
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಹಿನ್ನೆಲೆಯಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪುನರಾರಂಭಗೊಳ್ಳುವ ಬಗ್ಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಐಪಿಎಲ್ 2025 ನ್ನು ಶುಕ್ರವಾರ (ಏ.09 ರಿಂದ) ಒಂದು ವಾರ ಸ್ಥಗಿತಗೊಳಿಸಲಾಗಿತ್ತು.
ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಐಪಿಎಲ್ ನ್ನು 'ತಕ್ಷಣ' ಪುನರಾರಂಭಿಸುವ ಸಾಧ್ಯತೆಯನ್ನು ಬಿಸಿಸಿಐ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
ಲೀಗ್ ನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಬಿಸಿಸಿಐ ಘೋಷಿಸಿದ ನಂತರ ಐಪಿಎಲ್ ಫ್ರಾಂಚೈಸಿಗಳಲ್ಲಿ ಹೆಚ್ಚಿನ ವಿದೇಶಿ ನೇಮಕಾತಿದಾರರು ಶನಿವಾರ ತಮ್ಮ ದೇಶಗಳಿಗೆ ತೆರಳಿದರು.
"ಕದನ ವಿರಾಮವನ್ನು ಇದೀಗ ಘೋಷಿಸಲಾಗಿದೆ. ಐಪಿಎಲ್ ನ್ನು ಪುನರಾರಂಭಿಸಿ ಕೊನೆಗೊಳಿಸುವ ಸಾಧ್ಯತೆಯನ್ನು ನಾವು ಈಗ ಪರಿಶೀಲಿಸುತ್ತಿದ್ದೇವೆ. ತಕ್ಷಣ ನಡೆಸಲು ಸಾಧ್ಯವಾದರೆ, ಸ್ಥಳದ ದಿನಾಂಕಗಳು ಮತ್ತು ಎಲ್ಲವನ್ನೂ ನಾವು ನಿರ್ಧರಿಸಬೇಕಾಗಿದೆ. ತಂಡದ ಮಾಲೀಕರು, ಪ್ರಸಾರಕರು ಮತ್ತು ಒಳಗೊಂಡಿರುವ ಎಲ್ಲರೂ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತೇವೆ ಮತ್ತು ಹೇಗೆ ಮುಂದುವರಿಯುವುದು ಎಂಬುದರ ಕುರಿತು ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ನಾವು ಸರ್ಕಾರದೊಂದಿಗೆ ಸಮಾಲೋಚಿಸಬೇಕಾಗುತ್ತದೆ" ಎಂದು ಧುಮಾಲ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ (TOI) ನಲ್ಲಿನ ವರದಿಯ ಪ್ರಕಾರ, ಐಪಿಎಲ್ 2025 ಏ.15- 16 ರೊಳಗೆ ಪುನರಾರಂಭವಾಗುವ ಸಾಧ್ಯತೆಯಿದೆ.
"ಗಡಿಯಾಚೆಗಿನ ಉದ್ವಿಗ್ನತೆಯಿಂದಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಶ್ರೀಮಂತ ಲೀಗ್ ನ್ನು ಸ್ಥಗಿತಗೊಳಿಸಿತ್ತು ಆದರೆ ಈಗ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಪ್ರತಿಯೊಂದು ಫ್ರಾಂಚೈಸಿಯ ವಿದೇಶಿ ಆಟಗಾರರು ಮನೆಗೆ ಮರಳುತ್ತಿದ್ದಾರೆ ಆದರೆ ಆದಷ್ಟು ಬೇಗ ತಮ್ಮ ತಂಡಗಳನ್ನು ಸೇರಲು ಕೇಳಲಾಗುತ್ತದೆ" ಎಂದು ವರದಿ ತಿಳಿಸಿದೆ.
ಬಿಸಿಸಿಐ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಫ್ರಾಂಚೈಸಿಗಳು ಈಗ ತಮ್ಮ ವ್ಯವಸ್ಥೆಗಳನ್ನು ಪ್ರಾರಂಭಿಸುತ್ತವೆ ಎಂದು ವರದಿ ತಿಳಿಸಿದೆ.
Advertisement