T20 World Cup 2026: 'ಮಾತನಾಡಿ, ಬೆದರಿಕೆ ಬೇಡ': ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ಪಾಕ್ ನಿರ್ಧಾರ 'ಹತಾಶೆ'ಯಿಂದ ಹುಟ್ಟಿದೆ!

ನಿಸ್ಸಂಶಯವಾಗಿ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಆದರೆ, ಇದು ಅನ್ಯಾಯ ಅಥವಾ ರಾಜಕೀಯ ಪ್ರೇರಿತ ಎಂದು PCB ಬಲವಾಗಿ ಭಾವಿಸಿದೆ.
T20 World Cup 2026: ICC in talks with PCB to salvage India-Pakistan fixture
ಪಾಕಿಸ್ತಾನಿ ಆಟಗಾರರು
Updated on

2026ರ ಟಿ20 ವಿಶ್ವಕಪ್ ಆರಂಭಗೊಂಡಿದ್ದರೂ ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಪಂದ್ಯದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದ ನಂತರ ಈ ಸುತ್ತಲೇ ಚರ್ಚೆಗಳು ಆರಂಭವಾಗಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದೀಗ ಬಿಕ್ಕಟ್ಟನ್ನು ಪರಿಹರಿಸಲು ಔಪಚಾರಿಕ ಚರ್ಚೆಗಳನ್ನು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ಆದಾಗ್ಯೂ, ಐಸಿಸಿ ಮಾಜಿ ಮುಖ್ಯಸ್ಥ ಎಹ್ಸಾನ್ ಮಣಿ ಅಭಿಮಾನಿಗಳು ಭರವಸೆಯನ್ನು ಇಟ್ಟುಕೊಳ್ಳಬೇಡಿ. ಪರಿಸ್ಥಿತಿ ಈಗಾಗಲೇ ತುಂಬಾ ಉಲ್ಬಣಗೊಂಡಿದೆ ಎಂದು ಎಂದು ಎಚ್ಚರಿಸಿದ್ದಾರೆ.

Revsportz ಮಾತನಾಡಿದ ಮಣಿ ಅವರು ICC ಮಾಜಿ ಅಧ್ಯಕ್ಷರಾಗಿ ತಮ್ಮ ಅನುಭವವನ್ನು ಬಿಚ್ಚಿಟ್ಟರು. ಒಂದು ಕಡೆಯನ್ನು ದೂಷಿಸಲು ನಿರಾಕರಿಸಿದ ಅವರು, 'ರಾಜಕೀಯ ಒಳಗೊಳ್ಳುವಿಕೆ'ಯೇ ಸದ್ಯದ ಬಿಕ್ಕಟ್ಟಿಗೆ ಕಾರಣ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರವು 'ಹತಾಶೆ'ಯಿಂದ ಹುಟ್ಟಿದ ಪ್ರತಿಕ್ರಿಯೆಯಾಗಿದೆ. ಇಂತಹ ಬಿಕ್ಕಟ್ಟುಗಳನ್ನು ತಡೆಗಟ್ಟಲು ಆರಂಭಿಕ ಸಂವಹನ ಅತ್ಯಗತ್ಯ ಎಂದು ಒತ್ತಿ ಹೇಳಿದರು.

'ಐಸಿಸಿ ಅಧ್ಯಕ್ಷನಾಗಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಸದಸ್ಯರನ್ನು ಪಂದ್ಯಾವಳಿಯಿಂದ ಹೊರಹಾಕಲು ಬಯಸವುದಿಲ್ಲ. PCB ನಿಲುವು ತೆಗೆದುಕೊಂಡಿದೆ. ಆದರೆ, ಅವರು ಆ ನಿಲುವಿನಿಂದ ಹಿಂದೆ ಸರಿಯುವಂತೆ ಮಾಡಲು ನಾನು ಮಾತುಕತೆಗೆ ಆದ್ಯತೆ ನೀಡುತ್ತೇನೆ. ಜನರು ಮಾತನಾಡಬೇಕು, ಬೆದರಿಕೆ ಅಥವಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು' ಎಂದರು.

ಅಧ್ಯಕ್ಷ ಜಯ್ ಶಾ ಮತ್ತು ಐಸಿಸಿ ತಮ್ಮ ನಿರ್ಧಾರವನ್ನು ಮಾಡಿದಾಗ, ಅದು ಸರ್ವಾನುಮತದಿಂದ ಕೂಡಿತ್ತು. ಪಾಕಿಸ್ತಾನ ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿತು ಎಂದು ಮಣಿ ಗಮನಿಸಿದರು.

T20 World Cup 2026: ICC in talks with PCB to salvage India-Pakistan fixture
T20 World Cup 2026: ಭಾರತದ ಪಂದ್ಯ 'ಬಹಿಷ್ಕಾರ'ದ ನಂತರ ಬಿಗ್ ಟ್ವಿಸ್ಟ್; PCB ಜೊತೆಗೆ ICC ಮಾತುಕತೆ!

'ನಿಸ್ಸಂಶಯವಾಗಿ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಆದರೆ, ಇದು ಅನ್ಯಾಯ ಅಥವಾ ರಾಜಕೀಯ ಪ್ರೇರಿತ ಎಂದು PCB ಬಲವಾಗಿ ಭಾವಿಸಿದೆ. ಇದನ್ನು ಮೊಳಕೆಯಲ್ಲಿಯೇ ಚಿವುಟಬೇಕಿತ್ತು; ಜಯ್ ಶಾ ಮತ್ತು ಮೊಹ್ಸಿನ್ ನಖ್ವಿ ನೇರವಾಗಿ ಮಾತನಾಡಬೇಕಿತ್ತು. PCB ಯ ನಿಲುವು ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟ ಭಾವನೆಗೆ ಪ್ರತಿಕ್ರಿಯೆಯಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದರು.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಚರ್ಚೆಗಳು ಉನ್ನತ ಮಟ್ಟದಲ್ಲಿ ನಡೆಯದ ಹೊರತು ಈ ಬಗ್ಗೆ ನಾನು ಹೆಚ್ಚು ಭರವಸೆ ಇಟ್ಟುಕೊಳ್ಳುವುದಿಲ್ಲ. ಇದನ್ನು ಪರಿಹರಿಸಲು ಜಯ್ ಶಾ ಪಾಕಿಸ್ತಾನಕ್ಕೆ ಪ್ರಯಾಣಿಸುವ ಮೂಲಕ ಉತ್ತಮ ನಡೆ ಅನುಸರಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ, ಅಂದಿನ ಕ್ರೀಡಾ ಸಚಿವ ಸುನಿಲ್ ದತ್ ಅವರಂತಹ ಸಂಬಂಧಿತ ಭಾರತೀಯ ಸಚಿವರನ್ನು ನಾನು ವೈಯಕ್ತಿಕವಾಗಿಯೇ ಭೇಟಿಯಾಗಿದ್ದೆ' ಎಂದರು.

ಎರಡೂ ಕಡೆಗಳಲ್ಲಿ ಸದ್ಭಾವನೆ ಇದ್ದರೆ, ಪರಿಹಾರ ಸಾಧ್ಯ. ದೂತರನ್ನು ಕಳುಹಿಸುವುದರಿಂದ ಸಂದೇಶಗಳು ಹಿಂದಕ್ಕೆ ಮತ್ತು ಮುಂದಕ್ಕೆ ರವಾನಿಸಲ್ಪಡುತ್ತವೆ. ಅಧ್ಯಕ್ಷರು ನೇರವಾಗಿ ಭೇಟಿಯಾಗಬೇಕು ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com