CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!

ಭಾರತ ಟ್ರೋಫಿಯನ್ನು ಗೆದ್ದಾಗ ಅವರ ಗೆಲುವು ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ ಎಂದು ಅವರಿಗೆ ತಿಳಿಯುತ್ತದೆ.
CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!
Updated on

ನವದೆಹಲಿ: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದ್ದಕ್ಕಾಗಿ ಟೀಕೆಗೆ ಗುರಿಯಾಗುತ್ತಿದೆ. ಆದಾಗ್ಯೂ, ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರತೀಯ ತಂಡದ ಬಗ್ಗೆ ಪ್ರಶ್ನೆಗಳನ್ನು ಎತ್ತುವವರನ್ನು ಗುರಿಯಾಗಿಸಿಕೊಂಡಿದ್ದರು. ದುಬೈನಲ್ಲಿ ಆಡುವುದರಿಂದ ಭಾರತಕ್ಕೆ ಯಾವುದೇ ಹೆಚ್ಚುವರಿ ಪ್ರಯೋಜನವಾಗಲಿಲ್ಲ ಎಂದು ಅವರು ವಾದಿಸಿದ್ದರು. ಈಗ ದಕ್ಷಿಣ ಆಫ್ರಿಕಾದ ಮಾಧ್ಯಮಗಳು ಈ ವಿಷಯದ ಬಗ್ಗೆ ಗಂಭೀರ್ ಅವರನ್ನು ಗುರಿಯಾಗಿಸಿಕೊಂಡಿದ್ದು ಅವರ ಹೇಳಿಕೆ ದುರಹಂಕಾರದಿಂದ ತುಂಬಿದೆ ಎಂದು ಕರೆದಿವೆ.

ರಾಜಕೀಯ ಕಾರಣಗಳಿಂದಾಗಿ ಭಾರತ ತಂಡವು ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲಿಲ್ಲ. ಇದರಿಂದಾಗಿ ಐಸಿಸಿಯು ಭಾರತೀಯ ತಂಡದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ನಿಗದಿಪಡಿಸುವಂತೆ ಒತ್ತಾಯಿಸಿತು. ಆದರೆ ಇತರ ತಂಡಗಳು ಪಾಕಿಸ್ತಾನ ಮತ್ತು ದುಬೈ ನಡುವೆ ಪ್ರಯಾಣಿಸಬೇಕಾಗಿತ್ತು. ವಿಶೇಷವಾಗಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನು ಮೊದಲು ದುಬೈಗೆ ಕರೆತರಲಾಯಿತು. ನಂತರ ದಕ್ಷಿಣ ಆಫ್ರಿಕಾ ಕೇವಲ 12 ಗಂಟೆಗಳಲ್ಲಿ ಪಾಕಿಸ್ತಾನಕ್ಕೆ ಹಿಂತಿರುಗಬೇಕಾಯಿತು. ಭಾರತವು ಎರಡು ರೀತಿಯಲ್ಲಿ ಪ್ರಯೋಜನ ಪಡೆಯಿತು ಎಂದು ವಿಮರ್ಶಕರು ನಂಬುತ್ತಾರೆ. ಮೊದಲನೆಯದಾಗಿ, ಪ್ರಯಾಣದ ಅನಾನುಕೂಲತೆಯನ್ನು ಅದು ಎದುರಿಸಬೇಕಾಗಿಲ್ಲ, ಮತ್ತು ಎರಡನೆಯದಾಗಿ, ದುಬೈನಲ್ಲಿನ ಪರಿಸ್ಥಿತಿಗಳ ಬಗ್ಗೆ ಭಾರತ ಚೆನ್ನಾಗಿ ಅರಿತುಕೊಂಡಿದೆ ಅಂತ.

ಈ ಬಗ್ಗೆ ಗೌತಮ್ ಗಂಭೀರ್ ಮಾತನಾಡಿದ್ದು, ವಿಮರ್ಶಕರನ್ನು ಯಾವಾಗಲೂ ಗೊಣಗುವವರು ಎಂದು ಕರೆದರು. 'ಏನು ಅನ್ಯಾಯದ ಪ್ರಯೋಜನ?' ನಾವು ಇಲ್ಲಿ ಒಂದು ದಿನವೂ ಅಭ್ಯಾಸ ಮಾಡಲಿಲ್ಲ. ನಾವು ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದೆವೆ. ಅಲ್ಲಿನ ಪಿಚ್ ಮತ್ತು ಕ್ರೀಡಾಂಗಣದಲ್ಲಿನ ಪಿಚ್ 180 ಡಿಗ್ರಿಗಳಷ್ಟು ಭಿನ್ನವಾಗಿದೆ ಎಂದು ಹೇಳಿದ್ದರು.

ದಕ್ಷಿಣ ಆಫ್ರಿಕಾದ ಮಾಧ್ಯಮ ವೆಬ್‌ಸೈಟ್ iol.co.za ನಲ್ಲಿ ಪ್ರಕಟವಾದ ಲೇಖನವು ಗಂಭೀರ್ ಅವರ ಹೇಳಿಕೆಯನ್ನು "ದುರಹಂಕಾರದಿಂದ ತುಂಬಿದೆ" ಎಂದು ಬಣ್ಣಿಸಿದೆ. ಐಸಿಸಿ ಅಕಾಡೆಮಿ ಮತ್ತು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ನಡುವೆ ಕೆಲವೇ ನೂರು ಮೀಟರ್ ಅಂತರವಿದೆ ಎಂದು ವರದಿ ಹೇಳಿದೆ. ಆದರೆ ಗಂಭೀರ್ ಅದನ್ನು 'ಸ್ವರ್ಗ ಮತ್ತು ಭೂಮಿಯ ನಡುವಿನ ವ್ಯತ್ಯಾಸ' ಎಂದು ಕರೆಯುತ್ತಿದ್ದಾರೆ.

ಇದಲ್ಲದೆ, ಭಾರತದ ಅನುಕೂಲದ ವಿಷಯವನ್ನು ಮೊದಲು ಎತ್ತಿದ್ದ ನಾಸರ್ ಹುಸೇನ್ ಮತ್ತು ಮೈಕ್ ಅಥರ್ಟನ್ ಅವರ ಬಗ್ಗೆ ಗಂಭೀರ್ ಮಾಡಿದ ಕಟುವಾದ ಹೇಳಿಕೆಗಳಿಗೂ ಟೀಕೆಗಳು ವ್ಯಕ್ತವಾಗಿದ್ದವು. "ಇತರ ತಂಡಗಳಿಗೆ ಹೋಲಿಸಿದರೆ ಒಂದೇ ಸ್ಥಳದಲ್ಲಿ ಉಳಿದು ಒಂದೇ ಕ್ರೀಡಾಂಗಣದಲ್ಲಿ ಆಡುವುದು ಅನುಕೂಲಕರವಾಗಿದೆ ಎಂಬುದು ಸ್ಪಷ್ಟವಾಗಿದ್ದಾಗ, ಅದು ಒಂದು ದೊಡ್ಡ ಹೇಳಿಕೆಯಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!
Champions Trophy 2025: 'ಮಹಾಭಾರತ' ಹೋಲಿಕೆ; 'ಕೃಷ್ಣ ನಿಮ್ಮ ಪರವಾಗಿದ್ದರೆ...'; ದುಬೈ ಪಿಚ್ 'ಅನುಕೂಲ'; ಗಂಭೀರ್ ವಿರುದ್ಧ ಶಮಿ ಗರಂ!

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಟೂರ್ನಿಯಲ್ಲಿ ಇದುವರೆಗಿನ ಅಜೇಯ ಓಟವನ್ನು ಮುಂದುವರಿಸುವ ಗುರಿ ಹೊಂದಿದೆ. ಭಾನುವಾರ ದುಬೈ ರಾತ್ರಿಯಂದು ದಿಟ್ಟ ವಿಜೇತರು ಟ್ರೋಫಿಯನ್ನು ಎತ್ತಿದಾಗ, ಅವರ ಗೆಲುವು ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ ಎಂದು ಅವರಿಗೆ ತಿಳಿಯುತ್ತದೆ. ಅವರು ಎಷ್ಟೇ ಕಠಿಣ ಹೇಳಿಕೆಗಳನ್ನು ನೀಡಿದರೂ, ಪ್ರತಿ ಬಾರಿ ತಮ್ಮ ಡ್ರೆಸ್ಸಿಂಗ್ ರೂಂನಲ್ಲಿ ಟ್ರೋಫಿಯನ್ನು ನೋಡಿದಾಗಲೂ, ಈ ವಿಜಯದ ಸುತ್ತಲಿನ ಚರ್ಚೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com