

ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮುಕುಲ್ ಚೌಧರಿ ಏಕಾಂಗಿಯಾಗಿ ಹೋರಾಡಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ವಿರೋಚಿತ ಜಯ ತಂದಿತ್ತರು. ಆದರೆ ಇದೇ ಮುಕುಲ್ ಕುರಿತು ಅರ್ಜುನ್ ತೆಂಡೂಲ್ಕರ್ ಮೊದಲೇ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಹೌದು.. ಈಡನ್ ಗಾರ್ಡನ್ಸ್ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 181 ರನ್ ಗಳಿಸಿ ಗೆಲ್ಲಲು 182 ರನ್ಗಳ ಗುರಿ ನೀಡಿತು.
ಈ ಗುರಿ ಬೆನ್ನಟ್ಟಿದ ಲಕ್ನೋ 17ನೇ ಓವರ್ ಮುಕ್ತಾಯದವರೆಗೂ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಪಂದ್ಯದ ದಿಕ್ಕು ಬದಲಿಸಿದ ಲಕ್ನೋ ತಂಡದ ಯುವ ಬ್ಯಾಟರ್ ಮುಕುಲ್ ಚೌಧರಿ (Mukul Choudhary) ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಧ್ವಂಸ ಮಾಡ್ತಾನೆ
ಇನ್ನೂ ಮುಕುಲ್ ಚೌದರಿ ಸ್ಫೋಟಕ ಬ್ಯಾಟಿಂಗ್ ಕುರಿತು ಲಕ್ನೋ ತಂಡದ ಮತ್ತೋರ್ವ ಆಟಗಾರ ಅರ್ಜುನ್ ತೆಂಡೂಲ್ಕರ್ ಮಾಹಿತಿ ನೀಡಿದ್ದರು. ಈ ಹಿಂದೆ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅರ್ಜುನ್, ಮುಕುಲ್ ಕುರಿತು ಮಾತನಾಡಿದ್ದರು. ಮುಕುಲ್ ಅವರ 360-ಡಿಗ್ರಿ ಹಿಟ್ಟಿಂಗ್ ಸಾಮರ್ಥ್ಯವನ್ನು ನೋಡಿ ತಾನು ಎಷ್ಟು ಆಶ್ಚರ್ಯಚಕಿತನಾದೆ ಎಂದು ಅರ್ಜುನ್ ತೆಂಡೂಲ್ಕರ್ ಹೇಳಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಮುಕುಲ್ ಚೌಧರಿ ಅದ್ಭುತ ಸಿಕ್ಸರ್ಗಳನ್ನು ಬಾರಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಅರ್ಜುನ್ ತೆಂಡೂಲ್ಕರ್, 'ಅಭ್ಯಾಸ ಪಂದ್ಯದಲ್ಲಿ ನಾನು ಅವರ ಸಿಕ್ಸರ್ಗಳನ್ನು ನೋಡಿದೆ.
ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೆ. ಅವರು ಸ್ಕ್ವೇರ್-ಲೆಗ್, ಪಾಯಿಂಟ್, ಅಪ್ಪರ್ ಕಟ್, ಬೌಲರ್ನ ಹಿಂದೆ ಎಲ್ಲೆಡೆ ಹೊಡೆಯುತ್ತಾರೆ. ಬೌಲರ್ ಗಳ ಲೆಕ್ಕಾಚಾರವನ್ನೇ ಧ್ವಂಸ ಮಾಡಿದರು. ಅವರ ಬ್ಯಾಟಿಂಗ್ನಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೆ ಎಂದು ಹೇಳಿದ್ದರು.
ಇದಾದ ಕೆಲವೇ ದಿನಗಳ ಅಂತರದಲ್ಲಿ ಮುಕುಲ್ ನಿನ್ನೆ ಕೆಕೆಆರ್ ವಿರುದ್ಧ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದಾರೆ. ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಗೆದ್ದು ಕೊಟ್ಟಿದ್ದಾರೆ.
Advertisement