Asia Cup 2025: ಹ್ಯಾಂಡ್‌ಶೇಕ್ ವಿವಾದ; ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ Pakistan ಪತ್ರಿಕಾಗೋಷ್ಠಿ ದಿಢೀರ್ ರದ್ದು!

ಹ್ಯಾಂಡ್‌ಶೇಕ್ ವಿವಾದ ನಂತರ ಪಾಕಿಸ್ತಾನದ ವರ್ತನೆಗಳು ನಿರಂತರವಾಗಿ ಮುಂದುವರೆದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿರುದ್ಧದ ಲೀಗ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದ ಪಾಕಿಸ್ತಾನವು ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೂ ಮುನ್ನ ಅದೇ ತಂತ್ರವನ್ನು ಪುನರಾವರ್ತಿಸಿದೆ.
ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ
Updated on

ಹ್ಯಾಂಡ್‌ಶೇಕ್ ವಿವಾದ ನಂತರ ಪಾಕಿಸ್ತಾನದ ವರ್ತನೆಗಳು ನಿರಂತರವಾಗಿ ಮುಂದುವರೆದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿರುದ್ಧದ ಲೀಗ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದ ಪಾಕಿಸ್ತಾನವು ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೂ ಮುನ್ನ ಅದೇ ತಂತ್ರವನ್ನು ಪುನರಾವರ್ತಿಸಿದೆ. ಐಸಿಸಿ ಅಕಾಡೆಮಿಗೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಯನ್ನು ಅವರು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರೇರಣಾಕಾರಿ ಭಾಷಣಕಾರನನ್ನು ನೇಮಿಸಿಕೊಂಡಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.

ಪಾಕಿಸ್ತಾನ ತಂಡವು 2025ರ ಏಷ್ಯಾ ಕಪ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ, ಅವರು ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಹಾಗೆ ಮಾಡಿದ್ದರು. ಈಗ ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೂ ಮುನ್ನ ಅವರು ಅದೇ ತಂತ್ರವನ್ನು ಪುನರಾವರ್ತಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸೆಪ್ಟೆಂಬರ್ 21ರಂದು ಭಾರತ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆಟಗಾರರ ನೈತಿಕತೆಯನ್ನು ಹೆಚ್ಚಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರೇರಣಾಕಾರಿ ಭಾಷಣಕಾರ ಡಾ. ರಹೀಲ್ ಅವರನ್ನು ಆಹ್ವಾನಿಸಿದೆ ಎಂಬ ವರದಿಗಳು ಹೊರಬರುತ್ತಿವೆ. ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧದ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಶಿಬಿರದಲ್ಲಿ ಉತ್ಸಾಹ ಕಡಿಮೆಯಾಗಿದೆ. ಏಕೆಂದರೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಅವರನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಭಾರತ ತಂಡ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡದೊಂದಿಗೆ ಕೈಕುಲುಕದಿರಲು ನಿರ್ಧರಿಸಿದಾಗ ಪಾಕಿಸ್ತಾನದ ಸಮಸ್ಯೆಗಳು ಮತ್ತಷ್ಟು ಹದಗೆಟ್ಟವು. ಪಾಕಿಸ್ತಾನ ತಂಡವು ಈ ನಡೆ ಹಿನ್ನಡೆಯುಂಟು ಮಾಡಿದ್ದು ಅಂದಿನಿಂದ ನಿರಂತರವಾಗಿ ಒಂದಲ್ಲ ಒಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಹ್ಯಾಂಡ್‌ಶೇಕ್ ವಿವಾದ ನಂತರ ಪಿಸಿಬಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಟೀಮ್ ಇಂಡಿಯಾ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿತು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅವರು ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದರು. ಯುಎಇ ವಿರುದ್ಧದ ತಮ್ಮ ಮೂರನೇ ಗುಂಪು ಪಂದ್ಯದ ಆರಂಭವನ್ನು ವಿಳಂಬಗೊಳಿಸಿದರು. ಆದಾಗ್ಯೂ, ಆಂಡಿ ಪೈಕ್ರಾಫ್ಟ್ ಅವರೊಂದಿಗಿನ ಸಭೆಯ ನಂತರ, ಪಿಸಿಬಿ ಪಂದ್ಯಾವಳಿಯಲ್ಲಿ ಆಡಲು ಒಪ್ಪಿಕೊಂಡಿತು. ವಿವಾದ ಅಲ್ಲಿಗೆ ಮುಗಿಯಲಿಲ್ಲ. ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶದಲ್ಲಿ (ಪಿಎಂಒಎ) ಪೈಕ್ರಾಫ್ಟ್ ಅವರೊಂದಿಗಿನ ಸಭೆಯನ್ನು ವೀಡಿಯೊ ಚಿತ್ರೀಕರಣ ಮತ್ತು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ಐಸಿಸಿ ಪಿಸಿಬಿಗೆ ಕಠಿಣ ಇಮೇಲ್ ಕಳುಹಿಸಿದೆ.

ಪಾಕಿಸ್ತಾನ ತಂಡ
8 ತಿಂಗಳು ಕಾದಿದ್ದಕ್ಕೂ ಫಲ: ಟಿ20ಯಲ್ಲಿ ವೇಗವಾಗಿ 100 ವಿಕೆಟ್ ಪಡೆದ ಮೊದಲ ಭಾರತೀಯ ಅರ್ಶ್‌ದೀಪ್ ಸಿಂಗ್!

ಒತ್ತಡದಲ್ಲಿ ಪಾಕ್ ತಂಡ

ಈ ಇಮೇಲ್‌ಗೆ ಪ್ರತಿಕ್ರಿಯೆಯಾಗಿ, ಇದು ಐಸಿಸಿ ಪ್ರೋಟೋಕಾಲ್‌ಗಳಲ್ಲಿದೆ ಎಂದು ಪಿಸಿಬಿ ಹೇಳಿದೆ. ಈ ಆಫ್-ಫೀಲ್ಡ್ ಡ್ರಾಮಾ ಪಾಕಿಸ್ತಾನ ತಂಡದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಸಲ್ಮಾನ್ ಆಘಾ ನಾಯಕತ್ವದ ತಂಡವು ಮುಂದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಏತನ್ಮಧ್ಯೆ, ಆಂಡಿ ಪೈಕ್ರಾಫ್ಟ್ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಮತ್ತೊಮ್ಮೆ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com