Virat Kohli - Shubman Gill
ವಿರಾಟ್ ಕೊಹ್ಲಿ - ಶುಭಮನ್ ಗಿಲ್

'ಅವರ ವರ್ತನೆ ಇಷ್ಟವಾಗಲಿಲ್ಲ': ಶುಭಮನ್ ಗಿಲ್‌ರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ ಇಂಗ್ಲೆಂಡ್‌ನ ಮಾಜಿ ಆಟಗಾರ

ನಾಯಕನಾಗಿ ಈ ರೀತಿಯ ನಡವಳಿಕೆ ಸರಿಯಲ್ಲ. ನಾನು ಮೊದಲೇ ಹೇಳಿದಂತೆ, ಇದು ಹಿಂದಿನ ನಾಯಕನನ್ನು ನೆನಪಿಸುತ್ತದೆ.
Published on

ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ 3ನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸಮಯ ವ್ಯರ್ಥ ಮಾಡಲು ಮುಂದಾದಾಗ ಟೀಂ ಇಂಡಿಯಾದ ನಾಯಕ ಶುಭಮನ್ ಗಿಲ್ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಂತೆ ಕಾಣುತ್ತಿದ್ದರು. ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಸಮಯ ವ್ಯರ್ಥ ಮಾಡಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಜ್ಯಾಕ್ ಕ್ರಾಲಿ ವಿರುದ್ಧ ಕಿಡಿಕಾರಿದರು. ಈ ವೇಳೆ ಬೆನ್ ಡಕೆಟ್ ಮಧ್ಯೆಪ್ರವೇಶಿಸಿದರು. ಕೊನೆಯ ಓವರ್ ಉದ್ವಿಗ್ನತೆಗೆ ತಿರುಗಿದ ಕಾರಣ, ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಗಿಲ್ ಅವರನ್ನು ಟೀಕಿಸಿದ್ದಾರೆ. ಅವರ ವರ್ತನೆಗಳು ಭಾರತದ ಮತ್ತೊಬ್ಬ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ನೆನಪಿಸುತ್ತವೆ ಎಂದು ಹೇಳಿದರು.

ಜಿಯೋಸ್ಟಾರ್ ಜೊತೆಗಿನ ಸಂಭಾಷಣೆಯಲ್ಲಿ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಮೇಲೆ ಗಿಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಟೀಕಿಸಿದ ಅವರು, ಇಂತಹ ಕ್ರಮಗಳು ಕ್ರೀಡೆಯು ತನ್ನ ಆಟದ ಮನೋಭಾವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.

'ಆಟಗಾರರು ತಂತ್ರಗಳನ್ನು ಬಳಸುವುದು ಅಥವಾ ಆಟದ ಉತ್ಸಾಹವನ್ನು ತಗ್ಗಿಸುವುದು ಕಾನೂನುಬಾಹಿರವಲ್ಲ, ಆದರೆ ಸಂಪೂರ್ಣವಾಗಿ ಕ್ರೀಡೆಯೂ ಅಲ್ಲ. ಇಂಗ್ಲೆಂಡ್ ಫೀಲ್ಡಿಂಗ್ ಮಾಡುವಾಗ ಏನಾಯಿತು, ಅವರು ಭಾರತೀಯ ಆಟಗಾರರನ್ನು ಕೆಣಕಿದರೋ ಎಂಬುದು ನಮಗೆ ತಿಳಿದಿಲ್ಲ. ಆದರೆ ನನಗೆ ಶುಭ್‌ಮನ್ ಗಿಲ್ ಅವರ ವರ್ತನೆ ಇಷ್ಟವಾಗಲಿಲ್ಲ. ನಾಯಕನಾಗಿ ಈ ರೀತಿಯ ನಡವಳಿಕೆ ಸರಿಯಲ್ಲ. ನಾನು ಮೊದಲೇ ಹೇಳಿದಂತೆ, ಇದು ಹಿಂದಿನ ನಾಯಕನನ್ನು ನೆನಪಿಸುತ್ತದೆ. ಅವರು ಎದುರಾಳಿಗಳ ಮುಖಕ್ಕೆ ಹೇಳುತ್ತಿದ್ದರು. ಆಟವು ಹೀಗಿರಬಾರದು. ನಾನು ಮೈದಾನದಲ್ಲಿ ಸ್ಪರ್ಧಾತ್ಮಕ ಮತ್ತು ಕಠಿಣವಾಗಿರಲು ಇಷ್ಟಪಡುತ್ತೇನೆ. ಆದರೆ, ಕೆಲವೊಮ್ಮೆ ನೀವು ಅದನ್ನು ಮೀರಿ ಮೇಲೇರಬೇಕಾಗುತ್ತದೆ' ಎಂದರು.

Virat Kohli - Shubman Gill
'ನೀನು ಇಲ್ಲಿಂದ ಹೋಗು': ಪಂದ್ಯದ ನಡುವೆ ಮೈದಾನದಲ್ಲೇ ಅಂಪೈರ್ ಜೊತೆ Shubman Gill ಜಗಳ, ಚೆಂಡನ್ನು ಕಿತ್ತುಕೊಂಡು ಆಕ್ರೋಶ, Video!

ಮೊದಲ ಇನಿಂಗ್ಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆಯೂ ಟ್ರಾಟ್ ಮೆಚ್ಚುಗೆ ವ್ಯಕ್ತಪಡಿಸಿದರು.

'ಅವರು ಕೆಟ್ಟ ಬಾಲ್‌ಗಳನ್ನು ದೂರವಿಟ್ಟ ರೀತಿ - ಅದು ಪ್ರಭಾವಶಾಲಿಯಾಗಿತ್ತು. ಕೆಲವೊಮ್ಮೆ, ಅವರು ತುಂಬಾ ಜಾಗರೂಕರಾಗಿದ್ದರು. ವಿಶೇಷವಾಗಿ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿದ್ದರು. ಉತ್ತಮ ಶಾಟ್‌ಗಳನ್ನು ಆಡಿದರು ಮತ್ತು ಲಭ್ಯವಿದ್ದಾಗ ಸಿಂಗಲ್ಸ್ ಪಡೆದರು. ಆದರೆ, ಮುಖ್ಯ ವಿಷಯವೆಂದರೆ ಕೆಟ್ಟ ಎಸೆತಗಳನ್ನು ದೂರವಿಡುವುದು. ಅದು ಯಾವಾಗಲೂ ಗುಣಮಟ್ಟದ ಆಟಗಾರರ ಸಂಕೇತವಾಗಿದೆ. ಕಠಿಣ ಸ್ಪೆಲ್‌ಗಳಿಂದ ಬದುಕುಳಿಯುವುದು ಮತ್ತು ತಪ್ಪು ಸಂಭವಿಸಿದಾಗ ಎದುರಾಳಿಗಳ ಮೇಲೆ ಒತ್ತಡ ಹೇರುವುದು ಮುಖ್ಯ. ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಅದನ್ನು ನಿಜವಾಗಿಯೂ ಚೆನ್ನಾಗಿ ಮಾಡುವುದನ್ನು ನಾವು ಖಂಡಿತವಾಗಿಯೂ ನೋಡಿದ್ದೇವೆ' ಎಂದು ಟ್ರಾಟ್ ಹೇಳಿದರು.

ಪಂದ್ಯಕ್ಕೆ ಎರಡು ದಿನಗಳ ಆಟ ಬಾಕಿ ಇರುವಾಗ, 4 ನೇ ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ಅತ್ಯಂತ ಜಾಗರೂಕರಾಗಿರುತ್ತದೆ ಎಂದು ಟ್ರಾಟ್ ನಿರೀಕ್ಷಿಸುತ್ತಾರೆ. ಬುಮ್ರಾ ವಿರುದ್ಧದ ತಂತ್ರವು ಆಟವನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

'ಇಂಗ್ಲೆಂಡ್ ಹೊಸ ಚೆಂಡನ್ನು ಎದುರಿಸಬೇಕಾಗುತ್ತದೆ. ಇದು ಕಠಿಣ ಹೋರಾಟವಾಗಲಿದೆ ಮತ್ತು ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿರುವುದರಿಂದ, ಪೂರ್ಣ ದಿನದ ಆಟ ನಡೆಯುವ ಸಾಧ್ಯತೆಯಿದೆ. ಬುಮ್ರಾ ಲಯಕ್ಕೆ ಬರದಂತೆ ಅವರು ಖಚಿತಪಡಿಸಿಕೊಳ್ಳಬೇಕು. ನೇರವಾಗಿ ಮತ್ತು ಬಿಗಿಯಾಗಿ ಆಡುವುದು ಮುಖ್ಯ. ಇಂದು ಸ್ವಲ್ಪ ಸ್ವಿಂಗ್ ಇತ್ತು. 4 ನೇ ದಿನದಂದು ಭಾರತ ಏನೇ ತಂತ್ರ ಹೂಡಿದರೂ, ಇಂಗ್ಲೆಂಡ್‌ಗೆ ಸ್ಪಷ್ಟ ಉತ್ತರಗಳು ಬೇಕಾಗುತ್ತವೆ' ಎಂದು ಟ್ರಾಟ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com