

ಟೀಂ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿದ್ದಾರೆ. ಅಕ್ಟೋಬರ್ 2024 ರಿಂದ ಆಗಸ್ಟ್ 2025 ರವರೆಗೆ, ಕೇರಳದ ಬ್ಯಾಟರ್ ಭಾರತದ ಮುಂಚೂಣಿಯ ಆರಂಭಿಕ ಆಟಗಾರರಾಗಿದ್ದರು. ಅಭಿಷೇಕ್ ಶರ್ಮಾ ಜತೆಗೂಡಿ ಸ್ಯಾಮ್ಸನ್ ಎದುರಾಳಿ ತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದೇ ಗಂಭೀರ್ ಅವರು ಸ್ಯಾಮ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರು.
ಸೆಪ್ಟೆಂಬರ್ 2025 ರಲ್ಲಿ, ಶುಭಮನ್ ಗಿಲ್ ಏಷ್ಯಾಕಪ್ಗಾಗಿ ತಂಡಕ್ಕೆ ಮರಳಿದಾಗ, ಅವರನ್ನು ಉಪನಾಯಕನನ್ನಾಗಿ ನೇಮಿಸಲಾಯಿತು. ಆಗ ಅವರು ಅಭಿಷೇಕ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಬೇಕಿತ್ತು. ಹೀಗಾಗಿ, ಸ್ಯಾಮ್ಸನ್ ಅವರನ್ನು ಕೈಬಿಡಬೇಕು ಅಥವಾ ಕೆಳಗಿಳಿಸಬೇಕಾಯಿತು.
ಆಗಲೂ ಗೌತಮ್ ಗಂಭೀರ್ ಸಂಜು ಸ್ಯಾಮ್ಸನ್ ಅವರ ಬೆಂಬಲಕ್ಕೆ ನಿಂತರು. ಏಷ್ಯಾ ಕಪ್ ಸಮಯದಲ್ಲಿ ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ಸಾಧಾರಣ ಯಶಸ್ಸು ಪಡೆದರು. ಬಳಿಕ T20 ವಿಶ್ವಕಪ್ 2026ರಲ್ಲಿ ಸ್ಯಾಮ್ಸನ್ ಸ್ಥಾನ ಕಳೆದುಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಟೀಂ ಇಂಡಿಯಾ ಆಯ್ಕೆಗಾರರು ಗಿಲ್ ಅವರನ್ನು ಕೈಬಿಟ್ಟರು. ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಆರಂಭಿಕರಾಗಿ ಕರೆತಂದರು. ಆದರೆ, ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಳರಾದರು. ಕೆಲವೇ ದಿನಗಳಲ್ಲಿ, ಇಶಾನ್ ಕಿಶನ್ ಅವರನ್ನು ಮುಖ್ಯ ಆರಂಭಿಕರಾಗಿ ಬೆಂಬಲಿಸಲಾಯಿತು.
ಭಾರತದ ಮಾಜಿ ಬೌಲರ್ ಲಕ್ಷ್ಮೀಪತಿ ಬಾಲಾಜಿ ಪ್ರಕಾರ, ಮ್ಯಾನೇಜ್ಮೆಂಟ್ ಅವರನ್ನು ಮತ್ತೆ ಬೆಂಬಲಿಸುವುದಿಲ್ಲ, ವಿಶೇಷವಾಗಿ ಓಪನರ್ ಹೊರತುಪಡಿಸಿ ಯಾವುದೇ ಪಾತ್ರಕ್ಕಾಗಿಯೂ ಅವಲಂಬಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಭಾರತಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ತಂಡಕ್ಕೆ ಕೊಡುಗೆ ನೀಡುತ್ತಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕೆಎಲ್ ರಾಹುಲ್ ಅವರಿಗೆ ಸ್ಯಾಮ್ಸನ್ ಅನ್ನು ಹೋಲಿಸಿದ್ದಾರೆ.
ಎಲ್ಲ ಫಾರ್ಮ್ಯಾಟ್ಗಳಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿಯೂ ಸಹ ಅಗತ್ಯವಿದ್ದಾಗ ವಿಕೆಟ್ಗಳನ್ನು ಉಳಿಸಿಕೊಂಡಿದ್ದಾರೆ. ಆದರೆ, ಸ್ಯಾಮ್ಸನ್ ರಾಹುಲ್ನಂತಲ್ಲ. ಏಷ್ಯಾ ಕಪ್ ಸಮಯದಲ್ಲಿ, ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ಸನ್ ಅವರನ್ನು ಪ್ರಯತ್ನಿಸಲಾಯಿತು ಆದರೆ ಅದು ಕೆಲಸ ಮಾಡಲಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬೌಲಿಂಗ್ ಕೋಚ್ ಗಮನಸೆಳೆದರು.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ವರ್ಷಗಳ ಕಾಲ ಆಡಿದ್ದರೂ, ಸ್ಯಾಮ್ಸನ್ ಫ್ಲೆಕ್ಸಿಬಲಿಟಿಯನ್ನು ಹೊಂದಿಲ್ಲ. ಮತ್ತು ಅವರ ಬ್ಯಾಟ್ನಿಂದ ರನ್ಗಳು ಬರದಿದ್ದಾಗ, ತಂಡದ ಮ್ಯಾನೇಜ್ಮೆಂಟ್ ಅವರನ್ನು ಬೆಂಚ್ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.
'ಈಗಿನ ಥಿಂಕ್ ಟ್ಯಾಂಕ್ ಅವರಿಗೆ ನಿರ್ದಿಷ್ಟ ಪಾತ್ರವನ್ನು ನೀಡುವ ಮೂಲಕ ಪ್ರಯತ್ನಿಸಿದೆ. ಆದರೆ, ಅವರು ಮಧ್ಯಮ ಕ್ರಮಾಂಕದಲ್ಲಿ ಒತ್ತಡಕ್ಕೆ ಹೊಂದಿಕೊಳ್ಳುವ ಮತ್ತು ಹೀರಿಕೊಳ್ಳುವ ಕೆಎಲ್ ರಾಹುಲ್ ಅವರಂತಹ ಆಟಗಾರನಲ್ಲ. ಹೌದು, ಅವರಿಗೆ ಅಪಾರ ಅನುಭವವಿದೆ. ಆದರೆ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಆಡಬಾರದು' ಎಂದು ಬಾಲಾಜಿ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
Advertisement