'ನನ್ನನ್ನು ನಾನು ಕೊಲ್ಲದಿರಲು ಅವಳೇ ಕಾರಣ': ತಿಹಾರ್ ಜೈಲಿನಲ್ಲಿ 27 ದಿನ ಕಳೆದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್

ತಮ್ಮ ಪತ್ನಿ ವಕೀಲರೊಂದಿಗೆ ಮಾತನಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ತಮ್ಮನ್ನು ಖಳನಾಯಕ ಎಂದು ಹಣೆಪಟ್ಟಿ ಕಟ್ಟುತ್ತಿದ್ದ ಸಮಯದಲ್ಲಿ, ನನ್ನ ಪತ್ನಿಯ ಕುಟುಂಬವು ತನ್ನ ಬೆಂಬಲಕ್ಕೆ ಬಂಡೆಯಂತೆ ನಿಂತಿತು ಎಂದು ಶ್ರೀಶಾಂತ್ ಹೇಳಿದರು.
S Sreesanth
ಸ್ ಶ್ರೀಶಾಂತ್
Updated on

ಎರಡು ವಿಶ್ವಕಪ್‌ಗಳನ್ನು ಗೆದ್ದ ಭಾರತೀಯ ತಂಡದ ಕ್ರಿಕೆಟಿಗರಲ್ಲಿ ಭಾರತ ತಂಡದ ಮಾಜಿ ಆಟಗಾರ ಎಸ್ ಶ್ರೀಶಾಂತ್ ಕೂಡ ಒಬ್ಬರು. ಅವರು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು. ಶ್ರೀಶಾಂತ್ 2013ರ ಐಪಿಎಲ್ ಸಮಯದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪವನ್ನು ಎದುರಿಸಿದರು. 2015ರಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು. ಆದರೆ, ಅದಕ್ಕೂ ಮೊದಲು ಅವರನ್ನು 2013 ರಲ್ಲಿ ರಾಜಸ್ಥಾನ ರಾಯಲ್ಸ್‌ನ (RR) ಇತರ ಇಬ್ಬರು ಆಟಗಾರರಾದ ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರೊಂದಿಗೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸುಮಾರು ಒಂದು ತಿಂಗಳು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು.

ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿರುವ ಶ್ರೀಶಾಂತ್, ತಿಹಾರ್‌ ಜೈಲಿನಲ್ಲಿ ತಾನು ಬದುಕಿದ್ದ ಏಕೈಕ ಕಾರಣವೇ ಜೈಪುರದ ಶೇಖಾವತ್/ದಿವಾನ್‌ಪುರ ರಾಜಮನೆತನದಿಂದ ಬಂದ ಪತ್ನಿ ಭುವನೇಶ್ವರಿ ದೇವಿ ಎಂದು ಹೇಳಿದರು.

2007ರಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ತಮ್ಮ ಭಾವಿ ಪತ್ನಿ ಭುವನೇಶ್ವರಿಯನ್ನು ಭೇಟಿಯಾದ ಬಗ್ಗೆ ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪ ಬಂದಾಗ ತಮ್ಮ ಪತ್ನಿ ಮತ್ತು ಅವರ ಕುಟುಂಬ ತಮ್ಮ ಶಕ್ತಿಯ ಆಧಾರಸ್ತಂಭಗಳಾಗಿದ್ದರು ಎಂದು ಭಾರತದ ಮಾಜಿ ತಾರೆ ಹೇಳಿದ್ದಾರೆ.

'ಮೊದಲ ಭೇಟಿ ನಾನು ಅತಿಥಿಯಾಗಿ ಹೋಗಿದ್ದ ಶಾಲೆಯಲ್ಲಿ, ಎರಡನೇ ಭೇಟಿ ಮರುದಿನವೇ ಮೈದಾನದಲ್ಲಿ, ಆದಾದ ಮೂರು ವರ್ಷಗಳ ನಂತರ ಅವರ ಚಿಕ್ಕಪ್ಪನೊಂದಿಗೆ ಮೂರನೇ ಭೇಟಿ, ಇಂದೋರ್‌ನಲ್ಲಿ ನಾಲ್ಕನೇ ಭೇಟಿ, ಐದನೇ ಭೇಟಿ ನಾನು ಜಾಮೀನಿನ ಮೇಲೆ ಹೊರಬಂದಾಗ ನಾವು ನಿಶ್ಚಿತಾರ್ಥ ಮಾಡಿಕೊಂಡೆವು' ಎಂದು ಶ್ರೀಶಾಂತ್ ಹೇಳಿದರು.

S Sreesanth
'ವಿರಾಟ್ ಕೊಹ್ಲಿ ಜೊತೆ ವೈಭವ್ ಸೂರ್ಯವಂಶಿ ಆಡುವುದು ಅದ್ಭುತ': ಒಲಿಂಪಿಕ್ಸ್ 2028ಕ್ಕೆ BCCIಗೆ ಮಾಜಿ ಆಟಗಾರ ಎಸ್ ಶ್ರೀಶಾಂತ್ ಸಲಹೆ

'ನಾನು ಅಲ್ಲಿದ್ದಾಗ, ನಾನು ಆತ್ಮಹತ್ಯೆ ಮಾಡಿಕೊಳ್ಳದಿರಲು ಮುಖ್ಯ ಕಾರಣಗಳಲ್ಲಿ ಅವಳು ಒಂದು. ನಾವು 2011ರ ವಿಶ್ವಕಪ್ ಗೆದ್ದರೆ, ನಾನು ಅವಳನ್ನು ಮದುವೆಯಾಗುತ್ತೇನೆ ಎಂದು 2010 ರಲ್ಲಿ ನಾನು ಅವಳಿಗೆ ಭರವಸೆ ನೀಡಿದ್ದೆ. ಅವಳು 2007ರಲ್ಲಿ 10ನೇ ತರಗತಿಯಲ್ಲಿದ್ದಾಗ ನಾನು ಅವಳನ್ನು ಭೇಟಿಯಾದೆ ಮತ್ತು ನಾವು 2013ರವರೆಗೆ ಸಂಪರ್ಕದಲ್ಲಿದ್ದೆವು. ನನಗೆ ಜಾಮೀನು ಸಿಗಲು ಅವಳು ಮುಖ್ಯ ಕಾರಣ' ಎಂದು ತಿಳಿಸಿದರು.

ತಮ್ಮ ಪತ್ನಿ ವಕೀಲರೊಂದಿಗೆ ಮಾತನಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ತಮ್ಮನ್ನು ಖಳನಾಯಕ ಎಂದು ಹಣೆಪಟ್ಟಿ ಕಟ್ಟುತ್ತಿದ್ದ ಸಮಯದಲ್ಲಿ, ನನ್ನ ಪತ್ನಿಯ ಕುಟುಂಬವು ತನ್ನ ಬೆಂಬಲಕ್ಕೆ ಬಂಡೆಯಂತೆ ನಿಂತಿತು ಎಂದು ಶ್ರೀಶಾಂತ್ ಹೇಳಿದರು.

'ದೆಹಲಿ ಪೊಲೀಸ್ ಸೆಲ್‌ನಲ್ಲಿ ಆ 12 ದಿನಗಳು ಮತ್ತು ತಿಹಾರ್ ಜೈಲಿನಲ್ಲಿ 27 ದಿನಗಳು ನಾವು ಸಾಮಾನ್ಯ ಜೀವನದಲ್ಲಿ ಎದುರಿಸುವ ಸಮಸ್ಯೆಗಳು ಏನೇನೇೂ ಅಲ್ಲ ಎಂಬುದನ್ನು ನನಗೆ ಅರಿವು ಮಾಡಿಸಿತು. ವಿಚಾರಣೆಗೆ ವರ್ಷಗಳು ಕಳೆದು ಹೋಗುತ್ತವೆ ಎಂದು ನಾನು ಕೇಳುತ್ತಿದ್ದೆ. ಆ ಘಟನೆ ನನ್ನನ್ನು ಬಲಪಡಿಸಿತು. ಆ ಸಮಯದಲ್ಲಿ ನಾನು ನನ್ನ ತಾಯಿ ಮತ್ತು ತಂದೆಯ ಬಗ್ಗೆ, ಸೊಸೆ ಮತ್ತು ಸೋದರಳಿಯ ಬಗ್ಗೆ ಯೋಚಿಸುತ್ತಿದ್ದೆ. ಆಗ ನಾನು ಅವರನ್ನು ಶಾಲೆಗೆ ಹೋಗಲು ಬಿಡಲಿಲ್ಲ. ಪೂರ್ಣ ಒಂದು ತಿಂಗಳ ಕಾಲ, ದೇಶದಾದ್ಯಂತ ನನ್ನ ಮೇಲೆ ಮಾತ್ರ ಗಮನವಿತ್ತು' ಎಂದು ಶ್ರೀಶಾಂತ್ ಹೇಳಿದರು.

ಶ್ರೀಶಾಂತ್ ಮತ್ತು ಭುವನೇಶ್ವರಿ 2013 ರಲ್ಲಿ ವಿವಾಹವಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com