ತ್ರಿಕೋನ ಸರಣಿ: ರೋಚಕ ಪಂದ್ಯ ಟೈನಲ್ಲಿ ಅಂತ್ಯ; ಸೂಪರ್ ಓವರ್​ನಲ್ಲಿ ಲಂಕಾ ವಿರುದ್ಧ ಎಡವಿದ ಭಾರತಕ್ಕೆ ಸೋಲು!

ತ್ರಿಕೋನ ಏಕದಿನ ಸರಣಿಯ ಆತಿಥೇಯ ಶ್ರೀಲಂಕಾ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಸೂಪರ್ ಓವರ್ ನಲ್ಲಿ 6 ರನ್ ಗಳಿಂದ ಸೋತಿದೆ.
Tilak Varma, Vaibhav Sooryavanshi
ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ
Updated on

ಡಾಂಬುಲ್ಲಾ: ತ್ರಿಕೋನ ಸರಣಿಯ ನಾಲ್ಕನೇ ಪಂದ್ಯವನ್ನು ಶ್ರೀಲಂಕಾ ಎ ಮತ್ತು ಭಾರತ ಎ ನಡುವೆ ಡಂಬುಲ್ಲಾದ ರಂಗಿರಿ ಡಂಬುಲ್ಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಶ್ರೀಲಂಕಾ ತಂಡವು ಸೂಪರ್ ಓವರ್‌ನಲ್ಲಿ ಭಾರತವನ್ನು ಸೋಲಿಸಿದೆ. ಆದಾಗ್ಯೂ, ಪಂದ್ಯವು ತೀವ್ರ ನಾಟಕೀಯತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ ಪಂದ್ಯವು ಟೈ ಆಗುತ್ತದೆಯೇ ಅಥವಾ ಸೂಪರ್ ಓವರ್ ಆಗುತ್ತದೆಯೇ ಎಂಬ ಬಗ್ಗೆ ಆರಂಭದಲ್ಲಿ ವಿವಾದವಿತ್ತು. ಭಾರತದ ನಾಯಕ ತಿಲಕ್ ವರ್ಮಾ ಮೈದಾನದಲ್ಲಿರುವ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿದ್ದರು.

ಇದರ ನಂತರ, ಮೂರನೇ ಅಂಪೈರ್ ಪಂದ್ಯವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. ಶ್ರೀಲಂಕಾ ಸೂಪರ್ ಓವರ್‌ನಲ್ಲಿ 16 ರನ್ ಗಳಿಸಿತು. ಭಾರತಕ್ಕೆ 17 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಮೊದಲ ಮೂರು ಎಸೆತಗಳಲ್ಲಿ 3 ರನ್ ಗಳಿಸಿತು. ವೈಭವ್ ಕೊನೆಯ ಮೂರು ಎಸೆತಗಳಲ್ಲಿ 14 ರನ್ ಗಳಿಸಬೇಕಾಗಿತ್ತು. ಆದರೆ ಕೇವಲ 7 ರನ್ ಗಳಿಸಿದ್ದು ಇದರ ಪರಿಣಾಮವಾಗಿ ಭಾರತದ ಸೋಲು ಅನುಭವಿಸಿತು.

Tilak Varma, Vaibhav Sooryavanshi
Tri Nation A Series: ಶ್ರೀಲಂಕಾ ಎ ವಿರುದ್ಧ ಮತ್ತೊಮ್ಮೆ ಎಡವಿದ ವೈಭವ್ ಸೂರ್ಯವಂಶಿ; 14 ಎಸೆತಗಳಲ್ಲಿ 21 ರನ್ ಗಳಿಸಿ ಔಟ್!

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 265 ರನ್ ಗಳಿಗೆ ಆಲೌಟ್ ಆಗಿತ್ತು. 266 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾಗೆ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್‌ಗಳು ಬೇಕಾಗಿತ್ತು. ಆದರೆ ಸಿ. ಗುಣಶೇಖರ ಒಂದು ಸಿಂಗಲ್ ಪಡೆದರು. ಎರಡನೇ ರನ್ ಗಳಿಸುವ ಸಮಯದಲ್ಲಿ ಗುಣಶೇಖರ ರನ್ ಔಟ್ ಆಗಿದ್ದರು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. 2 ಪಂದ್ಯಗಳಲ್ಲಿ ಗೆದ್ದಿರುವ ಶ್ರೀಲಂಕಾ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೇ 2 ಅಂಕಗಳನ್ನು ಗಳಿಸಿರುವ ಭಾರತ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದೆ.

Tilak Varma, Vaibhav Sooryavanshi
ಸೂಪರ್ ಓವರ್​ನಲ್ಲಿ ಭಾರತ ಸೋಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಹಾಗೂ Vaibhav Sooryavanshi ನಡುವೆ ಗಲಾಟೆ, Video!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com