IPL 2026: 'ರುತುರಾಜ್ ಗಾಯಕ್ವಾಡ್ ಸರಿಯಾದ ಆಯ್ಕೆ, ಸಂಜು ಸ್ಯಾಮ್ಸನ್ ಅವರತ್ತ ನೋಡಲೇಬೇಡಿ...'; CSKಗೆ ಎಬಿ ಡಿವಿಲಿಯರ್ಸ್ ಸಲಹೆ!

ಸಿಎಸ್‌ಕೆ ಗಾಯಕ್‌ವಾಡ್‌ಗೆ ಒಲವು ತೋರಬೇಕು ಮತ್ತು ವದಂತಿಗಳು ಮತ್ತು ಇತರ ನಾಯಕತ್ವದ ಅಭ್ಯರ್ಥಿಗಳ ಬಗ್ಗೆ ಯೋಚಿಸಬೇಕಿಲ್ಲ ಎಂದು ಮಾಜಿ RCB ಆಟಗಾರ ಬಹಿರಂಗಪಡಿಸಿದ್ದಾರೆ.
Sanju Samson - Ruturaj Gaikwad
ಸಂಜು ಸ್ಯಾಮ್ಸನ್ - ರುತುರಾಜ್ ಗಾಯಕ್ವಾಡ್
Updated on

ಐಪಿಎಲ್ 2026ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಸ್ಥಾನ್ ರಾಯಲ್ಸ್ (RR) ತಂಡದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಬಂದಿರುವ ಸಂಜು ಸ್ಯಾಮ್ಸನ್ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಜೊತೆಗೆ 11 ಆವೃತ್ತಿಗಳನ್ನು ಕಳೆದ ನಂತರ, ಕೇರಳದ ಸೂಪರ್‌ಸ್ಟಾರ್ ಇದೀಗ ಹಳದಿ ಜೆರ್ಸಿ ತೊಟ್ಟು ಸಿಎಸ್‌ಕೆ ಪರ ಕಣಕ್ಕೆ ಇಳಿಯಲಿದ್ದಾರೆ.

ಆದರೆ, ಸಿಎಸ್‌ಕೆ ನಾಯಕನಾಗಿ ಮೂರನೇ ಆವೃತ್ತಿಯನ್ನು ಆರಂಭಿಸಲಿರುವ ರುತುರಾಜ್ ಗಾಯಕ್ವಾಡ್‌ ಅವರ ಮೇಲೆ ಸಂಜು ಸ್ಯಾಮ್ಸನ್‌ ಸೇರ್ಪಡೆಯು ಒತ್ತಡ ತಂದಿದೆ ಎನ್ನಲಾಗಿದೆ. ಸಂಜು ಸ್ಯಾಮ್ಸನ್ ಅವರಿಗೆ ಸಿಎಸ್‌ಕೆ ನಾಯಕನ ಪಾತ್ರವನ್ನು ನೀಡುತ್ತದೆಯೇ ಎಂದು ಕೇಳಿದಾಗ, ಮಾಜಿ ದಂತಕಥೆ ಎಬಿ ಡಿವಿಲಿಯರ್ಸ್ ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. 2024 ರಿಂದ ತಂಡವನ್ನು ಮುನ್ನಡೆಸುತ್ತಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ಬೆಂಬಲಿಸಬೇಕು ಎಂದಿದ್ದಾರೆ. ಐಪಿಎಲ್ 2024ನೇ ಆವೃತ್ತಿ ಆರಂಭದ ಮುನ್ನಾದಿನ MS ಧೋನಿ CSK ನಾಯಕತ್ವದಿಂದ ಕೆಳಗಿಳಿದರು. ಅಂದಿನಿಂದ ರುತುರಾಜ್ ಗಾಯಕ್ವಾಡ್ ತಂಡದ ಸಾರಥ್ಯ ವಹಿಸಿದ್ದಾರೆ.

'ಅವರು ಸರಿಯಾದ ನಾಯಕನನ್ನು ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಸಂಜು ಅವರನ್ನು ನಾಯಕನನ್ನಾಗಿ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ರುತುರಾಜ್‌ ಅವರ ನಾಯಕತ್ವದಿಂದ ತೃಪ್ತಿ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಒಬ್ಬ ವ್ಯಕ್ತಿಯೊಂದಿಗೆ ಅಂಟಿಕೊಳ್ಳಿ; 'ಸಂಜು ಸಿಎಸ್‌ಕೆ ತಂಡದ ನಾಯಕನಾಗಲಿದ್ದಾರೆಯೇ?' ಎಂದು ಹೇಳುವ ಯಾವುದೇ ಮಾಧ್ಯಮಗಳು ಅಥವಾ ಪತ್ರಿಕಾ ಪ್ರಕಟಣೆಗಳಿಗೆ ಬೆಂಬಲ ನೀಡಬೇಡಿ. ಸದ್ಯಕ್ಕೆ ಸಿಎಸ್‌ಕೆಗೆ ಹೊಸ ನಾಯಕನ ಅಗತ್ಯವಿಲ್ಲ' ಎಂದಿದ್ದಾರೆ.

Sanju Samson - Ruturaj Gaikwad
ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್ ಅಯ್ಯರ್‌, RCB ಗೆ ಫಿಲ್ ಸಾಲ್ಟ್‌ರನ್ನು ಬಿಟ್ಟುಕೊಟ್ಟು KKR ದೊಡ್ಡ ತಪ್ಪು ಮಾಡಿತು: ಅನಿಲ್ ಕುಂಬ್ಳೆ

ಸಿಎಸ್‌ಕೆ ಗಾಯಕ್‌ವಾಡ್‌ಗೆ ಒಲವು ತೋರಬೇಕು ಮತ್ತು ವದಂತಿಗಳು ಮತ್ತು ಇತರ ನಾಯಕತ್ವದ ಅಭ್ಯರ್ಥಿಗಳ ಬಗ್ಗೆ ಯೋಚಿಸಬೇಕಿಲ್ಲ ಎಂದು ಮಾಜಿ RCB ಆಟಗಾರ ಬಹಿರಂಗಪಡಿಸಿದ್ದಾರೆ.

'ಆ ಬಗ್ಗೆ ಯಾವುದೇ ಪ್ರಶ್ನೆಗಳು ಕೇಳಿಬಂದರೆ, CSK ನೇರವಾಗಿ, ಸ್ಪಷ್ಟವಾಗಿರಬೇಕು ಮತ್ತು ರುತುರಾಜ್ ಗಾಯಕ್ವಾಡ್ ನಮ್ಮ ನಾಯಕ, ಬೇರೆ ಯಾವುದೇ ನಾಯಕನ ಬಗ್ಗೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳಬೇಕು. ಸಂಜು, ಎಂಎಸ್ ಧೋನಿ ಮತ್ತು ಇತರ ಕೆಲವು ಹಿರಿಯರು ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com