T20 ವಿಶ್ವಕಪ್ 2026: 'ಯಾವುದೂ ಕಷ್ಟವಲ್ಲ..' Usman Tariq ವಿವಾದಾತ್ಮಕ ಬೌಲಿಂಗ್ ಶೈಲಿ ಎದುರಿಸಲು ಸೂಪರ್ ಐಡಿಯಾ ಕೊಟ್ಟ Sourav Ganguly!

ಪಾಕ್ ಬೌಲರ್ ಉಸ್ಮಾನ್ ತಾರಿಖ್ ಬೌಲಿಂಗ್ ಕುರಿತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
Sourav Ganguly Delivers Brutal Verdict On Usman Tariq
ಉಸ್ಮಾನ್ ತಾರಿಖ್ ಮತ್ತು ಸೌರವ್ ಗಂಗೂಲಿ
Updated on

ನವದೆಹಲಿ: ಟಿ20 ವಿಶ್ವಕಪ್ 2026 ಟೂರ್ನಿಯ ಇಂದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಪಾಕ್ ಬೌಲರ್ ಉಸ್ಮಾನ್ ತಾರಿಖ್ ರ ವಿವಾದಾತ್ಮಕ ಬೌಲಿಂಗ್ ಶೈಲಿ ಎದುರಿಸಲು ಭಾರತದ ಮಾದಿ ನಾಯಕ ಸೂಪರ್ ಐಡಿಯಾ ಕೊಟ್ಟಿದ್ದಾರೆ.

ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಪಾಕ್ ಬೌಲರ್ ಉಸ್ಮಾನ್ ತಾರಿಖ್ ಬೌಲಿಂಗ್ ಕುರಿತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಶನಿವಾರ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ)ಲ್ಲಿ ನಡೆದ ಟಿ20 ವಿಶ್ವಕಪ್ ನಿಯತಕಾಲಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸೌರವ್ ಗಂಗೂಲಿ, ಪಾಕಿಸ್ತಾನದ ಉಸ್ಮಾನ್ ತಾರಿಕ್ ಅವರನ್ನು ಸಾಮಾನ್ಯ ಆಫ್-ಸ್ಪಿನ್ನರ್ ಎಂದು ಬಣ್ಣಿಸಿದರು.

'ಅವರು ತಮ್ಮ ಎಸೆತದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡ ನಂತರವೇ ಚೆಂಡನ್ನು ಬಿಡುಗಡೆ ಮಾಡುತ್ತಾರೆ. ಆದರೆ ಈ ಬಗ್ಗೆ ಭಾರತದ ಬ್ಯಾಟರ್ ಗಳು ಗೊಂದಲಕ್ಕೀಡಾಗುವುದು ಬೇಡ. ಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅವರನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

"ಟಿ20ಗಳಲ್ಲಿ ಭವಿಷ್ಯ ನುಡಿಯುವುದು ಕಷ್ಟ, ಆದರೆ ಭಾರತ ಉತ್ತಮ ತಂಡ ಮತ್ತು ಅವರನ್ನು ಸೋಲಿಸುವುದು ಸುಲಭವಲ್ಲ. ಅಂತೆಯೇ ಇಲ್ಲಿ ಯಾವುದೂ ಕಷ್ಟವಲ್ಲ, ಅವರು (ತಾರಿಕ್) ಆಫ್-ಸ್ಪಿನ್ನರ್ ಮತ್ತು ಅವರು ವಿರಾಮದೊಂದಿಗೆ ಬೌಲಿಂಗ್ ಮಾಡುತ್ತಾರೆ. ಅವರು ಔಟ್-ಆನ್-ಔಟ್ ಆಫ್-ಸ್ಪಿನ್ನರ್ ಮತ್ತು ಭಾರತ ಅವರನ್ನು ಚೆನ್ನಾಗಿ ಆಡಿಸುತ್ತದೆ. ಆದಾಗ್ಯೂ, ಪಾಕಿಸ್ತಾನದ ವಿರುದ್ಧ ಭಾರತ ಬದಲಾಗದೆ ಆಡುವ ಹನ್ನೊಂದರ ತಂಡವನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.

Sourav Ganguly Delivers Brutal Verdict On Usman Tariq
T20 ವಿಶ್ವಕಪ್ 2026: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ?, ಕೊಲಂಬೋದಲ್ಲಿ ಶೇ.94ರಷ್ಟು ವರ್ಷಧಾರೆ ಸಾಧ್ಯತೆ!

ಪ್ಲೇಯಿಂಗ್ ಎಲೆವನ್ ಬಗ್ಗೆ ಗಂಗೂಲಿ ಮಾತು

"ಅಕ್ಷರ್ (ಪಟೇಲ್), ವರುಣ್ (ಚಕ್ರವರ್ತಿ), (ಜಸ್ಪ್ರಿತ್) ಬುಮ್ರಾ ಮತ್ತು ಅರ್ಷದೀಪ್ (ಸಿಂಗ್) ಮುಂಚೂಣಿಯ ಬೌಲರ್‌ಗಳಾಗಿರಬೇಕು. ಕುಲದೀಪ್ (ಯಾದವ್) ಬದಲಿಗೆ ರಿಂಕು (ಸಿಂಗ್) ಅವರನ್ನು ಬದಲಾಯಿಸಬಾರದು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನೀವು ಬ್ಯಾಟಿಂಗ್ ವಿಭಾಗದಲ್ಲೂ ಸಮತೋಲನವನ್ನು ನೋಡಿಕೊಳ್ಳಬೇಕು. ಅದೇ ತಂಡವನ್ನು ಆಡಬೇಕು ಎಂದು ನಾನು ಭಾವಿಸುತ್ತೇನೆ." ಮತ್ತು "ಭಾರತ ಚೆನ್ನಾಗಿ ಆಡುತ್ತದೆ" ಎಂದು ಗಂಗೂಲಿ ಹೇಳಿದರು.

ಅಂತೆಯೇ ಇತ್ತೀಚೆಗೆ ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಬಗ್ಗೆ ಕೇಳಿದಾಗ, ತಂಡದ ಮೇಲೆ ಗಮನ ಹರಿಸುವ ನಿಟ್ಟಿನಲ್ಲಿ "ಒಬ್ಬ ವ್ಯಕ್ತಿ ಮುಖ್ಯವಲ್ಲ" ಎಂದು ಅವರು ಹೇಳಿದರು. ಅಂತೆಯೇ ಪ್ರಸ್ತುತ ಪಾಕಿಸ್ತಾನ ತಂಡವು ಮೊದಲಿನಂತಿಲ್ಲ ಎಂದು ಹೇಳಿದ ಗಂಗೂಲಿ, "ಇಂಜಮಾಮ್ (ಉಲ್ ಹಕ್), ಸಯೀದ್ ಅನ್ವರ್, ಮೊಹಮ್ಮದ್ ಯೂಸುಫ್, ವಾಸಿಮ್ (ಅಕ್ರಂ), ವಕಾರ್ (ಯೂನಿಸ್) ಅವರಂತಹ ಬ್ಯಾಟ್ಸ್‌ಮನ್‌ಶಿಪ್‌ನ ಗುಣಮಟ್ಟ... ಅದು ವಿಭಿನ್ನ ತಂಡವಾಗಿತ್ತು. ಆ ತಂಡ ಈಗ ಇಲ್ಲ" ಎಂದು ಗಂಗೂಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com