'ಓವರ್ ಕಾನ್ಫಿಡೆನ್ಸ್' ನಿಂದ ಸೋಲು: ರವಿಶಾಸ್ತ್ರಿ ಹೇಳಿಕೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರುಗೇಟು!
ಅತಿಯಾದ ಆತ್ಮವಿಶ್ವಾಸದಿಂದ ಆಸ್ಟ್ರೇಲಿಯಾ ವಿರುದ್ಧ ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಸೋತಿದೆ ಎಂಬ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
Published: 08th March 2023 03:11 PM | Last Updated: 04th April 2023 11:29 AM | A+A A-

ರೋಹಿತ್ ಶರ್ಮಾ-ರವಿಶಾಸ್ತ್ರಿ
ಅತಿಯಾದ ಆತ್ಮವಿಶ್ವಾಸದಿಂದ ಆಸ್ಟ್ರೇಲಿಯಾ ವಿರುದ್ಧ ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಸೋತಿದೆ ಎಂಬ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ರವಿಶಾಸ್ತ್ರಿ ಅವರದ್ದು 'ಅಸಂಬದ್ಧ' ಹೇಳಿಕೆ ಎಂದಿರುವ ರೋಹಿತ್ ಶರ್ಮಾ, ರವಿಶಾಸ್ತ್ರಿಗೆ ನಮ್ಮ ಮನಸ್ಥಿತಿ ಬಗ್ಗೆ ಗೊತ್ತು. ನಾವು ಅತಿಯಾದ ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ಭಾವಿಸಿದರೆ ಅದು ರಬ್ಬಿಶ್ ಎಂದು ಹೇಳಿದ್ದಾರೆ.
ಕಳೆದ 18 ತಿಂಗಳುಗಳಲ್ಲಿ ಶಾಂತತೆ, ಸಂಯಮ ಮತ್ತು ಘನತೆಯನ್ನು ಕಾಪಾಡಿಕೊಂಡಿದ್ದೇವೆ. ಆದರೆ ಮೂರನೇ ಟೆಸ್ಟ್ ಪಂದ್ಯದ ಮಾಜಿ ಕೋಚ್ ಮೌಲ್ಯಮಾಪನದ ಬಗ್ಗೆ ಕೇಳಿದಾಗ ಪ್ರಶ್ನಿಸಿದ್ದಕ್ಕೆ ರೋಹಿತ್ ಶರ್ಮಾ ತುಂಬಾ ದೃಢವಾಗಿ ಉತ್ತರಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀವು ಎರಡು ಪಂದ್ಯಗಳನ್ನು ಗೆದ್ದಾಗ, ಹೊರಗಿನ ಜನರು ನಾವು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅದು ಸಂಪೂರ್ಣ ಅಸಂಬದ್ಧವಾಗಿದೆ. ಏಕೆಂದರೆ ನೀವು ಎಲ್ಲಾ ನಾಲ್ಕು ಪಂದ್ಯಗಳಲ್ಲಿ ನಿಮ್ಮ ಅತ್ಯುತ್ತಮವಾದದನ್ನು ನೀಡಲು ಬಯಸುತ್ತೀರಿ ಎಂದು ಹೇಳಿದರು.
ನೀವು ಎರಡು ಪಂದ್ಯಗಳನ್ನು ಗೆದ್ದ ನಂತರ ನಿಲ್ಲಿಸಲು ಬಯಸುವುದಿಲ್ಲ. ಅದು ಸಾಮಾನ್ಯ. ಖಂಡಿತಾ ಇವರೆಲ್ಲರೂ ಅತಿಯಾದ ಆತ್ಮವಿಶ್ವಾಸದ ಬಗ್ಗೆ ಮಾತನಾಡುವಾಗ ಮತ್ತು ವಿಶೇಷವಾಗಿ ಡ್ರೆಸ್ಸಿಂಗ್ ರೂಮ್ನ ಭಾಗವಾಗದಿದ್ದಾಗ, ಡ್ರೆಸ್ಸಿಂಗ್ ರೂಮ್ನಲ್ಲಿ ಯಾವ ರೀತಿಯ ಚರ್ಚೆಗಳು ನಡೆಯುತ್ತವೆ ಎಂಬುದು ಅವರಿಗೆ ತಿಳಿಯುವುದಿಲ್ಲ. ನಾವು ಎಲ್ಲಾ ಪಂದ್ಯಗಳಲ್ಲಿ ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ಬಯಸುತ್ತೇವೆ ಮತ್ತು ಅದು ಅತಿಯಾದ ಆತ್ಮವಿಶ್ವಾಸ ಅಥವಾ ಹೊರಗಿನವರಿಗೆ ಅಂತಹದ್ದೇನಾದರೂ ಇದ್ದರೆ, ಅದು ನಮಗೆ ನಿಜವಾಗಿಯೂ ಮುಖ್ಯವಲ್ಲ ಎಂದು ಟೀಂ ಇಂಡಿಯಾ ನಾಯಕ ಹೇಳಿದರು.
ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್: ಆಸಿಸ್ ಪಿಎಂ ಜೊತೆ ಕ್ರಿಕೆಟ್ ಪ್ರಧಾನಿ ಮೋದಿ ಪಂದ್ಯ ವೀಕ್ಷಣೆ
ರವಿಶಾಸ್ತ್ರಿ ಸ್ವತಃ ಈ ಡ್ರೆಸ್ಸಿಂಗ್ ರೂಮ್ನ ಭಾಗವಾಗಿದ್ದರು. ನಾವು ಆಡುವಾಗ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತೇವೆ ಎಂಬುದು ಅವರಿಗೆ ತಿಳಿದಿದೆ. ಇದು ಅತಿಯಾದ ಆತ್ಮವಿಶ್ವಾಸದ ಬಗ್ಗೆ ಅಲ್ಲ. ಆದರೆ ನಿರ್ದಯವಾಗಿರುವುದು. ನಿರ್ದಯ ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಮನಸ್ಸಿನಲ್ಲಿ ಬರುವ ಮಾತು. ವಿದೇಶಿ ಪ್ರವಾಸದಲ್ಲಿರುವಾಗ ಎದುರಾಳಿಗಳಿಗೆ ಕನಿಷ್ಠ ಅವಕಾಶವನ್ನೂ ನೀಡುವುದಿಲ್ಲ. ವಿದೇಶಕ್ಕೆ ಭೇಟಿ ನೀಡಿದಾಗ ನಮಗೂ ಹಾಗೆಯೇ ಅನಿಸುತ್ತದೆ ಎಂದರು.
ರವಿಶಾಸ್ತ್ರಿ 2014ರ ನಂತರ ಏಳು ವರ್ಷಗಳಲ್ಲಿ ಆರು ವರ್ಷಗಳ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಮೂರನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ ಭಾರತ ಒಂಬತ್ತು ವಿಕೆಟ್ಗಳ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ ತಂಡವು ಅಲ್ಪತೃಪ್ತಿ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದೆ ಎಂದು ಹೇಳಿದ್ದರು.