RCB ವೆಂಟಿಲೇಟರ್ ಆಫ್ ಆಗಿದೆ, ಆದರೆ ಇನ್ನೂ ಐಸಿಯುನಲ್ಲಿದೆ: ಭಾರತದ ಮಾಜಿ ಆಲ್‌ರೌಂಡರ್ ಹೇಳಿಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲರ್‌ಗಳು ಒಟ್ಟಾಗಿ ತಮ್ಮ ತಂಡವನ್ನು ವೆಂಟಿಲೇಟರ್‌ನಿಂದ ಹೊರತೆಗೆದಿದ್ದಾರೆ. ಆದರೆ, ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಜಯ ಸಾಧಿಸಿದ ಬಳಿಕವೂ ಆರ್‌ಸಿಬಿ ಇನ್ನೂ 'ಐಸಿಯು'ನಲ್ಲಿದೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ
ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ
Updated on

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲರ್‌ಗಳು ಒಟ್ಟಾಗಿ ತಮ್ಮ ತಂಡವನ್ನು ವೆಂಟಿಲೇಟರ್‌ನಿಂದ ಹೊರತೆಗೆದಿದ್ದಾರೆ. ಆದರೆ, ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಜಯ ಸಾಧಿಸಿದ ಬಳಿಕವೂ ಆರ್‌ಸಿಬಿ ಇನ್ನೂ 'ಐಸಿಯು'ನಲ್ಲಿದೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ RCB ಇನ್ನೂ 38 ಎಸೆತಗಳು ಬಾಕಿ ಇರುವಾಗಲೇ ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ.

ಫಾಫ್ ಡು ಪ್ಲೆಸಿಸ್ (64) ಮತ್ತು ವಿರಾಟ್ ಕೊಹ್ಲಿ (42) ಜೊತೆಯಾಟ ಪವರ್‌ಪ್ಲೇ ಒಳಗೆ 92 ರನ್‌ ಗಳಿಸಿ ತಂಡಕ್ಕೆ ಅಡಿಪಾಯ ಹಾಕಿದರು. ಆದರೆ, RCB 92/0 ರಿಂದ 117 ರನ್ ಕಲೆಹಾಕುವ ವೇಳೆಗೆ 6 ವಿಕೆಟ್ ಕಳೆದುಕೊಂಡು ಅಭಿಮಾನಿಗಳಿಗೆ ಆತಂಕ ಉಂಟಾಗುವಂತೆ ಮಾಡಿತ್ತು.

ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ
IPL 2024: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ RCB

ಐಪಿಎಲ್ 2024ನೇ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಇದೀಗ ಮೂರು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದೆ. ತಂಡಕ್ಕೆ ವೆಂಟಿಲೇಟರ್ ಆಫ್ ಆಗಿದೆ. ಆದರೆ, ಅದಿನ್ನೂ ಐಸಿಯುನಲ್ಲಿದೆ. ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಸುಧಾರಿಸಿದ್ದರೂ, ಅನಿಶ್ಚಿತತೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

'ವಿರಾಟ್ ಮತ್ತು ಫಾಫ್ ಬ್ಯಾಟಿಂಗ್ ನೋಡಿದ ನಂತರ ನಾವು ನೆನ್ನೆಯ ಪಂದ್ಯದ ಬಗ್ಗೆ ಉತ್ಸುಕರಾಗಿದ್ದೆವು. ಇದರ ಹೊರತಾಗಿಯೂ, ನಿಜವಾದ ಸಾಧನೆ ಬೌಲರ್‌ಗಳಿಂದ ಬಂದಿದೆ. ಬೌಲರ್‌ಗಳು ಗೆಲುವನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಬೌಲಿಂಗ್ ವಿಭಾಗವು ಇದೀಗ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದೆ. ಈ ಆವೃತ್ತಿಯ ನಿರ್ಣಾಯಕ ಘಟ್ಟದಲ್ಲಿ ತಂಡದ ಬೌಲಿಂಗ್ ಪ್ರದರ್ಶನ ಸುಧಾರಿಸಿದೆ. ಆದರೆ, ನಾವು ಈ ಆವೃತ್ತಿಯ ಅಂತಿಮ ಘಟ್ಟದಲ್ಲಿದ್ದೇವೆ' ಎಂದಿದ್ದಾರೆ.

ಆರ್‌ಸಿಬಿ ಗೆಲುವಿನ ನಂತರ ಮೊಮೆಂಟಮ್‌ ಅನ್ನು ಪಡೆದುಕೊಂಡಿರಬಹುದು. ಅದು ಅವರನ್ನು ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿಸಿದೆ. ಆದರೆ, ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಬಹಳ ಕಠಿಣ ಪ್ರಶ್ನೆಯಾಗಿದೆ. ಮೊಮೆಂಟಮ್‌ಗಿಂತ ಹೆಚ್ಚಾಗಿ, ಇದು ತಂಡದ ಮನಸ್ಥಿತಿಗೆ ಸಂಬಂಧಿಸಿದೆ. ಅಲ್ಲಿ ನೀವು ಕೆಟ್ಟ ಪರಿಸ್ಥಿತಿಯಲ್ಲಿದ್ದರೆ, ಒಂದು ತಂಡವಾಗಿ ಸಾಮೂಹಿಕವಾಗಿ ಯಾರಾದರೂ ನಿಮ್ಮನ್ನು ಅದರಿಂದ ಹೊರತರುತ್ತಾರೆ ಎಂದು ಜಡೇಜಾ ಹೇಳಿದರು.

ಇಂದು, RCB ಸರಿಯಾದ ದಾರಿಯಲ್ಲಿ ಆರಿಸಿಕೊಂಡಂತೆ ತೋರುತ್ತಿದೆ. ಆದರೆ, ಜಿಟಿ ಮತ್ತೊಂದು ದಾರಿಯಲ್ಲಿದೆ. ಈ ಇಬ್ಬರಲ್ಲಿ ಯಾರು ತಮ್ಮ ಗುರಿಯನ್ನು ತಲುಪುತ್ತಾರೆ? ಎನ್ನುವುದು ಇನ್ನೂ ತುಂಬಾ ಕಠಿಣವಾದ ಪ್ರಶ್ನೆಯಾಗಿದೆ ಎಂದರು.

ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ
ಐಪಿಎಲ್ 2024: ಗುಜರಾತ್ ವಿರುದ್ಧ RCB ಗೆಲುವು; ಪ್ಲೇ ಆಫ್ ಕನಸು ಜೀವಂತ

RCB ಯ ಆಕ್ರಮಣಕಾರಿ ಬ್ಯಾಟಿಂಗ್ ವಿಧಾನದಿಂದ ಪ್ರಭಾವಿತರಾದ ಭಾರತದ ಮಾಜಿ ಕ್ರಿಕೆಟಿಗ, ಅವರು ಆರಂಭದಿಂದಲೂ ವಿಭಿನ್ನವಾಗಿ ಆಟಕ್ಕೆ ಬಂದರು. ನಾನು ಅಂಕಿಅಂಶಗಳನ್ನು ಪರಿಶೀಲಿಸಿಲ್ಲ, ಆದರೆ ಅವರು ಸಿಕ್ಸರ್‌ನೊಂದಿಗೆ ಆಟವನ್ನು ಪ್ರಾರಂಭಿಸುವುದನ್ನು ನಾನು ಈ ಹಿಂದೆ ನೋಡಿರಲಿಲ್ಲ. ಮೊದಲ ಓವರ್‌ನಲ್ಲಿಯೇ ಅತ್ಯುತ್ತಮವಾಗಿ ಆರಂಭಿಸಿದರು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com