RCB ಕಟ್ಟಾ ಅಭಿಮಾನಿಗಳೇ... 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು': ನಾಯಕಿ ಸ್ಮೃತಿ ಮಂದಾನ

ಚೊಚ್ಚಲ WPL ಕಪ್ ಗೆಲ್ಲುವ ಮೂಲಕ RCB ನಾಯಕಿ ಸ್ಮೃತಿ ಮಂದಾನ RCB ಅಭಿಮಾನಿಗಳ ಬಹು ವರ್ಷಗಳ ಐಪಿಎಲ್ ಟ್ರೋಫಿ ಬರ ನೀಗಿಸಿದ್ದಾರೆ.
ಚೊಚ್ಚಲ WPL ಟ್ರೋಫಿಗೆ ಮುತ್ತಿಟ್ಟ ಸ್ಮೃತಿ ಮಂದಾನ
ಚೊಚ್ಚಲ WPL ಟ್ರೋಫಿಗೆ ಮುತ್ತಿಟ್ಟ ಸ್ಮೃತಿ ಮಂದಾನ

ನವದೆಹಲಿ: ಚೊಚ್ಚಲ WPL ಕಪ್ ಗೆಲ್ಲುವ ಮೂಲಕ RCB ನಾಯಕಿ ಸ್ಮೃತಿ ಮಂದಾನ RCB ಅಭಿಮಾನಿಗಳ ಬಹು ವರ್ಷಗಳ ಐಪಿಎಲ್ ಟ್ರೋಫಿ ಬರ ನೀಗಿಸಿದ್ದಾರೆ.

ಚಾಂಪಿಯನ್ ಟೋಫ್ರಿ ಎತ್ತಿ ಹಿಡಿದಿರುವ ಸ್ಮೃತಿ ಮಂದಾನ ಅವರು RCB ಕಟ್ಟಾ ಅಭಿಮಾನಿಗಳೇ 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು ಎಂದು ಹೇಳುವ ಮೂಲಕ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.

ಚೊಚ್ಚಲ WPL ಟ್ರೋಫಿಗೆ ಮುತ್ತಿಟ್ಟ ಸ್ಮೃತಿ ಮಂದಾನ
RCB Champion: RCB ನಾಯಕಿ ಸ್ಮೃತಿ ಮಂದಾನಗೆ ವಿಡಿಯೋ ಕರೆ ಮಾಡಿ ಅಭಿನಂದಿಸಿದ ವಿರಾಟ್ ಕೊಹ್ಲಿ!

ಈ ಪಂದ್ಯದಲ್ಲಿ ಸ್ಮೃತಿ ಮಂದಾನ 31 ರನ್ ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. ನಂತರ ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ಈ ವೇಳೆ ಬಂದ ಎಲ್ಲಿಸ್ ಪೇರಿ ಮತ್ತು ರಿಚ್ಚ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com