ಟಿ20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಔಟ್; ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!

ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.
Sanju Samson
ಸಂಜು ಸ್ಯಾಮ್ಸನ್
Updated on

ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಆಗ್ಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ಮಾಡಿದ ಪೋಸ್ಟ್‌ಗಳು ವೈರಲ್ ಆಗುತ್ತಿರುತ್ತವೆ. 2026ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಹಳೆಯ 2019ರ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಗೌತಮ್ ಗಂಭೀರ್ ಟೀಂ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಆದರೆ, ಅವರು ಭಾರತೀಯ ತಂಡದ ಮುಖ್ಯ ತರಬೇತುದಾರರಾದಾಗ, ಕೇರಳದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ ವಿಚಾರದಲ್ಲಿ ತಾವು ಹೇಳಿದ್ದನ್ನೇ ಕಾರ್ಯಗತಗೊಳಿಸಲು ವಿಫಲರಾದರು.

ಶುಭಮನ್ ಗಿಲ್ ಅವರು ಟಿ20 ಕ್ರಿಕೆಟ್‌ಗೆ ಮರಳಿದ ಬಳಿಕ ಸಂಜು ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ತಳ್ಳಲಾಯಿತು. ಇದೀಗ ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಯಾಮ್ಸನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮತ್ತೆ ಬಡ್ತಿ ಪಡೆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ್ ಅವರ ಪೋಸ್ಟ್ ಮತ್ತೆ ಕಾಣಿಸಿಕೊಂಡಿತು.

ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ 'ತಂಡದ ಸಂಯೋಜನೆ' ಮತ್ತು 'ವಿಕೆಟ್ ಕೀಪರ್-ಓಪನರ್‌ಗಳ' ಬಯಕೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾರೆ. ಆದರೆ, ಈ ನಡೆ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ.

ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟ ನಂತರ, ಆಯ್ಕೆದಾರರ ಗಮನ ಇದೀಗ ಸಂಜು ಸ್ಯಾಮ್ಸನ್ ಕಡೆಗೆ ಮರಳಿದೆ. ರೋಲರ್ ಕೋಸ್ಟರ್ ವೃತ್ತಿಜೀವನದ ಹೊರತಾಗಿಯೂ, ಒಂದೇ ವರ್ಷದಲ್ಲಿ ಮೂರು T20I ಶತಕ ಬಾರಿಸಿದ ಸ್ಯಾಮ್ಸನ್ ಅವರ ಇತ್ತೀಚಿನ ಫಾರ್ಮ್ ಅಂತಿಮವಾಗಿ ಆಯ್ಕೆದಾರರ ಕಣ್ಣಿಗೆ ಕಾಣಿಸುವಂತೆ ಮಾಡಿದೆ.

Sanju Samson
ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಶುಭಮನ್ ಗಿಲ್ ಫಾರ್ಮ್ ಸಮಸ್ಯೆ; ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ?

ಗೌತಮ್ ಗಂಭೀರ್ ಅವರ ಟ್ವೀಟ್ 2019ರ ಮಾರ್ಚ್ 29 ರಂದು ಮಾಡಿದ್ದು. ಸ್ಯಾಮ್ಸನ್ ಅವರ ಜನಪ್ರಿಯತೆಯು ಉತ್ತುಂಗಕ್ಕೇರಿದ್ದ ಸಮಯದಲ್ಲಿ, ಗಂಭೀರ್ ಹೀಗೆ ಬರೆದಿದ್ದಾರೆ: 'ನಾನು ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ವ್ಯಕ್ತಿಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ, ಅವರ ಕೌಶಲ್ಯಗಳನ್ನು ನೋಡಿದಾಗ, ಸಂಜು ಸ್ಯಾಮ್ಸನ್ ಸದ್ಯ ಭಾರತದ ಅತ್ಯುತ್ತಮ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂದು ಗಮನಿಸಲು ನನಗೆ ಸಂತೋಷವಾಗಿದೆ. ನನಗೆ, ಅವರು ವಿಶ್ವಕಪ್‌ನಲ್ಲಿ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು' ಎಂದಿದ್ದರು.

ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಸ್ಯಾಮ್ಸನ್ ತನ್ನ ಸಾಂಪ್ರದಾಯಿಕ ಆರಂಭಿಕ ಸ್ಥಾನಕ್ಕೆ ಮರಳಿದ್ದಾರೆ. ಏಕೆಂದರೆ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಪರಿವರ್ತಿಸುವ ಮ್ಯಾನೇಜ್‌ಮೆಂಟ್‌ನ ಪ್ರಯತ್ನವು ಸಂಪೂರ್ಣವಾಗಿ ವಿಫಲವಾಯಿತು. ಭಾರತೀಯ T20I ತಂಡದಲ್ಲಿ ಸ್ಯಾಮ್ಸನ್ ಅವರನ್ನು ನಂ. 4 ಆಯ್ಕೆಯಾಗಿ ನೋಡಿದರೂ, ಅವರನ್ನು ಮತ್ತೆ ಆರಂಭಿಕ ಆಟಗಾರನನ್ನಾಗಿ ಮಾಡದೆ ಬೇರೆ ದಾರಿಯಿರಲಿಲ್ಲ.

ಸೂರ್ಯಕುಮಾರ್ ಯಾದವ್ ಅವರ ಉಪನಾಯಕನಾಗಿ ಸೇವೆ ಸಲ್ಲಿಸಿದ ನಂತರ, ಗಿಲ್ ಅವರನ್ನು ಟಿ20 ಸ್ವರೂಪದಲ್ಲಿಯೂ ಸಹ ಭಾರತೀಯ ನಾಯಕತ್ವದ ಭವಿಷ್ಯವೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, 2025ರ ಏಷ್ಯಾ ಕಪ್ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಸಮಯದಲ್ಲಿ ಕಳಪೆ ಪ್ರದರ್ಶನದಿಂದಾಗಿ ಅವರ ಮೇಲಿನ ನಿರೀಕ್ಷೆಗಳು ಕುಸಿದಿವೆ.

'ಖ್ಯಾತಿ'ಗಿಂತ ಉದ್ದೇಶಕ್ಕೆ ಆದ್ಯತೆ ನೀಡುವ ಮ್ಯಾನೇಜ್‌ಮೆಂಟ್‌ನ ನಿರ್ಧಾರವು ಗಂಭೀರ್ ಯುಗದ ವಿಶಿಷ್ಟ ಲಕ್ಷಣವಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರನ್ನು ಆರಂಭಿಕ ಕ್ರಮಾಂಕದಲ್ಲಿ ಆಯ್ಕೆ ಮಾಡುವ ಮೂಲಕ, ಭಾರತವು ಹೆಚ್ಚಿನ ಅಪಾಯದ, ಹೆಚ್ಚಿನ ಪ್ರತಿಫಲ ನೀಡುವ T20 ತಂತ್ರದತ್ತ ಬದಲಾವಣೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com