Kerala Cricket League: ಹರಾಜಿಗೂ ಮುನ್ನವೇ ಸಂಜು ಸ್ಯಾಮ್ಸನ್ ಬಿಡುಗಡೆ ಮಾಡಿದ ಕೊಚ್ಚಿ ಬ್ಲೂ ಟೈಗರ್ಸ್!

KCL 2026 ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗೆ ನಿಗದಿಯಾಗಿದೆ; ಈ ಅವಧಿಯಲ್ಲಿ ಭಾರತಕ್ಕೆ ಯಾವುದೇ T20I ಪಂದ್ಯಗಳಿಲ್ಲ. ಸ್ಯಾಮ್ಸನ್ ಸದ್ಯ ಭಾರತದ T20I ತಂಡದ ಭಾಗವಾಗಿದ್ದಾರೆ.
Sanju Samson
ಸಂಜು ಸ್ಯಾಮ್ಸನ್
Updated on

ರೋಮಾಂಚಕಾರಿ ಟೂರ್ನಮೆಂಟ್‌ನ ಮೂರನೇ ಸೀಸನ್‌ಗೆ ಮುಂಚಿತವಾಗಿ ಕೇರಳ ಕ್ರಿಕೆಟ್ ಲೀಗ್ (ಕೆಸಿಎಲ್) ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿವೆ. ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಬಿಡುಗಡೆ ಮಾಡಿರುವುದು ಇದೀಗ ಆಶ್ಚರ್ಯಕ್ಕೆ ಕಾರಣವಾಗಿದೆ. ಕಳೆದ ಆವೃತ್ತಿಯಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಅನ್ನು ಪ್ರತಿನಿಧಿಸಿದ್ದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಅವರನ್ನು ಹರಾಜಿಗು ಮುನ್ನ ಫ್ರಾಂಚೈಸಿ ಉಳಿಸಿಕೊಂಡಿಲ್ಲ.

ಅವರ ಲಭ್ಯತೆಯ ಬಗ್ಗೆ ಅನಿಶ್ಚಿತತೆ ಇರಬಹುದು. ಆದರೆ, ಸ್ಯಾಮ್ಸನ್ ಲೀಗ್‌ಗೆ ಸಂಬಂಧಿಸಿದ ಅತಿದೊಡ್ಡ ಕ್ರಿಕೆಟಿಂಗ್ ಹೆಸರಾಗಿ ಉಳಿದಿರುವುದರಿಂದ ಅವರ ಬಿಡುಗಡೆಯು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಸ್ಯಾಮ್ಸನ್ ಅವರನ್ನು ಬಿಡುಗಡೆ ಮಾಡಿದ್ದರೂ ಅವರ ಕೆಸಿಎಲ್ ಪ್ರಯಾಣ ಮುಗಿದಿದೆ ಎಂದರ್ಥವಲ್ಲ. ವಾಸ್ತವವಾಗಿ, ಇದು ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ನಲ್ಲಿ ನೋಡಿದ ಪರಿಸ್ಥಿತಿಗೆ ಹೋಲುತ್ತದೆ. ಅಲ್ಲಿ ಭಾರತದ ಅಂತರರಾಷ್ಟ್ರೀಯ ಬದ್ಧತೆಗಳಿಂದಾಗಿ ಹರಾಜಿನಿಂದ ಹಿಂದೆ ಸರಿಯುವ ಮೊದಲು ರಿಷಭ್ ಪಂತ್ ಅವರನ್ನು ಪುರಾಣಿ ಡಿಲ್ಲಿ 6 ಬಿಡುಗಡೆ ಮಾಡಿತು.

KCL 2026 ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗೆ ನಿಗದಿಯಾಗಿದೆ; ಈ ಅವಧಿಯಲ್ಲಿ ಭಾರತಕ್ಕೆ ಯಾವುದೇ T20I ಪಂದ್ಯಗಳಿಲ್ಲ. ಸ್ಯಾಮ್ಸನ್ ಸದ್ಯ ಭಾರತದ T20I ತಂಡದ ಭಾಗವಾಗಿದ್ದಾರೆ. ಆದರೆ, ಪಂತ್ ವಿಷಯದಲ್ಲಿ DPL ನಡೆಯುವಾಗ ಭಾರತೀಯ ಟೆಸ್ಟ್ ತಂಡವು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿರುವುದರಿಂದ ಅವರು ಲಭ್ಯವಿರುವುದಿಲ್ಲ.

ಸ್ಯಾಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಆರ್ಥಿಕ ಕಾರಣವೊಂದು ಪ್ರಮುಖ ಅಂಶವಾಗಿರಬಹುದು. ಕಳೆದ ಆವೃತ್ತಿಯಲ್ಲಿ ಸ್ಯಾಮ್ಸನ್ ಅವರನ್ನು ₹26.80 ಲಕ್ಷಕ್ಕೆ ಖರೀದಿಸಲಾಗಿತ್ತು; ಇದು ಹರಾಜಿಗಾಗಿ ಮೀಸಲಿದ್ದ ಒಟ್ಟು ₹50 ಲಕ್ಷ ರೂಪಾಯಿಗಳ ಮೊತ್ತದ ಅರ್ಧಕ್ಕಿಂತಲೂ ಹೆಚ್ಚಿನ ಪಾಲಾಗಿತ್ತು. ಅವರನ್ನು ಬಿಡುಗಡೆ ಮಾಡುವ ಮೂಲಕ, ಕೊಚ್ಚಿ ತಂಡವು ತನ್ನ ಬಜೆಟ್‌ನ ಶೇ 50ಕ್ಕೂ ಹೆಚ್ಚು ಮೊತ್ತವನ್ನು ಉಳಿಸಿಕೊಂಡಂತಾಗಿದ್ದು, ಈಗ ತಂಡವನ್ನು ಮರುರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೊಸ ಆವೃತ್ತಿಯ ಆರಂಭಕ್ಕೂ ಮುನ್ನ ಬಿಡುಗಡೆಗೊಂಡಿರುವ ಮತ್ತೊಬ್ಬ ಪ್ರಮುಖ ಆಟಗಾರರೆಂದರೆ ಕೇರಳ ತಂಡದ ಮಾಜಿ ನಾಯಕ ಸಚಿನ್ ಬೇಬಿ.

Sanju Samson
India vs England, 1st T20I: 7 ಎಸೆತಗಳಲ್ಲಿ ಕೇವಲ 1 ರನ್; ಮತ್ತೊಮ್ಮೆ ಎಡವಿದ ಭಾರತದ ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್!

ಕಳೆದ ಆವೃತ್ತಿಯಲ್ಲಿ ಯಶಸ್ಸನ್ನು ತಂದುಕೊಟ್ಟ ಹಲವಾರು ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿವೆ. ತ್ರಿಶೂರ್ ಟೈಟಾನ್ಸ್ ತಂಡವು ಅಹಮ್ಮದ್ ಇಮ್ರಾನ್ ಅವರನ್ನು ಉಳಿಸಿಕೊಂಡಿದೆ. ಅವರು ಕೆಸಿಎಲ್ 2025ರಲ್ಲಿ 437 ರನ್ ಗಳಿಸಿ ಪಂದ್ಯಾವಳಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡವು ಸಲ್ಮಾನ್ ನಿಜಾರ್, ರೋಹನ್ ಕುನ್ನುಮ್ಮಲ್ ಮತ್ತು ಅಖಿಲ್ ಸ್ಕಾರಿಯಾ ಅವರನ್ನು ಉಳಿಸಿಕೊಂಡಿದೆ.

ಈಮಧ್ಯೆ, ಹಾಲಿ ಚಾಂಪಿಯನ್ ಕೊಚ್ಚಿ ಬ್ಲೂ ಟೈಗರ್ಸ್ ನಾಯಕ ಸ್ಯಾಲಿ ಸ್ಯಾಮ್ಸನ್ ಅವರನ್ನು ಬೆಂಬಲಿಸಿದೆ. ಆಶ್ಚರ್ಯಕರವಾಗಿ, ದುಬಾರಿ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದೆ.

X
Kannada Prabha
www.kannadaprabha.com