
2025ರ ಏಷ್ಯಾ ಕಪ್ ಫೈನಲ್ನಲ್ಲಿ ಟ್ರೋಫಿ ವಿವಾದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ನಡೆ ಸರಿಯಿಲ್ಲ ಎಂದಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಿಗ್ಗಜ ಎಬಿ ಡಿವಿಲಿಯರ್ಸ್ ಇದೀಗ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಫೈನಲ್ನಲ್ಲಿ ಭಾರತವು ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿ ಏಷ್ಯಾ ಕಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಆದರೆ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಭಾರತದ ಈ ನಿರ್ಧಾರಕ್ಕೆ ಡಿವಿಲಿಯರ್ಸ್ ವಿರೋಧ ವ್ಯಕ್ತಪಡಿಸಿದರು ಮತ್ತು ರಾಜಕೀಯವನ್ನು ಕ್ರೀಡೆಯಿಂದ ದೂರವಿಡಬೇಕು ಎಂದರು.
'ಟ್ರೋಫಿಯನ್ನು ಯಾರು ವಿತರಿಸುತ್ತಿದ್ದಾರೆ ಎಂಬುದರ ಬಗ್ಗೆ ಟೀಂ ಇಂಡಿಯಾ ಸ್ವಲ್ಪ ಮಟ್ಟಿಗೆ ಸಂತೋಷವಾಗಿರಲಿಲ್ಲ. ಅದು ಕ್ರೀಡೆಗೆ ಸೇರಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯವನ್ನು ಬದಿಗಿಡಬೇಕು. ಕ್ರೀಡೆ ಒಂದು ಪ್ರತ್ಯೇಕ ವಿಷಯ ಮತ್ತು ಅದು ಹೇಗಿದೆಯೋ ಹಾಗೆಯೇ ಆಚರಿಸಬೇಕು. ಅದನ್ನು ನೋಡಲು ತುಂಬಾ ದುಃಖವಾಗಿದೆ. ಆದರೆ, ಭವಿಷ್ಯದಲ್ಲಿ ಅವರು ಆ ವಿಷಯಗಳನ್ನು ಸರಿಪಡಿಸುತ್ತಾರೆ ಎಂದು ಆಶಿಸುತ್ತೇವೆ. ಇದು ಕ್ರೀಡೆ, ಆಟಗಾರರು, ಕ್ರೀಡಾಪಟುಗಳು, ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ಅದನ್ನು ನೋಡಲು ನಾನು ಇಷ್ಟಪಡುವುದಿಲ್ಲ. ಕೊನೆಯಲ್ಲಿ ಅದು ತುಂಬಾ ವಿಚಿತ್ರವಾಗಿತ್ತು' ಎಂದು ಡಿವಿಲಿಯರ್ಸ್ ಹೇಳಿದ್ದರು.
ಎಬಿ ಡಿವಿಲಿಯರ್ಸ್ ಅವರ ಅಭಿಪ್ರಾಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಟೀಕಿಸಿದ್ದಾರೆ.
ಎಬಿ ಡಿವಿಲಿಯರ್ಸ್ ಅವರನ್ನು ನೋಡಿ. ಐಪಿಎಲ್ ಸಮಯದಲ್ಲಿ ಅವರು ಹಣ ಸಂಪಾದಿಸಲು ಭಾರತಕ್ಕೆ ಬರುತ್ತಾರೆ. ನಾಚಿಕೆಯಿಲ್ಲದ ಫ್ರಾಂಚೈಸಿ ಅವರಿಗೆ ಹಣ ನೀಡುತ್ತದೆ. ಮತ್ತು ಮೊಹ್ಸಿನ್ ನಖ್ವಿ ಅವರ ಕೈಯಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ ಬಿಸಿಸಿಐ ನಿಲುವನ್ನು ಅವರು ಟೀಕಿಸುತ್ತಾರೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಭಾರತವನ್ನು ಟೀಕಿಸುವ ಮೂಲಕ ತಮ್ಮ ನಿಜವಾದ ಮುಖವನ್ನು ತೋರಿಸಿದ್ದಾರೆ ಮತ್ತು 'ಕ್ರಿಕೆಟ್ ಅನ್ನು ರಾಜಕೀಯದೊಂದಿಗೆ ಬೆರೆಸಬೇಡಿ' ಎಂದು ಹೇಳಿದ್ದಾರೆ. ಭಾರತಕ್ಕೆ ಉಪನ್ಯಾಸ ನೀಡಲು ಅವರು ಯಾರು? ಅದಕ್ಕಾಗಿಯೇ ಅವರು ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಗೆದ್ದಿಲ್ಲ. ಆರ್ಸಿಬಿ ಅಭಿಮಾನಿಗಳು ಯಾವುದೇ ಕಾರಣವಿಲ್ಲದೆ ಅವರನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದರು.
ಏಷ್ಯಾ ಕಪ್ ಟ್ರೋಫಿ ವಿವಾದವು ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಸಂಬಂಧಗಳು ಪಂದ್ಯಾವಳಿಯ ಉದ್ದಕ್ಕೂ ಕ್ರಿಕೆಟ್ ಅನ್ನು ಆವರಿಸಿತ್ತು. ಭಾರತವು ಅಜೇಯವಾಗಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಆದರೂ, ಭಾರತ ಪಾಕಿಸ್ತಾನದ ಆಟಗಾರರೊಂದಿಗೆ ಹ್ಯಾಂಡ್ಶೇಕ್ ಅನ್ನು ನಿರಾಕರಿಸಿತು. ಇದು ವಿವಾದಕ್ಕೆ ಕಾರಣವಾಯಿತು.
ಆದಾಗ್ಯೂ, ಭಾರತ ತಂಡವು ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿಯನ್ನು ಗೆದ್ದಿದ್ದರಿಂದ ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನವನ್ನು ಡಿವಿಲಿಯರ್ಸ್ ಶ್ಲಾಘಿಸಿದರು.
'ಅತ್ಯಂತ ಮುಖ್ಯವಾದುದರ (ಕ್ರಿಕೆಟ್ ಬಗ್ಗೆಯೇ) ಬಗ್ಗೆ ಮಾತ್ರ ಗಮನಹರಿಸೋಣ. ಭಾರತ ನಿಜವಾಗಿಯೂ ಬಲಿಷ್ಠವಾಗಿ ಕಾಣುತ್ತಿದೆ. ಆ ಟಿ20 ವಿಶ್ವಕಪ್ಗಾಗಿ ಹೋರಾಡುವುದು ಮುಖ್ಯ. ನೆನಪಿಡಿ, ಅದು ತುಂಬಾ ದೂರದಲ್ಲಿಲ್ಲ ಮತ್ತು ಅವರು ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವಂತೆ ಕಾಣುತ್ತಾರೆ ಮತ್ತು ಅವರು ದೊಡ್ಡ ಹೊಡೆತಗಳನ್ನು ಚೆನ್ನಾಗಿ ಆಡುತ್ತಾರೆ. (ವೀಕ್ಷಿಸಲು) ತುಂಬಾ ಅದ್ಭುತವಾಗಿದೆ' ಎಂದು ಡಿವಿಲಿಯರ್ಸ್ ಹೇಳಿದರು.
Advertisement