ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಭೇಟಿಯಾದ ಶುಭಮನ್ ಗಿಲ್; ಮುಂದಿನ ಟೀಂ ಇಂಡಿಯಾ ನಾಯಕ ಫಿಕ್ಸ್?

ಇಂಗ್ಲೆಂಡ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ರೋಹಿತ್ ನಿರ್ಧಾರ ಬಿಸಿಸಿಐಗೆ ಸಂಕಷ್ಟ ತಂದಿದೆ.
ಶುಭಮನ್ ಗಿಲ್
ಶುಭಮನ್ ಗಿಲ್
Updated on

ಮುಂದಿನ ಟೆಸ್ಟ್ ನಾಯಕನಾಗುವ ಸಾಧ್ಯತೆ ಇರುವ ಭಾರತ ಕ್ರಿಕೆಟ್ ತಂಡದ ತಾರೆ ಶುಭಮನ್ ಗಿಲ್ ಅವರು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಟೆಸ್ಟ್‌ನಿಂದ ನಿವೃತ್ತಿ ಹೊಂದುವ ರೋಹಿತ್ ಶರ್ಮಾ ಅವರ ಹಠಾತ್ ನಿರ್ಧಾರದ ನಂತರ ಪಂಜಾಬ್ ಬ್ಯಾಟ್ಸ್‌ಮನ್ ಅನ್ನು ಗಂಭೀರ್ ಅವರು ನಾಯಕನನ್ನಾಗಿ ನೇಮಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಮೇ 23 ಅಥವಾ 24 ರಂದು ಘೋಷಿಸುವ ನಿರೀಕ್ಷೆಯಿದೆ.

ದೈನಿಕ್ ಜಾಗರಣ್ ಪ್ರಕಾರ, ತಂಡದ ಭವಿಷ್ಯದ ಮಾರ್ಗಸೂಚಿಯ ಕುರಿತು ಚರ್ಚಿಸಲು ಗಿಲ್ ಅವರು ಅಗರ್ಕರ್ ಮತ್ತು ಗಂಭೀರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಟೆಸ್ಟ್ ತಂಡವನ್ನು ನಿರ್ಧರಿಸಲು ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆದಾರರು ಮೇ 23 ಅಥವಾ 24 ರಂದು ಸಭೆ ನಡೆಸುವ ನಿರೀಕ್ಷೆಯಿದೆ. ನಂತರ, ಹೊಸ ನಾಯಕನ ಘೋಷಣೆ ಮಾಡಲು ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ರೋಹಿತ್ ನಿರ್ಧಾರ ಬಿಸಿಸಿಐಗೆ ಸಂಕಷ್ಟ ತಂದಿದೆ. ವಿರಾಟ್ ಕೊಹ್ಲಿ ಅವರನ್ನೇ ನಾಯಕನನ್ನಾಗಿ ಮಾಡಲು ಆಯ್ಕೆದಾರರು ಬಯಸಿದ್ದಾರೆಂದು ವರದಿಗಳು ಸೂಚಿಸಿವೆ.

ಆದಾಗ್ಯೂ, ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಉದ್ದೇಶವನ್ನು ಬಿಸಿಸಿಐಗೆ ತಿಳಿಸಿದ್ದು, ಕೊಹ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಕೇಳಿಕೊಂಡಿದೆ ಎಂದು ವರದಿಯಾಗಿದೆ.

ಶುಭಮನ್ ಗಿಲ್
England Test series: ಮೇ 23ರಂದು ಟೀಂ ಇಂಡಿಯಾ ಹೊಸ ನಾಯಕ, ತಂಡ ಪ್ರಕಟ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com