ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಬ್ಯಾಟಿಂಗ್ ದಂತಕಥೆ ಸುನೀಲ್ ಗವಾಸ್ಕರ್ ಹಾಡಿ ಹೊಗಳಿದ್ದು, ಆತ್ಮ ವಿಶ್ವಾಸ ಮತ್ತು ಎಂದಿಗೂ ಸೋಲೊಪ್ಪಿಕೊಳ್ಳದ ಮನೋಭಾವ('ನೆವರ್-ಸೇ-ಡೈ ಆಟಿಟ್ಯೂಡ್') ಸಿರಾಜ್ ಅವರ ನಿಜವಾದ ಶಕ್ತಿ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆರ್ ಸಿಬಿ ನಾಲ್ಕು ವಿಕೇಟ್ ಗಳ ಭರ್ಜರಿ ಗೆಲುವು ಸಾಧಿಸಿತ್ತು.
"ನೀವು ಪ್ರತಿ ಬಾರಿ ಮೊಹಮ್ಮದ್ ಸಿರಾಜ್ ಅವರನ್ನು ನೋಡಿದಾಗ, ಅವರು ತಮ್ಮ ಹೃದಯವನ್ನು ನೀಡಲಿದ್ದಾರೆ ಎಂದು ನಿಮಗೆ ಗೊತ್ತು. ಅವರು ಆಸ್ಟ್ರೇಲಿಯಾದಲ್ಲಿದ್ದಾಗ ಅವರ ತಂದೆ ನಿಧನರಾದ ಸಮಯದಲ್ಲೂ ಅವರು ಆಟವನ್ನು ಮುಂದುವರಿಸಿದರು" ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಲೈವ್ನಲ್ಲಿ ಹೇಳಿದ್ದಾರೆ.
ನಿಮ್ಮ ಪೋಷಕರು ನಿಮಗೆ ತುಂಬಾ ಪ್ರಿಯರಾಗಿರುವುದರಿಂದ ಬಹಳಷ್ಟು ಜನ ಹಿಂತಿರುಗಲು ಬಯಸುತ್ತಾರೆ. ಆದರೆ ಅವರು ಭಾರತಕ್ಕಾಗಿ ಆಡುವುದು ಮುಖ್ಯ ಎಂದು ಅರಿತುಕೊಂಡರು ಎಂದು ನಾನು ಭಾವಿಸುತ್ತೇನೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
"ಅಲ್ಲದೆ ಆ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಅವರು ಎಷ್ಟು ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳಿ. ಅವರು 55 ರನ್ ಗಳಿಸಿದ್ದಾಗ ಸ್ಟೀವ್ ಸ್ಮಿತ್ನಂತಹವರನ್ನು ಔಟ್ ಮಾಡುವುದು... ಆದ್ದರಿಂದ ಆತ್ಮ ವಿಶ್ವಾಸ ಮತ್ತು ಎಂದಿಗೂ ಸಾಯದ ಮನೋಭಾವ ಮೊಹಮ್ಮದ್ ಸಿರಾಜ್ ಅವರ ನಿಜವಾದ ಶಕ್ತಿ" ಎಂದಿದ್ದಾರೆ.
Advertisement