ಐಪಿಎಲ್ 2027ಕ್ಕೂ ಮುನ್ನ 'ಹಾರ್ದಿಕ್ ಪಾಂಡ್ಯ' ಟ್ರೇಡ್ ವದಂತಿಗಳ ಮಧ್ಯೆ ಹೊಸ ಪೋಸ್ಟ್ ಹಂಚಿಕೊಂಡ ಮುಂಬೈ ಇಂಡಿಯನ್ಸ್‌!

'ಐಪಿಎಲ್ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆಗಳು ಅಥವಾ ಆರೋಪಗಳು ಬರದಂತೆ ನೋಡಿಕೊಳ್ಳಲು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
Hardik Pandya
ಹಾರ್ದಿಕ್ ಪಾಂಡ್ಯ
Updated on

ಮುಂದಿನ ಆವೃತ್ತಿಗೂ ಮುನ್ನ, ಹಾರ್ದಿಕ್ ಪಾಂಡ್ಯ ಕುರಿತಾದ ಹೊಸ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ. ಐಪಿಎಲ್ 2027ಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಆಟಗಾರನನ್ನು ವಿನಿಮಯ ಮಾಡಿಕೊಳ್ಳಲು ನೋಡುತ್ತಿದೆ ಎಂದು ಹಲವು ವರದಿಗಳು ಹೇಳಿವೆ. 2015ರಲ್ಲಿ ಮುಂಬೈ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಈ ಆಲ್‌ರೌಂಡರ್, 2022ರ ಆವೃತ್ತಿಗೆ ಮುನ್ನ ಫ್ರಾಂಚೈಸಿಯನ್ನು ತೊರೆದು ಗುಜರಾತ್ ಟೈಟಾನ್ಸ್‌ ಸೇರಿದರು. ಹಾರ್ದಿಕ್ ತಮ್ಮ ಚೊಚ್ಚಲ ಆವೃತ್ತಿಯಲ್ಲೇ ಜಿಟಿಯನ್ನು ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ಇನ್ನೊಂದು ವರ್ಷವೂ ನಾಯಕನಾಗಿ ಮುಂದುವರಿದರು. ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದರು. ಈ ಬಾರಿ, ಹಾರ್ದಿಕ್‌ಗೆ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸುವ ಜವಾಬ್ದಾರಿ ವಹಿಸಲಾಯಿತು. ಆದಾಗ್ಯೂ, ಮುಂಬೈ ಐಪಿಎಲ್ 2024ರ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಮುಂದಿನ ಆವೃತ್ತಿಯಲ್ಲಿ, ಮುಂಬೈ ತಂಡ ಕ್ವಾಲಿಫೈಯರ್ 2ಗೆ ಪ್ರವೇಶಿಸಿತು. ಐಪಿಎಲ್ 2026ರಲ್ಲಿ ಒಂಬತ್ತನೇ ಸ್ಥಾನದಲ್ಲಿ ಉಳಿಯಿತು.

ಹಾರ್ದಿಕ್ ಅವರ ಸಂಭಾವ್ಯ ಟ್ರೇಡ್ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆಯೇ, ಮುಂಬೈ ಇಂಡಿಯನ್ಸ್ ತಂಡವು ಆಟಗಾರನ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಐಪಿಎಲ್ ವರ್ಗಾವಣೆಗಳು ಮತ್ತು ವಿನಿಮಯ ಪ್ರಕ್ರಿಯೆಗಳ ಕುರಿತು ಪ್ರತಿಕ್ರಿಯಿಸುವಾಗ, ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ನೇರ ಮನವಿಯೊಂದನ್ನು ಮಾಡಿದ್ದಾರೆ.

'...ಆಟಗಾರರು ಒಂದು ಫ್ರಾಂಚೈಸಿಯಿಂದ ಮತ್ತೊಂದಕ್ಕೆ ಬದಲಾಗುವ ಸಾಧ್ಯತೆ ಬಗ್ಗೆ ಮಾಧ್ಯಮಗಳಲ್ಲಿ ಕೆಲವು ಊಹೆಗಳು ಹರಿದಾಡುತ್ತಿವೆ. ಸಹಜವಾಗಿಯೇ, ಆ ಪ್ರಕ್ರಿಯೆಯ ಅವಧಿ (ವಿಂಡೋ) ಮುಕ್ತಾಯಗೊಳ್ಳಲು ಇನ್ನೂ ಸ್ವಲ್ಪ ಸಮಯವಿದೆ. ಆದಾಗ್ಯೂ, ಒಬ್ಬ ಆಟಗಾರನ ವರ್ಗಾವಣೆಯ ವಿಷಯವು ಸಾರ್ವಜನಿಕರಿಗೆ ತಿಳಿದಿದ್ದರೂ, ವಿನಿಮಯ ನಡೆದಾಗ ಅದಕ್ಕೆ ಸಂಬಂಧಿಸಿದ ಆರ್ಥಿಕ ವಿವರಗಳು ಕೇವಲ ಆ ಎರಡು ಫ್ರಾಂಚೈಸಿಗಳು, ಆಟಗಾರ ಮತ್ತು ಬಿಸಿಸಿಐಗೆ ಮಾತ್ರ ತಿಳಿದಿರುತ್ತವೆ' ಎಂದು ಸುನೀಲ್ ಗವಾಸ್ಕರ್ 'ಮಿಡ್-ಡೇ'ನಲ್ಲಿ ಬರೆದಿದ್ದಾರೆ.

Hardik Pandya
'ಇದರ ಬಗ್ಗೆ ಅಸೂಯೆ ಪಡುವವರಿಗೆ': ಕೋಟ್ಯಂತರ ರೂಪಾಯಿ ಐಪಿಎಲ್ ಟ್ರೇಡ್ ಬಗ್ಗೆ BCCIಗೆ ಸುನೀಲ್ ಗವಾಸ್ಕರ್ ಸಂದೇಶ

ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ಫ್ರಾಂಚೈಸಿ ತನ್ನ ತಂಡಕ್ಕಾಗಿ ನಿಗದಿಪಡಿಸಲಾದ ವೇತನ ಮಿತಿಯನ್ನು (salary cap) ಪಾಲಿಸಲಾಗಿದೆಯೇ ಅಥವಾ ಉಲ್ಲಂಘಿಸಲಾಗಿದೆಯೇ ಎಂಬುದು ಇತರ ಫ್ರಾಂಚೈಸಿಗಳಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಸಂಪೂರ್ಣ ಪಾರದರ್ಶಕತೆಗಾಗಿ ಆ ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸುವುದು ಮುಖ್ಯವಾಗಿದೆ. ಐಪಿಎಲ್‌ನ ಉನ್ನತ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಸಂಪೂರ್ಣ ಪಾರದರ್ಶಕತೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

'ಐಪಿಎಲ್ ವಿಶ್ವದ ಅತ್ಯುತ್ತಮ ಟಿ20 ಲೀಗ್ ಆಗಿದೆ; ಹೀಗಾಗಿ, ಇದರ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆಗಳು ಅಥವಾ ಆರೋಪಗಳು ಬರದಂತೆ ನೋಡಿಕೊಳ್ಳಲು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಅವರು ಮುಂದೆ ಬರೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com