ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಕೇವಲ ಒಂದು ಪಂದ್ಯದಲ್ಲಿ ಆಡಿದ ನಂತರ, ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಸೋಮವಾರ ತಮ್ಮ 'ಆರ್ಕ್ಸ್ ಅಂಧೇರಿ' ಪರ ಮುಂಬೈ ಟಿ20 ಲೀಗ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿದರು. ಅರ್ಜುನ್ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನವು ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ ತಮ್ಮ ತಂಡ ಒಂಬತ್ತು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಲು ನೆರವಾದರು. ಪಂದ್ಯದ ನಂತರ, ಡ್ರೆಸ್ಸಿಂಗ್ ಕೋಣೆಯಲ್ಲಿ ಫ್ರಾಂಚೈಸಿ ನಾಯಕ ಶಿವಂ ದುಬೆ ಅವರಿಂದ ಅರ್ಜುನ್ ವಿಶೇಷ ಪ್ರಶಂಸೆ ಪಡೆದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಅರ್ಜುನ್ ಆರ್ಕ್ಸ್ ಅಂಧೇರಿ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಅತ್ಯುತ್ತಮ ಪ್ರದರ್ಶನ ನೀಡಿದ ತಂಡದ ಎಲ್ಲ ಆಟಗಾರರನ್ನು ನಾಯಕ ದುಬೆ ಶ್ಲಾಘಿಸಿದರು. ಈ ವಿಡಿಯೋದ ಆರಂಭದಲ್ಲಿ ಅರ್ಜುನ್ ಅವರ ಆಲ್ರೌಂಡ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಆ ಹೆಸರನ್ನು ಕೇಳುತ್ತಿದ್ದಂತೆಯೇ ಅರ್ಜುನ್ ಭಾವುಕನಾದಂತೆ ಕಾಣುತ್ತಿತ್ತು. ಅವರ ಮುಖಭಾವನೆಗಳು ಅಭಿಮಾನಿಗಳಿಗೆ ಆ ಹೊಗಳಿಕೆ ಮತ್ತು ಪ್ರದರ್ಶನ ಅವರಿಗೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಅರಿತುಕೊಳ್ಳುವಂತೆ ಮಾಡಿತು.
ತಂಡದಲ್ಲಿರುವ ಇತರ ಹಲವಾರು ಆಟಗಾರರ ಬಗ್ಗೆ ದುಬೆ ಮೆಚ್ಚುಗೆ ವ್ಯಕ್ತಪಡಿಸಿದರು. 'ನಮ್ಮ ತಂಡದಲ್ಲಿ, ನಮಗೆ ಒಂದಲ್ಲ ಎರಡು ಬೆನ್ನೆಲುಬುಗಳಿವೆ. ಅವರು ಅಜಯ್ ಮಿಶ್ರಾ ಮತ್ತು ಮುಶೀರ್ ಖಾನ್. ದಿವ್ಯಾಂಶ್ ಅವರಿಂದ ಅದ್ಭುತ ಆರಂಭ, ಮುಶೀರ್ ಅವರಿಂದ ವಿಶೇಷ ಇನಿಂಗ್ಸ್ ಮೂಡಿಬಂತು' ಎಂದರು.
ಅರ್ಜುನ್ ಮೂರು ಓವರ್ಗಳಲ್ಲಿ ಒಂದು ಮೇಡಿನ್ ಸೇರಿದಂತೆ 3/11 ವಿಕೆಟ್ ಪಡೆದು ಬಾಂದ್ರಾ ಬ್ಲಾಸ್ಟರ್ಸ್ ತಂಡವನ್ನು 144/9 ಕ್ಕೆ ಸೀಮಿತಗೊಳಿಸಲು ಸಹಾಯ ಮಾಡಿದರು ಮತ್ತು ನಂತರ ಚೇಸಿಂಗ್ನಲ್ಲಿ ಅಜೇಯ ಅರ್ಧಶತಕ ಗಳಿಸಿದರು.
145 ರನ್ಗಳ ಗುರಿ ಬೆನ್ನಟ್ಟಿದ ಆರ್ಕ್ಸ್ ಅಂಧೇರಿ ತಂಡವು ದಿವ್ಯಾಂಶ್ ಸ್ಕ್ಸೇನಾ (26) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ, ಅರ್ಜುನ್ ಮತ್ತು ಮುಶೀರ್ ಖಾನ್ ಬೇಗನೆ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಈ ಜೋಡಿ ಎರಡನೇ ವಿಕೆಟ್ಗೆ ಅಜೇಯ 116 ರನ್ಗಳ ಜೊತೆಯಾಟವಾಡಿತು. ಅರ್ಜುನ್ 34 ಎಸೆತಗಳಲ್ಲಿ ಔಟಾಗದೆ 66 ರನ್ ಗಳಿಸಿದರು ಮತ್ತು ಮುಶೀರ್ 38 ಎಸೆತಗಳಲ್ಲಿ ಔಟಾಗದೆ 54 ರನ್ ಗಳಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಆರ್ಕ್ಸ್ ಅಂಧೇರಿ ತಂಡವು ಕೈಯಲ್ಲಿ ಒಂಬತ್ತು ವಿಕೆಟ್ಗಳು ಮತ್ತು ಇನ್ನೂ 37 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿ ಸಮಗ್ರ ಗೆಲುವು ಸಾಧಿಸಿತು.
Advertisement