IPL 2025: ಸರ್ಫರಾಜ್ ತಮ್ಮ ಮುಶೀರ್‌ ಖಾನ್‌ಗೆ 'ವಾಟರ್ ಬಾಯ್' ಎಂದು ಕರೆದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್

ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಸಹೋದರರಾಗಿರುವ ಮುಶೀರ್, ಕ್ವಾಲಿಫೈಯರ್ 1 ರಲ್ಲಿ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು ಮೈದಾನಕ್ಕೆ ಬಂದಾಗ, ವಿರಾಟ್ ಅವರನ್ನು ಕಿಚಾಯಿಸಿದರು.
ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದ ಬಳಿಕ ಯಶ್ ದಯಾಳ್ ಜೊತೆಗೆ ವಿರಾಟ್ ಕೊಹ್ಲಿ ಸಂಭ್ರಮಾಚರಣೆ
ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದ ಬಳಿಕ ಯಶ್ ದಯಾಳ್ ಜೊತೆಗೆ ವಿರಾಟ್ ಕೊಹ್ಲಿ ಸಂಭ್ರಮಾಚರಣೆ
Updated on

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಸಖತ್ ಎನರ್ಜಿಟಿಕ್ ಆಗಿ ಕಂಡುಬಂದರು. ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ತಂಡವನ್ನು ಮುನ್ನಡೆಸಲು ಮರಳಿದ್ದರು. ಉಪನಾಯಕ ಜಿತೇಶ್ ಶರ್ಮಾ ಅವರಿಂದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೂ, ಮೊದಲ ಕೆಲವು ಓವರ್‌ಗಳಲ್ಲಿ ಕೊಹ್ಲಿ ನಾಯಕನ ಜವಾಬ್ದಾರಿ ಹೊತ್ತುಕೊಂಡಿರುವಂತೆ ಕಂಡುಬಂತು. 36 ವರ್ಷದ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಪರಿಪೂರ್ಣ ತಂತ್ರಗಳನ್ನು ರೂಪಿಸಿದ್ದಲ್ಲದೆ, ಮೈದಾನದಲ್ಲಿ ತಮ್ಮ ಶಕ್ತಿ ಮತ್ತು ಉತ್ಸಾಹದಿಂದ ಎಲ್ಲರನ್ನೂ ಪ್ರೇರೇಪಿಸಿದರು.

ಪಂದ್ಯದ ವೇಳೆ ವಿರಾಟ್ ಕೊಹ್ಲಿ, ಪಂಜಾಬ್ ಬ್ಯಾಟ್ಸ್‌ಮನ್‌ಗಳನ್ನು ಕಿಚಾಯಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕುಸಿತ ಕಂಡಾಗ, ಪಂಜಾಬ್ ಕಿಂಗ್ಸ್ ತಂಡವು ಮುಶೀರ್ ಖಾನ್ ಅವರನ್ನು ಇಂಪ್ಯಾಕ್ಟ್ ಆಟಗಾರನಾಗಿ ಕರೆತಂದಿತು. ಆಗ ಕೊಹ್ಲಿ ಅವರನ್ನು ನಿರಂತರವಾಗಿ ಕಿಚಾಯಿಸಿದರು.

ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಸಹೋದರರಾಗಿರುವ ಮುಶೀರ್, ಕ್ವಾಲಿಫೈಯರ್ 1 ರಲ್ಲಿ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು ಮೈದಾನಕ್ಕೆ ಬಂದಾಗ, ವಿರಾಟ್ ಅವರನ್ನು 'ವಾಟರ್-ಬಾಯ್' ಎಂದು ಕರೆದರು. ಮುಶೀರ್ ಅವರು ಕೆಲವು ಓವರ್‌ಗಳ ಹಿಂದೆ ತಮ್ಮ ತಂಡದ ಆಟಗಾರರಿಗೆ ನೀರನ್ನು ನೀಡಲು ಮೈದಾನಕ್ಕೆ ಬಂದಿದ್ದರು. ಅದನ್ನಿಟ್ಟುಕೊಂಡು ಅವರು ಬ್ಯಾಟಿಂಗ್‌ಗೆ ಬಂದ ವೇಳೆ ಆರ್‌ಸಿಬಿ ದಿಗ್ಗಜ ಕೊಹ್ಲಿಯ ಈ ನಡೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.

ಪಂಜಾಬ್ ಕಿಂಗ್ಸ್‌ನ ಯುವ ಆಟಗಾರನನ್ನು 'ವಾಟರ್ ಬಾಯ್' ಎಂದು ಕರೆಯುವ ಮೂಲಕ ಕೊಹ್ಲಿ 'ನಿಂದಿಸಿದ್ದಾರೆ' ಎಂದು ಅಭಿಮಾನಿಗಳ ಒಂದು ವರ್ಗ ಆರೋಪಿಸಿದೆ. ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ಕೊಹ್ಲಿ ಮುಶೀರ್‌ಗೆ ತಮ್ಮ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದನ್ನು ಎತ್ತಿ ತೋರಿಸಿದ್ದಾರೆ. ಕೆಲವರು ಮುಶೀರ್ ಅವರು ವಿರಾಟ್‌ ಅವರನ್ನು ಬ್ಯಾಟರ್ ಆಗಿ ಪೂಜಿಸುತ್ತಾರೆ ಎಂಬ ಅಂಶವನ್ನು ಎತ್ತಿ ತೋರಿಸಿದರು.

ಪಂದ್ಯದ ವೇಳೆ ವಿರಾಟ್ ಬಳಸಿದ ಸನ್ನೆಗಳು ಮತ್ತು ಪದಗಳು ಸೇರಿದಂತೆ ಮೈದಾನದಲ್ಲಿ ಏನಾಯಿತು ಎಂಬುದು ಕೇವಲ ಕ್ರಿಕೆಟ್ ವ್ಯವಹಾರಗಳ ವಿಷಯವಾಗಿತ್ತು. ಕ್ವಾಲಿಫೈಯರ್ 1 ನಂತಹ ಹೈ ಪ್ರೊಫೈಲ್ ಪಂದ್ಯದಲ್ಲಿ, ಆಟಗಾರರು ಎದುರಾಳಿಗಳ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ. ಮುಶೀರ್ ಪಿಬಿಕೆಎಸ್‌ನ ಕೊನೆಯ ಗುರುತಿಸಲ್ಪಟ್ಟ ಬ್ಯಾಟರ್ ಆಗಿದ್ದರಿಂದ, ಕೊಹ್ಲಿ ತಮ್ಮ ತಂಡವನ್ನು ಸಂಪೂರ್ಣ ನಿಯಂತ್ರಣದಲ್ಲಿಡಲು ಎಲ್ಲ ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com