
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2024ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸಿಎಸ್ಕೆ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್ನಲ್ಲಿ ಸ್ಥಾನ ಪಡೆದಿದೆ. ಸಂಭ್ರಮಾಚರಣೆ ಗುಂಗಿನಲ್ಲಿದ್ದ ಆರ್ಸಿಬಿ ಆಟಗಾರರು ಎಂಎಸ್ ಧೋನಿ ಅವರಿಗೆ ಹಸ್ತಲಾಘವ ಮಾಡಿಲ್ಲ ಎನ್ನುವ ಕುರಿತು ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಆರ್ಸಿಬಿ ಅಭಿಮಾನಿಗಳು ಸಿಎಸ್ಕೆ ಅಭಿಮಾನಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ಬೆಂಬಲಿಗರು ತಮ್ಮ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಿಎಸ್ಕೆ ಅಭಿಮಾನಿಯೊಬ್ಬರನ್ನು ಕೆಣಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ಕ್ರೀಡಾಂಗಣದ ಹೊರಗೆ ಸಿಎಸ್ಕೆ ಅಭಿಮಾನಿಯೊಬ್ಬರನ್ನು ಸುತ್ತುವರೆದಿರುವ ಆರ್ಸಿಬಿ ಬೆಂಬಲಿಗರು ಆರ್ಸಿಬಿ ಆರ್ಸಿಬಿ ಎಂದು ಕೂಗುತ್ತಾ, ಅವರನ್ನು ಅಪಹಾಸ್ಯ ಮಾಡಿದ್ದಾರೆ. ಅವರನ್ನು ಅಪ್ಪಿ, ಮೇಲಕ್ಕೆತ್ತಿ ಕುಣಿಸಿದ್ದಾರೆ. ಈ ವೇಳೆ ಆತ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಐಪಿಎಲ್ ಆವೃತ್ತಿಯ ಆರಂಭದಲ್ಲಿ ತಾವು ಆಡಿದ್ದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ ಎಂದೇ ಹೇಳಲಾಗಿತ್ತು. ಆದರೆ, ನಂತರದ ಆರು ಸತತ ಗೆಲುವುಗಳು ಅವರು ಪ್ಲೇಆಫ್ ಸ್ಥಾನ ಪಡೆಯಲು ನೆರವಾಗಿದೆ.
ಈ ವರ್ಷದ ಐಪಿಎಲ್ನ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯವನ್ನು ಸಿಎಸ್ಕೆ ತವರು ಮೈದಾನವಾದ ಚೆಪಾಕ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಘೋಷಣೆಯನ್ನು ನಂತರ, ಮೇ 26ರಂದು ಧೋನಿ ಮತ್ತು ಅವರ ತಂಡವು ಟ್ರೋಫಿ ಎತ್ತುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ, ಈ ಆವೃತ್ತಿಯಲ್ಲಿ ಆರ್ಸಿಬಿ ಎದುರಿನ ಸೋಲು CSK ಪ್ಲೇಆಫ್ಗೆ ಪ್ರವೇಶಿಸುವುದನ್ನು ತಡೆಯಿತು.
42 ವರ್ಷದ ಧೋನಿ ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳುತ್ತಾರೆ ಎಂದೇ ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದರೆ, ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಈ ಆವೃತ್ತಿಯಲ್ಲಿ ಹಿಂದಿರುಗಿದ್ದರು. ಈ ಆವೃತ್ತಿಯಲ್ಲಿ ರುತುರಾಜ್ ಗಾಯಕ್ವಾಡ್ಗೆ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ಹಸ್ತಾಂತರಿಸಿದ್ದರು.
Advertisement