Jammu and Kashmir skipper Paras Dogra headbutts Karnataka's KV Aneesh
ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಪರಾಸ್ ಡೋಗ್ರಾ

Ranji Trophy final: ಕರ್ನಾಟಕದ ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರದ ನಾಯಕ, Video

ಪ್ರಸಿದ್ಧ್ ಕೃಷ್ಣ ಎಸೆತವನ್ನು ಬೌಂಡರಿಗೆ ಅಟ್ಟಿದ ನಂತರ, ಡೋಗ್ರಾ ಕರ್ನಾಟಕ ತಂಡದ ಬದಲಿ ಫೀಲ್ಡರ್ ಆಗಿ ಮೈದಾನದಲ್ಲಿದ್ದ ಅನೀಶ್ ಜೊತೆ ಮಾತಿನ ಚಕಮಕಿಯಲ್ಲಿ ತೊಡಗಿದರು.
Published on

ರಣಜಿ ಟ್ರೋಫಿ ಫೈನಲ್‌ನ 2ನೇ ದಿನವಾದ ಫೆಬ್ರುವರಿ 25ರ ಬುಧವಾರ ಹುಬ್ಬಳ್ಳಿಯಲ್ಲಿ ಕರ್ನಾಟಕದ ಫೀಲ್ಡರ್‌ ಕೆವಿ ಅನೀಶ್‌ಗೆ ಜಮ್ಮು ಮತ್ತು ಕಾಶ್ಮೀರ ನಾಯಕ ಪರಾಸ್ ಡೋಗ್ರಾ ಅವರು ಡಿಚ್ಚಿ ಹೊಡೆದಿರುವ ಘಟನೆ ನಡೆದಿದೆ. ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ಸಂಭವಿಸಿತು. ಶುಭಂ ಪುಂಡಿರ್ ಮತ್ತು ಅಬ್ದುಲ್ ಸಮದ್ ಔಟಾದ ನಂತರ ಡೋಗ್ರಾ ಮತ್ತು ಕನ್ಹಯ್ಯಾ ವಾಧವನ್ ತಂಡಕ್ಕೆ ಸ್ಥಿರತೆ ನೀಡಿದರು.

ಪ್ರಸಿದ್ಧ್ ಕೃಷ್ಣ ಎಸೆತವನ್ನು ಬೌಂಡರಿಗೆ ಅಟ್ಟಿದ ನಂತರ, ಡೋಗ್ರಾ ಕರ್ನಾಟಕ ತಂಡದ ಬದಲಿ ಫೀಲ್ಡರ್ ಆಗಿ ಮೈದಾನದಲ್ಲಿದ್ದ ಅನೀಶ್ ಜೊತೆ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂದಿತು. ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್ ಕಡೆಗೆ ತೆರಳಿದ ಡೋಗ್ರಾ ಹೆಲ್ಮೆಟ್ ಧರಿಸಿದ್ದ ತಮ್ಮ ತಲೆಯಿಂದ ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಬಳಿಕ ಮಯಾಂಕ್ ಅಗರ್ವಾಲ್ ಸೇರಿದಂತೆ ಇತರ ಆಟಗಾರರು ಮತ್ತು ಅಂಪೈರ್‌ಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಯಿತು.

ಮೊದಲ ದಿನದಂದು 48 ಎಸೆತಗಳಲ್ಲಿ 9 ರನ್ ಗಳಿಸಿ ಗಾಯದ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿದ್ದ ಡೋಗ್ರಾ, ಎರಡನೇ ದಿನ ಮತ್ತೆ ತಂಡಕ್ಕೆ ಮರಳಿದರು ಮತ್ತು ಊಟದ ವಿರಾಮದ ವೇಳೆಗೆ 112 ಎಸೆತಗಳಲ್ಲಿ 36 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಕನ್ಹಯ್ಯಾ ಇನ್ನೊಂದು ತುದಿಯಲ್ಲಿ 45 ರನ್ ಗಳಿಸಿದರು. ನಾಲ್ಕು ವಿಕೆಟ್ ನಷ್ಟಕ್ಕೆ 380 ರನ್ ಗಳಿಸುವ ಮೂಲಕ ಜೆ&ಕೆ ತಂಡವು ಮೊದಲ ಅವಧಿಯನ್ನು ಕೊನೆಗೊಳಿಸಿತು.

Jammu and Kashmir skipper Paras Dogra headbutts Karnataka's KV Aneesh
Ranji Trophy final: ಮೊದಲ ದಿನ ಬಲಿಷ್ಠ ಕರ್ನಾಟಕ ವಿರುದ್ಧ ಪ್ರಾಬಲ್ಯ ಸಾಧಿಸಿದ ಜಮ್ಮು ಕಾಶ್ಮೀರ!

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡವು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಶುಭಂ ಪುಂಡೀರ್ ಅಜೇಯ 117 ರನ್ ಗಳಿಸಿ, ಸಂಯಮ ಮತ್ತು ನಿಯಂತ್ರಣದೊಂದಿಗೆ ಇನಿಂಗ್ಸ್ ಮುನ್ನಡೆಸಿದರು. ಅವರಿಗೆ ಯಾವರ್ ಹಸನ್ (88) ಉತ್ತಮ ಬೆಂಬಲ ನೀಡಿದರು. ಅಬ್ದುಲ್ ಸಮದ್ ಅಜೇಯ 52 ರನ್‌ಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ಸ್ಟಂಪ್‌ ಹೊತ್ತಿಗೆ 2 ವಿಕೆಟ್‌ ನಷ್ಟಕ್ಕೆ 284 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿತು.

2ನೇ ದಿನದ ಆರಂಭದಲ್ಲಿ ಸಮದ್ ಮತ್ತು ಪುಂಡಿರ್ ನಡುವಿನ ಜೊತೆಯಾಟದಿಂದಾಗಿ ತಂಡದ ಸ್ಕೋರ್ 303ಕ್ಕೆ ಏರಿಕೆಯಾಯಿತು. ನಂತರ ವಿದ್ಯಾಧರ್ ಪಾಟೀಲ್ ಅವರನ್ನು ಔಟ್ ಮಾಡಿದರು. ಶೀಘ್ರದಲ್ಲೇ, ಪ್ರಸಿದ್ಧ್ ಕೃಷ್ಣ ವಿಕೆಟ್ ಪಡೆದಾಗ ಸಮದ್ ಕೂಡ ಪೆವಿಲಿಯನ್‌ಗೆ ಮರಳಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com