'ಕೆಲವೊಮ್ಮೆ ಮನಸ್ಸು ಸರಿಯಾಗಿ ಕೆಲಸ ಮಾಡಲ್ಲ': ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವಿನ ಬಳಿಕ ರಿಂಕು ಸಿಂಗ್!

ಈ ಆವೃತ್ತಿಯಲ್ಲಿ ತಮ್ಮಿಂದ ಅತ್ಯುತ್ತಮ ಇನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದ ಎಡಗೈ ಬ್ಯಾಟರ್, ಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
Rinku Singh
ರಿಂಕು ಸಿಂಗ್
Updated on

ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಒತ್ತಡದ ನಡುವೆಯೂ ಸಮಯೋಚಿತ, ಆತ್ಮವಿಶ್ವಾಸ ಹೆಚ್ಚಿಸುವ ಅಜೇಯ 53 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ರಿಂಕು ಸಿಂಗ್, 'ತೀವ್ರತೆ ಇತ್ತು, ಆದರೆ ಯಾವುದೇ ಹಿಂಜರಿಕೆ ಇರಲಿಲ್ಲ' ಎಂದು ಹೇಳಿದರು.

'ಕೆಲವೊಮ್ಮೆ ಕೆಲವು ವಿಷಯಗಳು ನಿಮ್ಮ ಇಚ್ಛೆಯಂತೆ ನಡೆಯದಿದ್ದಾಗ ಅದು ಹಾಗೆ ಆಗುತ್ತದೆ. ಆದ್ದರಿಂದ ನೀವು ಆ ತೀವ್ರತೆಯನ್ನು ಅನುಭವಿಸುತ್ತೀರಿ. ಆದರೆ ನನ್ನ ಹೊಡೆತಗಳನ್ನು ಆಡುವ ಬಗ್ಗೆ ನಾನು ಹಿಂಜರಿಯುತ್ತಿರಲಿಲ್ಲ ಅಥವಾ ಖಚಿತವಿಲ್ಲದಂತೆ ಇರಲಿಲ್ಲ. ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಮನಸ್ಥಿತಿಯಾಗಿತ್ತು' ಎಂದು ಕೆಕೆಆರ್ ಉಪನಾಯಕ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು.

ಈ ಆವೃತ್ತಿಯಲ್ಲಿ ತಮ್ಮಿಂದ ಅತ್ಯುತ್ತಮ ಇನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದ ಎಡಗೈ ಬ್ಯಾಟರ್, ಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರ್‌ಆರ್ ಕಡೆಗೆ ಮೊಮೆಂಟಮ್ ತಿರುಗಿದೆ ಎನ್ನುವಷ್ಟರಲ್ಲಿ ರಿಂಕು ಸಿಂಗ್ ತಮ್ಮ ಬ್ಯಾಟಿಂಗ್‌ನಿಂದ ಪಂದ್ಯವನ್ನು ಕೆಕೆಆರ್ ಪರವಾಗಿ ತಿರುಗಿಸಿದರು.

'ಕೆಲವೊಮ್ಮೆ ಅದು ಹೀಗಾಗುತ್ತದೆ. ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ನೀವು ಅಂತಹ ಹೊಡೆತಗಳನ್ನು ಆಡುತ್ತೀರಿ. ಆದರೆ ಅದೃಷ್ಟ ನನ್ನ ಕಡೆ ಇತ್ತು ಮತ್ತು ನಾವು ಅಂತಿಮವಾಗಿ ಪಂದ್ಯವನ್ನು ಗೆದ್ದಿದ್ದೇವೆ' ಎಂದು ಅವರು ಹೇಳಿದರು.

Rinku Singh
IPL 2026: 7ನೇ ಪಂದ್ಯದಲ್ಲಿ ಮೊದಲ ಗೆಲುವು: RR ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ KKR

'ನಾನು ಕೆಲವು ಇನಿಂಗ್ಸ್‌ಗಳನ್ನು ಆಡಿದ್ದೆ ಮತ್ತು ದೊಡ್ಡ ಇನಿಂಗ್ಸ್‌ಗಾಗಿ ಕಾಯುತ್ತಿದ್ದೆ. ಇದು ನನಗೆ ತುಂಬಾ ಒಳ್ಳೆಯ ಇನಿಂಗ್ಸ್ ಆಗಿತ್ತು ಮತ್ತು ನನ್ನ ಆತ್ಮವಿಶ್ವಾಸಕ್ಕೂ ಬಹಳ ಮುಖ್ಯವಾಗಿತ್ತು' ಎಂದು ಫಿನಿಷರ್ ಎಂದೇ ಹೆಸರಾಗಿರುವ ರಿಂಕು, ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುವ ಇಚ್ಛೆಯನ್ನು ಪುನರುಚ್ಚರಿಸಿದರು.

'ನನಗೆ ಸ್ಥಿರ ಸ್ಥಾನ ಅಂತ ಏನೂ ಇಲ್ಲ. ನಾನು ಐದನೇ ಸ್ಥಾನದಲ್ಲಿ, ಕೆಳ ಕ್ರಮಾಂಕದಲ್ಲಿ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ತಂಡಕ್ಕೆ ನನ್ನ ಅವಶ್ಯಕತೆ ಎಲ್ಲಿದ್ದರೂ, ನಾನು ಸಿದ್ಧನಿದ್ದೇನೆ. ಇದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಏಕೆಂದರೆ, ಇದು ಈ ಆವೃತ್ತಿಯ ನಮ್ಮ ಮೊದಲ ಗೆಲುವು. ಇಲ್ಲಿಂದ, ನಾವು ಈ ಮೊಮೆಂಟಮ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ' ಎಂದು ಅವರು ಹೇಳಿದರು.

ನಾಯಕ ಅಜಿಂಕ್ಯ ರಹಾನೆ ಕೂಡ ಇದೇ ಭಾವನೆಯನ್ನು ಪ್ರತಿಧ್ವನಿಸಿದರು. 'ಇಲ್ಲಿಗೆ ಬಂದಿರುವುದು ನಿಜವಾಗಿಯೂ ಸಂತೋಷವಾಗಿದೆ. ನಿಜವಾಗಿಯೂ ಚೆನ್ನಾಗಿ ಅನಿಸುತ್ತಿದೆ. ಆಟದ ಸಮಯದಲ್ಲಿ ಬಹಳಷ್ಟು ಭಾವನೆಗಳು ಇದ್ದವು' ಎಂದು ರಹಾನೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com