social_icon

ಕ್ಯಾಸಿನೋ, ಭ್ರಷ್ಟಾಚಾರ ಮತ್ತು ನಕಲಿ ಪ್ರವಾದಿ: ಕಳೆದ T20 ವಿಶ್ವಕಪ್ ನಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನಕ್ಕೆ ಕಾರಣಗಳು!

ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2022ರ ಟಿ20 ಕ್ರಿಕೆಟ್ ವಿಶ್ವಕಪ್‌ ನಲ್ಲಿ ಶ್ರೀಲಂಕಾದ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಅಲ್ಲದೆ ತಂಡ ಸೂಪರ್-12 ಹಂತದಿಂದ ಹೊರಹಾಕಬೇಕಾಯಿತು.

Published: 12th January 2023 07:52 PM  |   Last Updated: 12th January 2023 07:52 PM   |  A+A-


ಶ್ರೀಲಂಕಾ ತಂಡ

AFP

ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2022ರ ಟಿ20 ಕ್ರಿಕೆಟ್ ವಿಶ್ವಕಪ್‌ ನಲ್ಲಿ ಶ್ರೀಲಂಕಾದ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಅಲ್ಲದೆ ತಂಡ ಸೂಪರ್-12 ಹಂತದಿಂದ ಹೊರಹಾಕಬೇಕಾಯಿತು. ಶ್ರೀಲಂಕಾದ ಕಳಪೆ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದ್ದು 63 ಪುಟಗಳ ವರದಿಯನ್ನು ಸಮಿತಿ ನೀಡಿದೆ.

ಶ್ರೀಲಂಕಾದ ಅಮೋಘ ನಿರ್ಗಮನದಲ್ಲಿ ಆಟಗಾರರು ಕ್ಯಾಸಿನೋ ಪಾರ್ಟಿಗಳು, ಭ್ರಷ್ಟಾಚಾರ ಮತ್ತು ನಕಲಿ ಪ್ರವಾದಿಯ ಪ್ರಭಾವವನ್ನು ಹೊಂದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಶ್ರೀಲಂಕಾ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಪ್ರಸ್ತುತ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಿರತವಾಗಿದೆ. ಈ ಪ್ರವಾಸದಲ್ಲಿ ಶ್ರೀಲಂಕಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಿದ್ದು ಅಲ್ಲಿ 1-2 ಅಂತರದಿಂದ ಸೋಲನ್ನು ಎದುರಿಸಬೇಕಾಯಿತು. ಇನ್ನು ಏಕದಿನ ಸರಣಿಯಲ್ಲೂ ಅಂತಹ ಪ್ರದರ್ಶನ ಹೊರಬರುತ್ತಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲೂ ಶ್ರೀಲಂಕಾದ ಪ್ರದರ್ಶನ ಕಳಪೆಯಾಗಿತ್ತು. ಆ ವಿಶ್ವಕಪ್‌ನಲ್ಲಿ ದನುಷ್ಕಾ ಗುಣತಿಲಕ್ ಮತ್ತು ಚಾಮಿಕಾ ಕರುಣಾರತ್ನೆಯಂತಹ ಆಟಗಾರರು ಮೈದಾನದ ಹೊರಗೆ ವಿವಾದಗಳಲ್ಲಿ ಭಾಗಿಯಾಗಿದ್ದರು.

2022ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಕಳಪೆ ಪ್ರದರ್ಶನದ ಬಗ್ಗೆ ಸಮಿತಿಯನ್ನು ರಚಿಸಲಾಗಿದ್ದು, ಅದರ ವರದಿ ಈಗ ಮುನ್ನೆಲೆಗೆ ಬಂದಿದೆ. ವೇಗದ ಬೌಲಿಂಗ್ ಆಲ್‌ರೌಂಡರ್ ಚಾಮಿಕಾ ಕರುಣಾರತ್ನೆ ಕ್ಯಾಸಿನೊದಲ್ಲಿ ಸಹ ಆಟಗಾರರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು ಎಂದು ಸಮಿತಿಯು ಕಂಡುಹಿಡಿದಿದೆ. 63 ಪುಟಗಳ ವರದಿಯಲ್ಲಿ ಘಟನೆಯನ್ನು ವಿವರಿಸಿರುವ ಸಮಿತಿ, ಕ್ಯಾಸಿನೊ ಸದಸ್ಯರಿಗೆ ಫೋಟೋ ನೀಡಲು ನಿರಾಕರಿಸಿದ ನಂತರ ಚಾಮಿಕಾ ಜಗಳವಾಡಿದ್ದಾರೆ ಎಂದು ಹೇಳಿದೆ. ಕರುಣಾರತ್ನೆಗೆ ಶ್ರೀಲಂಕಾ ಮಂಡಳಿಯು ದಂಡ ವಿಧಿಸಿತು ಮತ್ತು ಒಂದು ವರ್ಷ ಅಮಾನತುಗೊಳಿಸಲಾಯಿತು.

ಇದನ್ನೂ ಓದಿ: ಐಸಿಸಿ ಏಕದಿನ ರ‍್ಯಾಂಕಿಂಗ್: 6ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ, 8ನೇ ಸ್ಥಾನ ಪಡೆದ ರೋಹಿತ್ ಶರ್ಮಾ

'ಮಾಜಿ ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಆಗಿದ್ದ ಜೆರೋಮ್ ಜಯರತ್ನ ಅವರು ಶ್ರೀಲಂಕಾ ತಂಡದಲ್ಲಿ ಯಾವುದೇ ಪಾತ್ರ ನಿರ್ವಹಿಸದಿದ್ದರೂ ಅವರನ್ನು 10 ದಿನಗಳವರೆಗೆ ಮೆಲ್ಬೋರ್ನ್‌ಗೆ ಕಳುಹಿಸಲಾಯಿತು. ಅದಕ್ಕಾಗಿ $ 7000 ಪಾವತಿಸಲಾಯಿತು. ದಶಕಗಳ ಕಾಲ ಶ್ರೀಲಂಕಾವನ್ನು ಆಳಿದ ರಾಜಪಕ್ಸೆ ಕುಟುಂಬಕ್ಕೆ ಜಯರತ್ನೆ ಸಂಬಂಧಿಯಾಗಿದ್ದಾರೆ. ಕಳೆದ ವರ್ಷ ಬೃಹತ್ ಪ್ರತಿಭಟನೆಯಿಂದಾಗಿ ರಾಜಪಕ್ಸೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಟಿ20 ವಿಶ್ವಕಪ್‌ನಲ್ಲಿ ಸಲಹೆಗಾರ ಕೋಚ್ ಆಗಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನೂ ವರದಿ ಪ್ರಶ್ನಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವೆಚ್ಚದಲ್ಲಿ ಪ್ರಯಾಣಿಸುವಾಗ ಜಯವರ್ಧನೆ ಆಸ್ಟ್ರೇಲಿಯಾದಲ್ಲಿ ಮಿನಿಸ್ಟ್ರಿ ಆಫ್ ಕ್ರ್ಯಾಬ್ ರೆಸ್ಟೋರೆಂಟ್ ಸರಪಳಿಯ ಶಾಖೆಯನ್ನು ತೆರೆದರು ಎಂದು ವರದಿಯಾಗಿದೆ. ವರದಿಯಲ್ಲಿ ಮಾಡಿರುವ ಆರೋಪಗಳಿಗೆ ಶ್ರೀಲಂಕಾ ಕ್ರಿಕೆಟ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಅಡಿಲೇಡ್‌ನಲ್ಲಿ ನಡೆದ ತಮ್ಮ ಅಂತಿಮ ಸೂಪರ್-12 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ವಿರುದ್ಧ ನಾಲ್ಕು ರನ್‌ಗಳ ಜಯ ದಾಖಲಿಸಿದ ನಂತರ ಶ್ರೀಲಂಕಾ ವಿಶ್ವಕಪ್‌ನ ಸೂಪರ್-12 ಹಂತದಲ್ಲೇ ಹೊರಬರಬೇಕಾಯಿತು. ಆದರೂ ಆಸ್ಟ್ರೇಲಿಯ ತಂಡ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಐವರು ಸದಸ್ಯರ ಸಮಿತಿಯು ವಿದೇಶಿ ಪ್ರವಾಸದಲ್ಲಿರುವ ಆಟಗಾರರನ್ನು ಕ್ಯಾಸಿನೊಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಬೇಕು ಮತ್ತು ಆಟಗಾರರು ಮತ್ತು ಅವರ ಪತ್ನಿಯರು ಅವರೊಂದಿಗೆ ಇರಲು ಅವಕಾಶ ನೀಡಬೇಕೆಂದು ಶಿಫಾರಸು ಮಾಡಿದೆ.


Stay up to date on all the latest ಕ್ರಿಕೆಟ್ news
Poll
Dk shivakumar

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.


Result
ಒಪ್ಪುತ್ತೇನೆ
ಒಪ್ಪುವುದಿಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp