
ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ನೆಟ್ನಲ್ಲಿ ಅಭ್ಯಾಸ ಮಾಡುವಾಗ ತಂಡದ ಮಾಜಿ ಸಹ ಆಟಗಾರ ಮತ್ತು ಸದ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ ಅವರನ್ನು ಗಮನಿಸಿದ್ದಾರೆ. ಡಿಸಿ vs ಆರ್ಸಿಬಿ ನಿರ್ಣಾಯಕ ಮುಖಾಮುಖಿಯ ಮುನ್ನಾದಿನ, ಅಕ್ಷರ್ ಪಟೇಲ್ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದಿನೇಶ್ ಕಾರ್ತಿಕ್ ಅವರು ನೆಟ್ಸ್ ಕಡೆಗೆ ಬಂದಿದ್ದಾರೆ.
ನೆಟ್ಸ್ ಸಮೀಪದಲ್ಲಿ ಇದ್ದ ದಿನೇಶ್ ಕಾರ್ತಿಕ್ ಅವರನ್ನು ಗಮನಿಸಿದ ಅಕ್ಷರ್ ಪಟೇಲ್ ಬ್ಯಾಟಿಂಗ್ ನಿಲ್ಲಿಸಿದ್ದಾರೆ. ಆಗ ಕಾರ್ತಿಕ್ ನೆಟ್ಸ್ ಸಮೀಪ ನಡೆದು ಅಕ್ಷರ್ ಅವರ ಕೈಕುಲುಕಿ, ನಾಯಕನಂತೆ ವರ್ತಿಸುವಂತೆ ಮತ್ತು ತನ್ನನ್ನು ಮಾತನಾಡಿಸಿ ಅಭ್ಯಾಸದಿಂದ ವಿಚಲಿತರಾಗಬೇಡಿ ಎನ್ನುತ್ತಾರೆ. ಡಿಸಿ ನಾಯಕ ಯಾವುದೇ ಗಮನ ಹರಿಸದಿದ್ದಾಗ, ಕಾರ್ತಿಕ್ 'ತಮಾಷೆ ಮಾಡಬೇಡಿ, ದಯವಿಟ್ಟು ಬ್ಯಾಟಿಂಗ್ ಮುಂದುವರಿಸಿ. ಅದಕ್ಕಾಗಿಯೇ ನಾನು ನೆಟ್ಸ್ ಹತ್ತಿರ ಬರುವುದಿಲ್ಲ" ಎಂದು ಹೇಳಿ ಹೊರಟುಹೋಗುತ್ತಾರೆ.
ಅಕ್ಷರ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಸಂಭಾಷಣೆ ಇಲ್ಲಿದೆ
ಅಕ್ಷರ್ ಪಟೇಲ್: ಡಿಕೆ ಭಾಯ್ ಕೋ ಹಲೋ ತೋ ಬೊಲುಂಗಾ ನಾ. (ನಾನು ನನ್ನ ಸಹೋದರ ಡಿಕೆಗೆ ಹಲೋ ಹೇಳುತ್ತೇನೆ)
ದಿನೇಶ್ ಕಾರ್ತಿಕ್: ಒಳ್ಳೆಯ ನಾಯಕನಾಗಿರಿ.
ಅಕ್ಷರ್ ಪಟೇಲ್: ಹೇ ಡಿಕೆ ಭಾಯ್, ಬಾಯಿ ತೋ ಯಾರ್ ಆಪ್. (ಡಿಕೆ ಭಾಯ್ ನೀನು ನನ್ನ ಸಹೋದರ)
ದಿನೇಶ್ ಕಾರ್ತಿಕ್: ಎಹ್ ತು ಖೇಲ್ ನಾ ಯಾರ್. ಮಜಾಕ್ ಮತ್ ಕರ್. ಇಸ್ಲೀ ಮೇನ್ ನೆಟ್ ಕೆ ಪಾಸ್ ನಹಿ ಅತಾ. (ನೀನು ಹೋಗಿ ಬ್ಯಾಟಿಂಗ್ ಮಾಡು, ತಮಾಷೆ ಮಾಡಬೇಡ. ಅದಕ್ಕಾಗಿಯೇ ನಾನು ನೆಟ್ಸ್ ಹತ್ತಿರ ಬರುವುದಿಲ್ಲ).
ಅಕ್ಷರ್ ಪಟೇಲ್ ಈ ಆವೃತ್ತಿಯಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡಿಸಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಡಿಸಿ ಕೊನೆಯ ಬಾರಿ ಆರ್ಸಿಬಿಯನ್ನು ಎದುರಿಸಿದಾಗ, ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿ ತಂಡದ ಗೆಲುವಿಗೆ ಪಾತ್ರರಾಗಿದ್ದರು. ಇಂದು ನಡೆಯಲಿರುವ ಪಂದ್ಯದಲ್ಲೂ ರಾಹುಲ್ ಅವರಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಿರಬಹುದು.
Advertisement