ಪ್ರಮುಖ ಆಟಗಾರ ಔಟ್; ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪ್ಲೇಯಿಂಗ್ XIನಲ್ಲಿ ಭಾರಿ ಬದಲಾವಣೆ; ಸುಳಿವು ನೀಡಿದ ಚೇತೇಶ್ವರ್ ಪೂಜಾರ

ಒಂದು ವೇಳೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕುಲದೀಪ್ ಅವರಂತಹ ಆಟಗಾರರಿಗೆ ಬೆಂಬಲ ನೀಡಬೇಕು ಎಂದೇ ನಾನು ಭಾವಿಸುತ್ತೇನೆ. ಅವರು ಉತ್ತಮ ಗುಣಮಟ್ಟದ ಬೌಲರ್' ಎಂದಿದ್ದಾರೆ.
INDIA TEAM
ಭಾರತ ತಂಡ
Updated on

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಬದಲಿಗೆ ಪದಾರ್ಪಣೆ ಮಾಡಲು ಕಾಯುತ್ತಿರುವ ಸಾರಂಶ್ ಜೈನ್ ಅವರನ್ನು ಆಡಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೂಜಾರ, ಭಾರತವು ಅಂತಹ ನಿರ್ಧಾರವನ್ನು ತೆಗೆದುಕೊಂಡರೆ ತಮಗೆ ನಿರಾಶೆಯಾಗುತ್ತದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕುಲದೀಪ್ ಕೇವಲ 25 ಓವರ್‌ಗಳನ್ನು ಬೌಲ್ ಮಾಡಿ ಒಂದು ವಿಕೆಟ್ ಪಡೆದಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ದೀರ್ಘಾವಧಿಯವರೆಗೆ ಬೌಲಿಂಗ್ ಮಾಡಿದ್ದರು. ಇದರಿಂದಾಗಿ ಆಡುವ ಹನ್ನೊಂದರ ಬಳಗದಲ್ಲಿ ಕುಲದೀಪ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದವು; ಆದರೆ, ಗೆಲುವು ತಂದುಕೊಟ್ಟ ತಂಡದ ಸಂಯೋಜನೆಯಲ್ಲಿ ಭಾರತ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

'ನನ್ನ ಪ್ರಕಾರ, ಭಾರತವು ಅದೇ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಬೇಕು; ಆದರೆ ಶ್ರೀಲಂಕಾದ ತಂಡದಲ್ಲಿ ಸಾಕಷ್ಟು ಎಡಗೈ ಬ್ಯಾಟರ್‌ಗಳಿರುವುದರಿಂದ ಕುಲದೀಪ್ ಬದಲಿಗೆ ಸಾರಂಶ್ ಆಡುವ ಬಳಗಕ್ಕೆ ಬರಬಹುದು ಎಂಬ ಸುದ್ದಿಯನ್ನು ನಾನು ಕೇಳುತ್ತಿದ್ದೇನೆ' ಎಂದು ಪೂಜಾರ ESPNCricinfoಗೆ ತಿಳಿಸಿದರು.

'ಆದರೆ ಅಂತಹ ಬದಲಾವಣೆ ನಡೆದರೆ ನನಗೆ ನಿರಾಶೆಯಾಗುತ್ತದೆ, ಏಕೆಂದರೆ ಕುಲ್‌ದೀಪ್‌ನಂತಹ ಆಟಗಾರನಿಗೆ ಮತ್ತೊಂದು ಅವಕಾಶ ನೀಡಬೇಕು. ಅವರು ಉತ್ತಮ ಗುಣಮಟ್ಟದ ಬೌಲರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಬಾರದು; ಗೆಲ್ಲುತ್ತಿರುವ ತಂಡದ ಸಂಯೋಜನೆಯನ್ನು ಬದಲಾಯಿಸಬಾರದು. ಹಾಗಾಗಿ, ಕುಲ್‌ದೀಪ್ ಆಡುವ ಹನ್ನೊಂದರ ಬಳಗದಲ್ಲಿ ಇರಬೇಕು ಎಂದು ನಾನು ಭಾವಿಸುತ್ತೇನೆ' ಎಂದರು.

INDIA TEAM
'ರವೀಂದ್ರ ಜಡೇಜಾ ಈಗ ಆಕ್ರಮಣಕಾರಿ ಸ್ಪಿನ್ನರ್ ಆಗಿ ಉಳಿದಿಲ್ಲ': ಸ್ಫೋಟಕ ವಿಚಾರ ಹಂಚಿಕೊಂಡ ಆರ್ ಅಶ್ವಿನ್

'ಒಂದು ವೇಳೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಕುಲದೀಪ್ ಅವರಂತಹ ಆಟಗಾರರಿಗೆ ಬೆಂಬಲ ನೀಡಬೇಕು ಎಂದೇ ನಾನು ಭಾವಿಸುತ್ತೇನೆ. ಅವರು ಉತ್ತಮ ಗುಣಮಟ್ಟದ ಬೌಲರ್. ಹಾಗಾಗಿ ಅತಿಯಾಗಿ ಮುಂಚಿತವಾಗಿ ಯೋಚಿಸುವ ಅಗತ್ಯವಿಲ್ಲ. ಒಂದೊಂದು ಪಂದ್ಯ ಮತ್ತು ಒಂದೊಂದು ಸರಣಿಯತ್ತ ಗಮನಹರಿಸುವುದು ಸೂಕ್ತ ಎಂದು ನನಗನ್ನಿಸುತ್ತದೆ. ಬಹುಶಃ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದಿರಬಹುದು; ಆದ್ದರಿಂದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರನ್ನು ಮುಂದುವರಿಸುವುದು ಒಳ್ಳೆಯದು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳ ವಿಷಯಕ್ಕೆ ಬಂದರೆ, ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com