KKRನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್: ಬಾಂಗ್ಲಾ ಆಟಗಾರರಿಗೆ ಭಾರತ ಸುರಕ್ಷಿತವಲ್ಲ; ICC ಬಾಗಿಲು ತಟ್ಟಲು ಬಾಂಗ್ಲಾದೇಶ ಮುಂದು!

ಬಾಂಗ್ಲಾದೇಶದ ಸದ್ಯದ ಭಾರತ ವಿರೋಧಿ ನಿಲುವಿನೊಂದಿಗೆ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಕೆಲವು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಕ್ರೌರ್ಯವು ಭಾರತೀಯರ ಒಂದು ಭಾಗದಲ್ಲಿ ದ್ವೇಷ ಹುಟ್ಟುಹಾಕಿದೆ.
Bangladesh - India team
ಭಾರತ vs ಬಾಂಗ್ಲಾದೇಶ
Updated on

ಐಪಿಎಲ್ 2026ರ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ಟಿ20 ವಿಶ್ವಕಪ್ 2026 ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕೋರಿ ಐಸಿಸಿಯನ್ನು ಔಪಚಾರಿಕವಾಗಿ ಸಂಪರ್ಕಿಸಲು ಸಜ್ಜಾಗಿದೆ. ಐಪಿಎಲ್ ಇತಿಹಾಸದಲ್ಲಿ ಬಾಂಗ್ಲಾದೇಶಿ ಆಟಗಾರನಿಗೆ ಇದುವರೆಗಿನ ಅತ್ಯಧಿಕ ಮೊತ್ತವಾದ ₹9.20 ಕೋಟಿಗೆ ಖರೀದಿಸಲಾಗಿತ್ತು. ಇದೀಗ ಮುಸ್ತಾಫಿಜುರ್ ಬಿಡುಗಡೆಯು ಮತ್ತೊಮ್ಮೆ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸಂಬಂಧಗಳನ್ನು ಅಪಾಯಕ್ಕೆ ಸಿಲುಕಿಸಿದೆ.

ಬಾಂಗ್ಲಾದೇಶದ ಸದ್ಯದ ಭಾರತ ವಿರೋಧಿ ನಿಲುವಿನೊಂದಿಗೆ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಕೆಲವು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಕ್ರೌರ್ಯವು ಭಾರತೀಯರ ಒಂದು ಭಾಗದಲ್ಲಿ ದ್ವೇಷ ಹುಟ್ಟುಹಾಕಿದೆ. ಹೀಗಾಗಿ, ಐಪಿಎಲ್‌ನಲ್ಲಿ ಮುಸ್ತಾಫಿಜುರ್ ಅವರನ್ನು ಮುಂದುವರಿಸುವ ಬಗ್ಗೆ ವ್ಯಾಪಕ ವಿರೋಧಗಳು ಕೇಳಿಬಂದವು. ಫೆಬ್ರುವರಿ 7 ರಿಂದ ಪ್ರಾರಂಭವಾಗುವ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ.

ಶನಿವಾರ ಸಿಲ್ಹೆಟ್‌ನಲ್ಲಿ ನಡೆದ ಬಿಸಿಬಿ ನಿರ್ದೇಶಕರ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರಿಕ್‌ಬಜ್ ಪ್ರಕಾರ, ಬಾಂಗ್ಲಾದೇಶ ಆಟಗಾರರು, ತಂಡದ ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿ, ಪ್ರಾಯೋಜಕರು ಮತ್ತು ಪ್ರಯಾಣ ಬೆಂಬಲಿಗರಿಗೆ ಪಂದ್ಯಾವಳಿಯ ಸಮಯದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ತುರ್ತು ಸ್ಪಷ್ಟೀಕರಣವನ್ನು ಕೋರಿ ಮಂಡಳಿಯು ಐಸಿಸಿಗೆ ಪತ್ರ ಬರೆಯಲಿದೆ. ಐಪಿಎಲ್ 2026ರಿಂದ ಮುಸ್ತಾಫಿಜುರ್ ಅವರನ್ನು ಕೆಕೆಆರ್ ತಂಡದಿಂದ ಕೈಬಿಟ್ಟಿರುವ ಸಂದರ್ಭಗಳ ಬಗ್ಗೆಯೂ ಬಿಸಿಬಿ ಬಿಸಿಸಿಐನಿಂದ ಔಪಚಾರಿಕ ವಿವರಣೆ ಪಡೆಯಲಿದೆ.

'ನಾವು ಐಸಿಸಿಗೆ ಪತ್ರ ಕಳುಹಿಸುತ್ತಿದ್ದೇವೆ. ಅದರಲ್ಲಿ ಮೂರು ಷರತ್ತುಗಳನ್ನು ಸೇರಿಸಿದ್ದೇವೆ. ಮೊದಲನೆಯದಾಗಿ, ಮುಸ್ತಾಫಿಜುರ್ (ಐಪಿಎಲ್‌ನಿಂದ ಹೊರಗಿಡುವಿಕೆ) ಬಗ್ಗೆ ಮತ್ತು ಎರಡನೆಯದಾಗಿ ವಿಶ್ವಕಪ್‌ನಲ್ಲಿ ನಮಗೆ ಭದ್ರತಾ ಯೋಜನೆ ಏನೆಂದು ತಿಳಿದುಕೊಳ್ಳಲು ಬಯಸುತ್ತೇವೆ. ಆಟಗಾರರು ಮಾತ್ರವಲ್ಲದೆ ಅವರೊಂದಿಗೆ ಮಾಧ್ಯಮಗಳು, ಅಭಿಮಾನಿಗಳು ಮತ್ತು ಪ್ರಾಯೋಜಕರು ಸಹ ವಿಶ್ವಕಪ್ ನೋಡಲು ಭಾರತಕ್ಕೆ ಪ್ರಯಾಣಿಸುತ್ತಾರೆ. ಅವರ ಭದ್ರತೆ ಬಗ್ಗೆ ತಿಳಿದುಕೊಳ್ಳಬೇಕಿದೆ' ಎಂದು ಬಿಸಿಬಿಯ ಉನ್ನತ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

Bangladesh - India team
ಆಕ್ರೋಶಕ್ಕೆ ಮಣಿದ BCCI: ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ KKR

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಯುವ ಮತ್ತು ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್ ಪ್ರತಿಕ್ರಿಯಿಸಿದ್ದು, 'ಇತ್ತೀಚಿನ ಬೆಳವಣಿಗೆಗಳ' ಕಾರಣದಿಂದ ಎಂದು ಹೇಳಿರುವ ಬಿಸಿಸಿಐ ಐಪಿಎಲ್‌ನಿಂದ ಬಾಂಗ್ಲಾದ ಆಟಗಾರನನ್ನು ತೆಗೆದುಹಾಕಿದರೆ ನಮ್ಮ ತಂಡವು ಸಹ ಭಾರತದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಯನ್ನು ವಿನಂತಿಸುವಂತೆ ನಾನು ಬಿಸಿಬಿಗೆ ಸೂಚನೆ ನೀಡಿದ್ದೇನೆ ಎಂದರು.

'ಕ್ರೀಡಾ ಸಚಿವಾಲಯದ ಉಸ್ತುವಾರಿ ಸಲಹೆಗಾರನಾಗಿ, ನಾನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಐಸಿಸಿಗೆ ಸಂಪೂರ್ಣ ವಿಷಯವನ್ನು ಲಿಖಿತವಾಗಿ ವಿವರಿಸುವಂತೆ ಕೇಳಿಕೊಂಡಿದ್ದೇನೆ. ಹರಾಜಿನಲ್ಲಿ ಖರೀದಿಸಿದ್ದರೂ, ಬಾಂಗ್ಲಾದೇಶದ ಕ್ರಿಕೆಟಿಗ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಇಡೀ ಬಾಂಗ್ಲಾದೇಶ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಆಡಲು ಸುರಕ್ಷಿತವಲ್ಲ ಎಂದು ಮಂಡಳಿ ತಿಳಿಸಬೇಕು' ಎಂದು ಡಾ. ಆಸಿಫ್ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.

ಐಪಿಎಲ್ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಲಹೆಗಾರರನ್ನು ವಿನಂತಿಸಿದ್ದೇನೆ. ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ ಕ್ರಿಕೆಟ್, ಕ್ರಿಕೆಟಿಗರು ಮತ್ತು ಬಾಂಗ್ಲಾದೇಶಕ್ಕೆ ನಾವು ಯಾವುದೇ ಅವಮಾನವನ್ನು ಸ್ವೀಕರಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ' ಎಂದು ಅವರು ಹೇಳಿದರು.

ಕೆಕೆಆರ್‌ಗೆ ಬದಲಿ ಆಯ್ಕೆಗಳು ಲಭ್ಯವಿದ್ದರೂ, ಅವರು ಖಂಡಿತವಾಗಿಯೂ ತಮ್ಮ ಯೋಜನೆಗಳಲ್ಲಿ ಮುಸ್ತಾಫಿಜುರ್ ಅವರನ್ನು ಹೊಂದಿದ್ದರು. ಏಕೆಂದರೆ, ಅವರು ಅವರ ಮೇಲೆ ಒಂಬತ್ತು ಕೋಟಿ ರೂಪಾಯಿಗಳನ್ನು ಸುರಿದಿದ್ದರು. ಮುಸ್ತಾಫಿಜುರ್ ಇಲ್ಲದಿರುವುದರಿಂದ ಕೆಕೆಆರ್ ತಂಡದಲ್ಲಿ ಈಗ ಮಥೀಷ ಪತಿರಾನ ಎಂಬ ಒಬ್ಬ ವಿದೇಶಿ ವೇಗಿಯನ್ನು ಮಾತ್ರ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com