ಪಿಚ್‌ನಲ್ಲಿ ಯಾವುದೇ ರಾಕ್ಷಸ ಇರಲಿಲ್ಲ, ಅಲ್ಲಿ RCBಯ ಪ್ರತಿಭೆ ಮಾತ್ರ ಇತ್ತು: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೃನಾಲ್ ಪಾಂಡ್ಯ

'ಒಬ್ಬ ಸ್ಪಿನ್ನರ್ ಬೌನ್ಸರ್ ಎಸೆಯುವುದು ಸುಲಭವಲ್ಲ. ಅದು ಬಹಳಷ್ಟು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಆದರೆ, ನಾನು ಹೊಸ ವಿಷಯಗಳನ್ನು ಪ್ರಯತ್ನಿಸಲು ಎಂದಿಗೂ ಹೆದರುವುದಿಲ್ಲ' ಎಂದು ಹೇಳಿದರು.
Bhuvneshwar Kumar, Josh Hazlewood are world-class: Krunal Pandya after RCB's dominant win over DC
ಕೃನಾಲ್ ಪಾಂಡ್ಯ
Updated on

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಗೆಲುವು ಸಾಧಿಸಿದೆ. ಡಿಸಿಗಿಂತ ಒಂದು ಒಂದು ಹೆಜ್ಜೆ ಮುಂದಿರುವ ಮೂಲಕ ಕೌಶಲ್ಯದಿಂದ ಪಂದ್ಯವನ್ನು ಗೆಲ್ಲಲಾಯಿತು ಎಂದು ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಹೇಳಿದ್ದಾರೆ.

'ಆ ವಿಕೆಟ್‌ನಲ್ಲಿ ಯಾವುದೇ ರಾಕ್ಷಸರು ಇರಲಿಲ್ಲ ಆದರೆ, ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಜಲ್‌ವುಡ್ ಅಸಾಧಾರಣ ಪ್ರದರ್ಶನ ನೀಡಿದರು. 'ಪವರ್‌ಪ್ಲೇನಲ್ಲಿ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ, ನೀವು ಅಕ್ಷರಶಃ ಎದುರಾಳಿಯಿಂದ ಆಟವನ್ನು ಕಸಿದುಕೊಂಡಿದ್ದೀರಿ. ವಿಕೆಟ್ ಅಷ್ಟು ಕೆಟ್ಟದಾಗಿರಲಿಲ್ಲ. ಆದರೆ, ಅದು ಆರ್‌ಸಿಬಿಯ ಶುದ್ಧ ಕೌಶಲ್ಯದ ಸೆಟ್ ಆಗಿತ್ತು ಮತ್ತು ಹೀಗಾಗಿಯೇ ಅವರು ಅತ್ಯುತ್ತಮರು ಎಂದು ಸಾಬೀತಾಗುತ್ತದೆ' ಎಂದು ಒತ್ತಿ ಹೇಳಿದರು.

ಆಕ್ರಮಣಕಾರಿ ಪವರ್-ಹಿಟ್ಟಿಂಗ್ ಪ್ರಬಲವಾಗಿರುವ ಸ್ವರೂಪದಲ್ಲಿ, ಬ್ಯಾಟ್ಸ್‌ಮನ್‌ಗಳನ್ನು ಮೀರಿಸಲು ಬೌನ್ಸರ್‌ಗಳು ಮತ್ತು ಚೆಂಡಿನ ಪಥವನ್ನು ಬದಲಿಸುವಂತಹ ಹೊಸ ಬದಲಾವಣೆಗಳನ್ನು ಸೇರಿಸುವ ಮೂಲಕ ಕೃನಾಲ್ ಪಾಂಡ್ಯ ಉದ್ದೇಶಪೂರ್ವಕವಾಗಿ ತನ್ನ ಬೌಲಿಂಗ್ ಅನ್ನು ಸುಧಾರಿಸಿಕೊಂಡಿರುವುದಾಗಿ ಹೇಳಿದರು.

'ಪ್ರತಿ ವರ್ಷ ಎದುರಾಳಿ ತಂಡ ನಿಮಗಾಗಿ ತಯಾರಿ ನಡೆಸುತ್ತದೆ. ಆದ್ದರಿಂದ, ಇದು ಮಾನಸಿಕ ಆಟವೂ ಆಗುತ್ತದೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಇರಲು ನಾನು ಏನು ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೆ. ಆಗಲೇ ಬೌನ್ಸರ್ ಮತ್ತು ಪಥದಲ್ಲಿನ ಬದಲಾವಣೆ ಬಂದಿತು' ಎಂದು ಅವರು ವಿವರಿಸಿದರು.

Bhuvneshwar Kumar, Josh Hazlewood are world-class: Krunal Pandya after RCB's dominant win over DC
'ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ನಾಯಕ ರಜತ್ ಪಾಟೀದಾರ್

'ಒಬ್ಬ ಸ್ಪಿನ್ನರ್ ಬೌನ್ಸರ್ ಎಸೆಯುವುದು ಸುಲಭವಲ್ಲ. ಬಹಳಷ್ಟು ಫಿಟ್ನೆಸ್ ಅನ್ನು ಅದು ಅವಲಂಬಿಸಿರುತ್ತದೆ. ಆದರೆ, ನಾನು ಹೊಸ ವಿಷಯಗಳನ್ನು ಪ್ರಯತ್ನಿಸಲು ಎಂದಿಗೂ ಹೆದರುವುದಿಲ್ಲ. ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ' ಎಂದು ಹೇಳಿದರು.

ಕೃನಾಲ್ ಪಾಂಡ್ಯ ಅವರ ವೃತ್ತಿಜೀವನದ ಆರಂಭದಲ್ಲೇ ಹೊಸ ಬೌಲಿಂಗ್ ಐಡಿಯಾಗಳನ್ನು ಪ್ರಯತ್ನಿಸುವ ಅಭ್ಯಾಸ ಪ್ರಾರಂಭವಾಯಿತು. ಮ್ಯಾಟಿಂಗ್ ವಿಕೆಟ್‌ಗಳ ಮೇಲೆ ಆಡುವಾಗ, ಅವರು ಆಗಾಗ್ಗೆ ಬ್ಯಾಟ್ಸ್‌ಮನ್‌ಗಳಿಂದ ತೀವ್ರವಾಗಿ ಹೊಡೆತ ತಿನ್ನುತ್ತಿದ್ದರು. ಇದು ಅವರನ್ನು ಸುಧಾರಿಸಲು ವಿಭಿನ್ನ ತಂತ್ರಗಳನ್ನು ಪ್ರಯೋಗಿಸಲು ಮತ್ತು ಅಭಿವೃದ್ಧಿಪಡಿಸಲು ಪ್ರೇರೇಪಿಸಿತು.

'ನಾನು ಬೌನ್ಸರ್‌ಗಳು ಮತ್ತು ವೈಡ್ ಯಾರ್ಕರ್‌ಗಳಂತಹ ವಿಷಯಗಳನ್ನು ಕಲಿತದ್ದು ಅಲ್ಲೇ. ಕಾಲಕ್ರಮೇಣ ಪಾತ್ರಗಳು ಬದಲಾಗುತ್ತವೆ. ಆದರೆ, ಈ ವರ್ಷ ಹೊಸದನ್ನು ಸೇರಿಸುವ ಅಗತ್ಯವನ್ನು ನಾನು ಅನುಭವಿಸಿದೆ. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳು ಎಷ್ಟು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ ಎಂಬುದನ್ನು ನೋಡಿ' ಎಂದರು.

ಆರ್‌ಸಿಬಿ ಸದ್ಯ ಆಡಿರುವ ಎಂಟು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಜೊತೆಗೆ, ಆರ್‌ಸಿಬಿ ಪ್ಲೇ-ಆಫ್‌ಗೆ ಹೋಗುವ ಓಟದಲ್ಲಿ ಅಗ್ರ-ಎರಡು ಸ್ಥಾನಗಳನ್ನು ಪಡೆಯುವ ನೆಚ್ಚಿನ ತಂಡವಾಗಿದೆ.

33 ವರ್ಷದ ವಿರಾಟ್ ಕೊಹ್ಲಿ ಅವರ ನಿರಂತರ ಶ್ರೇಷ್ಠತೆಯನ್ನು ಶ್ಲಾಘಿಸಿದ ಕೃನಾಲ್, ಅವರು ಭಾರತೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಸಂಸ್ಕೃತಿಯ ಶ್ರೇಷ್ಠ ಎಂದು ಕರೆದರು. ಇಷ್ಟು ವರ್ಷಗಳ ಕಾಲ ಆ ಸ್ಥಿರತೆಯನ್ನು ಹೊಂದಿರುವುದು ನಂಬಲಸಾಧ್ಯ. ಜನರು ಕ್ರೀಡೆಯಲ್ಲಿ ಫಿಟ್‌ನೆಸ್ ಅನ್ನು ನೋಡುವ ವಿಧಾನವನ್ನು ಅವರು ಬದಲಿಸಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com