ವೈಭವ್ ಸೂರ್ಯವಂಶಿಯನ್ನು ಬ್ರಿಯಾನ್ ಲಾರಾಗೆ ಹೋಲಿಸಿದ ಮಾಜಿ ಆಟಗಾರ; ಸಲಹೆ ನೀಡಿದ ಅಂಬಟಿ ರಾಯುಡು!

ವೈಭವ್ ಸೂರ್ಯವಂಶಿ ಮುಂದಿನ 2 ವರ್ಷಗಳಲ್ಲಿ ಟೀಂ ಇಂಡಿಯಾಗೆ ಪ್ರವೇಶ ಮಾಡುತ್ತಾರೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ಊಹಿಸುತ್ತಿದ್ದಾರೆ.
Vaibhav Suryavanshi
ವೈಭವ್ ಸೂರ್ಯವಂಶಿ
Updated on

14ನೇ ವಯಸ್ಸಿನಲ್ಲಿಯೇ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಪಂದ್ಯಾವಳಿಯಲ್ಲಿ ಶತಕ ಗಳಿಸಿ ಎಲ್ಲರ ಗಮನ ಸೆಳೆಸಿದ್ದರು. ತಾವು ಎದುರಿಸಿದ ಮೊದಲನೇ ಎಸೆತವನ್ನೇ ಸಿಕ್ಸ್ ಬಾರಿಸುವ ಮೂಲಕ ಐಪಿಎಲ್ ಪದಾರ್ಪಣೆ ಪಂದ್ಯದಲ್ಲೇ ಅಚ್ಚರಿ ಮೂಡಿಸಿದರು. ಆ ಎಸೆತವನ್ನು ಎಸೆದದ್ದು ಅನುಭವಿ ಬೌಲರ್ ಶಾರ್ದೂಲ್ ಠಾಕೂರ್.

ಸಚಿನ್ ತೆಂಡೂಲ್ಕರ್ ನಂತರ ಕ್ರಿಕೆಟ್ ಜಗತ್ತು ಅವರಂತಹ ಯುವ ಪ್ರತಿಭೆಯನ್ನು ನೋಡಿಲ್ಲ. ಆದರೆ, ಇದೀಗ ಸೂರ್ಯವಂಶಿ ಮುಂದಿನ 2 ವರ್ಷಗಳಲ್ಲಿ ಟೀಂ ಇಂಡಿಯಾಗೆ ಪ್ರವೇಶ ಮಾಡುತ್ತಾರೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ಊಹಿಸುತ್ತಿದ್ದಾರೆ. ಏಕೆಂದರೆ, ಅವರು ಈಗಾಗಲೇ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರವನ್ನು ಪ್ರತಿನಿಧಿಸಿದ್ದಾರೆ. ಈ ಹಂತದಲ್ಲಿ, ಅವರಿಗೆ ಆಕಾಶವೇ ಮಿತಿ.

ಭಾರತದ ಮಾಜಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಲಿಫ್ಟ್ ಅನ್ನು ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಅವರ ಶೈಲಿಗೆ ಹೋಲಿಸಿದ್ದಾರೆ. ಸೂರ್ಯವಂಶಿ ಲಾರಾ ಅವರೊಂದಿಗೆ ಮಾತನಾಡಿ ಅವರ ಅನುಭವದಿಂದ ಕಲಿಯುವುದು ಪ್ರಯೋಜನಕಾರಿಯಾಗಬಹುದು ಎಂದು ಸಲಹೆ ನೀಡಿದರು.

'ಅವರ ಬ್ಯಾಟಿಂಗ್ ವೇಗ ಅಸಾಧಾರಣ. ಜೋ ಉಸ್ಕ ವಿಪ್ ಆತಾ ಹೈ (ಅವರ ಬ್ಯಾಟಿಂಗ್ ವಿಪ್) ... ಯಾರೂ ಅದನ್ನು ಬದಲಾಯಿಸಬಾರದು ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮವಾಗಬೇಕು. ಲಾರಾ ಅವರಂತಹ ಯಾರಾದರೊಂದಿಗೆ ಅವರು ಮಾತನಾಡಬೇಕು. ಅವರು ಇದೇ ರೀತಿಯ ಬ್ಯಾಟ್ ಲಿಫ್ಟ್ ಅನ್ನು ಹೊಂದಿದ್ದರು. ಆದ್ದರಿಂದ, ಡಿಫೆಂಡ್ ಮಾಡುವಾಗ ಮತ್ತು ಸಾಫ್ಟ್ ಕೈಯಿಂದ ಆಡುವಾಗ ಬ್ಯಾಟ್ ವೇಗವನ್ನು ಹೇಗೆ ನಿಯಂತ್ರಿಸಬೇಕೆಂದು ಅವರು ಕಲಿಯಬಹುದು. ಅವರು ಅದನ್ನು ಕಲಿತರೆ, ಅವರು ಅಸಾಧಾರಣ ಪ್ರತಿಭೆಯಾಗುತ್ತಾರೆ' ಎಂದು ಶುಭಂಕರ್ ಮಿಶ್ರಾ ಅವರ ಅನ್‌ಪ್ಲಗ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ರಾಯುಡು ಹೇಳಿದರು.

Vaibhav Suryavanshi
U19 ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ವೈಯಕ್ತಿಕ ತರಬೇತಿ ಆರಂಭಿಸಿದ ವೈಭವ್ ಸೂರ್ಯವಂಶಿ

ರಾಯುಡು ನೀಡಿದ ಈ ಸಲಹೆ ಸೂರ್ಯವಂಶಿಗೆ ಅಲ್ಲ, ಬದಲಾಗಿ ಅವರಿಗೆ ತರಬೇತಿ ನೀಡುವವರಿಗೆ. ವಿಷಯಗಳನ್ನು ಸರಳವಾಗಿ ಇಡಬೇಕು. ರಾಜಸ್ಥಾನ್ ರಾಯಲ್ಸ್‌ ಪರ ಆಡುವ ವೈಭವ್ ಸೂರ್ಯವಂಶಿ ಅವರಿಗೆ ಮಾರ್ಗದರ್ಶಕರಾಗಿ ರಾಹುಲ್ ದ್ರಾವಿಡ್ ಇದ್ದು, ಅವರ ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ ಎಂದು ರಾಯುಡು ಭಾವಿಸುತ್ತಾರೆ.

'ಅವರು ಒಂದೇ ವಿಷಯದ ಮೇಲೆ ಗಮನ ಹರಿಸಬೇಕು; ಅಂದರೆ, ಅವರು ಅನೇಕ ಜನರ ಮಾತನ್ನು ಕೇಳಬಾರದು. ಜನರ ಮಾತನ್ನು ಕೇಳಬೇಡಿ; ನಿಮ್ಮ ಪ್ರತಿಭೆಯನ್ನು ಬೆಂಬಲಿಸಿ ಮತ್ತು ತರಬೇತುದಾರರಿಗೂ ಸಹ, ಉಸ್ಕೋ ಜ್ಯಾದಾ ಗ್ಯಾನ್ ಮತ್ ಡು (ಬೋಧನೆಗಳಿಂದ ಅವನ ಮೇಲೆ ಹೆಚ್ಚಿನ ಹೊರೆ ಹಾಕಬೇಡಿ). ಅವನನ್ನು ಬಿಟ್ಟುಬಿಡಿ' ಎಂದಿದ್ದಾರೆ.

'ಅಗರ್ ಸಂಭಾಲ್ ಕೆ ಉಸ್ಕೋ ಸಹಿ ಗೈಡ್ ಕರೇಂಗೆ (ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ) ಅವರು ಅಸಾಧಾರಣ ಪ್ರತಿಭೆ ... ರಾಹುಲ್ (ದ್ರಾವಿಡ್) ಭಾಯ್ ಅವರೊಂದಿಗೆ ಇರುವುದು ಅವರ ಅದೃಷ್ಟ. ಅವರು ಅವರನ್ನು ನೋಡಿಕೊಳ್ಳುತ್ತಾರೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com