ಲಂಕಾ ವಿರುದ್ಧ ಭಾರತ ಗೆಲುವಿನ ನಂತರ ಭಾರತೀಯ ಅಭಿಮಾನಿಗಳ ಮೇಲೆ ಹಲ್ಲೆಗೆ ಮುಂದು? ವಿಡಿಯೋ

ಏಷ್ಯಾ ಕಪ್ 2023ರ ಸೂಪರ್-4 ನಲ್ಲಿ ಭಾರತ ನಿನ್ನೆ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿತು. 
ಅಭಿಮಾನಿಗಳ ಗುದ್ದಾಟ
ಅಭಿಮಾನಿಗಳ ಗುದ್ದಾಟ
Updated on

ಕೊಲಂಬೊ: ಏಷ್ಯಾ ಕಪ್ 2023ರ ಸೂಪರ್-4 ನಲ್ಲಿ ಭಾರತ ನಿನ್ನೆ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿತು. 

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದ್ದು ಪಂದ್ಯದ ಬಳಿಕ ಶ್ರೀಲಂಕಾದ ಅಭಿಮಾನಿ ಹಾಗೂ ಭಾರತೀಯ ಅಭಿಮಾನಿ ನಡುವೆ ವಾಗ್ವಾದ ನಡೆದಿದ್ದು, ವಿಷಯ ವಿಕೋಪಕ್ಕೆ ಹೋದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಆದಾಗ್ಯೂ, ಈ ವೀಡಿಯೊ ಎಷ್ಟು ಸರಿ ಅಥವಾ ಸುಳ್ಳು ಎಂದು ನಾವು ಖಚಿತಪಡಿಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವ ಈ ವೀಡಿಯೋದಲ್ಲಿ ಶ್ರೀಲಂಕಾದ ಜೆರ್ಸಿ ಧರಿಸಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕೋಪಗೊಂಡು ಕ್ರೀಡಾಂಗಣದಲ್ಲಿ ಹಳದಿ ಅಂಗಿ ತೊಟ್ಟಿದ್ದ ಯುವಕನನ್ನು ಥಳಿಸಲು ಓಡುತ್ತಿರುವುದನ್ನು ನೀವು ನೋಡಬಹುದು.

ಇಬ್ಬರ ನಡುವಿನ ಜಗಳವನ್ನು ತಡೆಯಲು ಹಲವರು ಅಲ್ಲಿ ಸೇರಿದ್ದರು. ನಂತರ ಎಲ್ಲರೂ ಒಟ್ಟಾಗಿ ಅವರನ್ನು ಬೇರ್ಪಡಿಸಿದರು. ಜಗಳವು ಗಣನೀಯವಾಗಿ ಉಲ್ಬಣಗೊಂಡಿತು. ಪಂದ್ಯದ ಕುರಿತು ಮಾತನಾಡುವುದಾದರೆ ಭಾರತ ಮತ್ತು ಶ್ರೀಲಂಕಾ ನಡುವೆ ಅತ್ಯಂತ ಕಠಿಣ ಪೈಪೋಟಿ ಇತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 213 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 172 ರನ್ ಗಳಿಗೆ ಆಲೌಟ್ ಆಯಿತು. 

ಈ ಗೆಲುವಿನೊಂದಿಗೆ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ 2023ರ ಫೈನಲ್ ತಲುಪಿದೆ. ಫೈನಲ್‌ನಲ್ಲಿ ಭಾರತವನ್ನು ಯಾರು ಎದುರಿಸುತ್ತಾರೆ ಎಂಬುದು ಸೆಪ್ಟೆಂಬರ್ 14ರಂದು ನಿರ್ಧಾರವಾಗಲಿದೆ. ಸೆಪ್ಟೆಂಬರ್ 14ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಪಂದ್ಯವಿದ್ದು, ಯಾವ ತಂಡ ಗೆದ್ದರೂ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಮಳೆಯಿಂದ ಪಂದ್ಯ ರದ್ದಾದರೆ ಪಾಕಿಸ್ತಾನ ಫೈನಲ್‌ನ ರೇಸ್‌ನಿಂದ ಹೊರಗುಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com