 2009ರ ಭಯಾನಕ ಕಥೆಯನ್ನು ಬಹಿರಂಗಪಡಿಸಿದ್ದಾರೆ. ಅವರು ಪ್ರಮಾಣಿಸುತ್ತಿದ್ದ ವಿಮಾನವು ಚೆನ್ನೈನಲ್ಲಿ ಇಳಿದಿತ್ತು. ಆದರೆ ಕ್ರಿಕೆಟಿಗ ಮತ್ತು ಆತನ ಪತ್ನಿ ಬಳಿ ಭಾರತದ ವೀಸಾ ಇರಲಿಲ್ಲ. ಫ್ಲೈಟ್ ಲ್ಯಾಂಡ್ ಆಗುವಾಗ ತನ್ನ ಪತ್ನಿ ಪ್ರಜ್ಞಾಹೀನಳಾಗಿದ್ದಳು ಮತ್ತು ಅಲ್ಲಿನ ವೈದ್ಯಕೀಯ ತಂಡವು ಮಾನ್ಯ ವೀಸಾ ಇಲ್ಲದಿದ್ದರೂ ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದನ್ನು ಅಕ್ರಮ್ ಬಹಿರಂಗಪಡಿಸಿದರು.
'ನಾನು ನನ್ನ ಹೆಂಡತಿಯೊಂದಿಗೆ(ಅವರು ಇನ್ನಿಲ್ಲ) ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದೆ. ಆಗ ಇಂಧನ ತುಂಬಲು ವಿಮಾನವು ಚೆನ್ನೈನಲ್ಲಿ ಇಳಿಯಬೇಕಿತ್ತು. ವಿಮಾನ ಇಳಿಯುವಾಗ ಅವಳು ಪ್ರಜ್ಞಾಹೀನಳಾಗಿದ್ದಳು, ನಾನು ಅಳುತ್ತಿದ್ದೆ ಮತ್ತು ವಿಮಾನ ನಿಲ್ದಾಣಕ್ಕೆ ಧಾವಿಸಿದೆ. ಆದರೆ ಜನರು ನನ್ನನ್ನು ಗುರುತಿಸಿದರು. ನಮ್ಮಲ್ಲಿ ಭಾರತೀಯ ವೀಸಾ ಇರಲಿಲ್ಲ, ನಮ್ಮಿಬ್ಬರೂ ಪಾಕಿಸ್ತಾನಿ ಪಾಸ್ಪೋರ್ಟ್ ಹೊಂದಿದ್ದೇವು. ಚೆನ್ನೈ ವಿಮಾನ ನಿಲ್ದಾಣದ ಜನರು, ಭದ್ರತಾ ಪಡೆಗಳು ಮತ್ತು ಕಸ್ಟಮ್ಸ್ ಮತ್ತು ಇಮಿಗ್ರೇಷನ್ ಅಧಿಕಾರಿಗಳು ನನಗೆ ವೀಸಾಗಳ ಬಗ್ಗೆ ಚಿಂತಿಸಬೇಡಿ ಮೊದಲು ನಿಮ್ಮ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಇದನ್ನು ಒಬ್ಬ ಕ್ರಿಕೆಟಿಗನಾಗಿ ಮತ್ತು ಮನುಷ್ಯನಾಗಿ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಅಕ್ರಮ್ 1999ರ ಚೆನ್ನೈ ಟೆಸ್ಟ್ನ ಕೆಲವು ಉತ್ತಮ ನೆನಪುಗಳನ್ನು ಸಹ ನೆನಪಿಸಿಕೊಂಡರು. 'ಚೆನ್ನೈ ಟೆಸ್ಟ್ ನನಗೆ ತುಂಬಾ ವಿಶೇಷವಾಗಿತ್ತು. ಬಿಸಿಲು ಸುಡುತ್ತಿತ್ತು. ಪಿಚ್ ವಿಶೇಷವಾಗಿರಲಿಲ್ಲ ಆದರೂ ಅದು ನಮಗೆ ಸರಿಹೊಂದುತ್ತಿತ್ತು. ಏಕೆಂದರೆ ನಾವು ರಿವರ್ಸ್ ಸ್ವಿಂಗ್ ಅನ್ನು ನೆಚ್ಚಿಕೊಂಡಿದ್ದೇವು. ಸಕ್ಲೇನ್ ಮುಷ್ತಾಕ್ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದರು. ಆ ಸಮಯದಲ್ಲಿ ಅವರು ಮಾಡುತ್ತಿದ್ದ ಬೌಲಿಂಗ್ ಅನ್ನು ಎದುರಿಸಲು ಯಾರಿಗೂ ಸಾಧ್ಯವಾಗಲಿಲ್ಲ.
ಸಚಿನ್ ತೆಂಡೂಲ್ಕರ್ ಮೊದಲ ಇನ್ನಿಂಗ್ಸ್ ನಂತರ ಚೆನ್ನಾಗಿ ಆಡಿದ್ದರು. ಪ್ರತಿ ಬಾರಿ ಎರಡನೇ ಎಸೆತವನ್ನು ಸಚಿನ್ 'ಕೀಪರ್' ಹಿಂದೆಯೇ ಲ್ಯಾಪ್ ಶಾಟ್ ಹೊಡೆಯುತ್ತಿದ್ದರು. ಆಫ್-ಸ್ಪಿನ್ನರ್ ಸೆಕೆಂಡ್ ವಿರುದ್ಧ ಆಡಲು ತುಂಬಾ ವಿಚಿತ್ರವಾದ ಹೊಡೆತ ಆದಾಗಿತ್ತು. ಆದರೆ ಅವರು ಅದನ್ನು ಕರಗತ ಮಾಡಿಕೊಂಡರು. ಅದಕ್ಕಾಗಿಯೇ ಸಚಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
Advertisement