

ಬೆಂಗಳೂರು: ಟೆಸ್ಟ್ ಮತ್ತು ಟಿ20ಐ ಸ್ವರೂಪಗಳಿಂದ ನಿವೃತ್ತರಾಗಿದ್ದರೂ ಸಹ ವಿರಾಟ್ ಕೊಹ್ಲಿ ತಮ್ಮ ಅಪ್ರತಿಮ ಶಕ್ತಿ ಮತ್ತು ತೀವ್ರತೆಯಿಂದ ಈಗಲೂ 'ಮಾತನಾಡುವುದನ್ನು' ಮುಂದುವರೆಸಿದ್ದಾರೆ (ಬದ್ಧತೆ ಕಡಿಮೆಯಾಗಿಲ್ಲ) ಎಂದು ಮಾಜಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಕಳೆದ ವರ್ಷದ ಜೂನ್ 3 ರಂದು ನಡೆದ ಐಪಿಎಲ್ ಫೈನಲ್ ಪಂದ್ಯದ ನಂತರ ಮೊದಲ ಬಾರಿಗೆ ಟಿ20 ಕ್ರಿಕೆಟ್ಗೆ ಮರಳಿದ್ದ ಕೊಹ್ಲಿ, ಐಪಿಎಲ್ನಲ್ಲಿ ತಮ್ಮ 28ನೇ ಅರ್ಧಶತಕವನ್ನು (38 ಎಸೆತಗಳಲ್ಲಿ ಔಟಾಗದೆ 69) ಬಾರಿಸುವ ಮೂಲಕ 2026ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
'ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆಟವನ್ನು ಪೂರ್ಣ ಪ್ರಯತ್ನ, ಕೌಶಲ್ಯ ಮತ್ತು ತೀವ್ರತೆಯಿಂದ ಹೇಗೆ ಆಡಬೇಕು ಎಂಬುದನ್ನು ತೋರಿಸುತ್ತಿದ್ದಾರೆ. ಇದು ಇತರರಿಗೆ ಮಾದರಿಯಾಗುವಂತೆ ಇತ್ತು. ಇದು ನನ್ನನ್ನು ಪ್ರಭಾವಿತಗೊಳಿಸಿತು' ಎಂದು ಜಿಯೋ ಹಾಟ್ಸ್ಟಾರ್ ಕಾರ್ಯಕ್ರಮದಲ್ಲಿ ಅಶ್ವಿನ್ ಹೇಳಿದರು.
ಐಪಿಎಲ್ಗೆ ಬರುವಾಗಲೇ ಕೊಹ್ಲಿ ಅದ್ಭುತ ಲಯದಲ್ಲಿದ್ದರು. ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 93, 23 ಮತ್ತು 124 ರನ್ ಗಳಿಸಿದ್ದರು. ಅಲ್ಲಿ ಅವರು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. 37 ವರ್ಷದ ಆಟಗಾರ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಸರಣಿಯಲ್ಲಿ ಎರಡು ಶತಕಗಳು ಸೇರಿದಂತೆ 302 ರನ್ಗಳನ್ನು ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರು.
ತಮ್ಮ ವಯಸ್ಸು ಮತ್ತು ಅನುಭವದ ಹೊರತಾಗಿಯೂ, ಅವರ ಶಕ್ತಿ ಹೇಗೆ ಅಸಾಧಾರಣವಾಗಿದೆ ಎಂಬುದಕ್ಕೆ ಅವರು ವಿಕೆಟ್ಗಳ ನಡುವೆ ಓಡುವ ಉದಾಹರಣೆಯನ್ನು ಉಲ್ಲೇಖಿಸಿದರು.
'ಈ ವಯಸ್ಸಿನಲ್ಲಿಯೂ ಅವರ ಶಕ್ತಿಯನ್ನು ನೋಡುವುದು ತುಂಬಾ ವಿಚಿತ್ರವೆನಿಸುತ್ತದೆ. ನಾನು ಇದನ್ನು ಆಗಾಗ ನಮ್ಮ ಮಾತುಕತೆಯ ಸಮಯದಲ್ಲಿ ಅವರಿಗೆ ಹೇಳುತ್ತೇನೆ. ಒಂದು ಹಂತದಲ್ಲಿ ಅವರು ಮೊದಲ ಸಿಂಗಲ್ಗಾಗಿ ಓಡಿ ಬಂದರು. ಅಷ್ಟೊತ್ತಿಗೆ ಇನ್ನೊಬ್ಬ ಬ್ಯಾಟ್ಸ್ಮನ್ ಅರ್ಧದಾರಿ ತಲುಪಿರಲಿಲ್ಲ, ಆದರೆ ಅವರು ಈಗಾಗಲೇ ಎರಡನೇ ರನ್ಗಾಗಿ ಎದುರು ನೋಡುತ್ತಿದ್ದರು. ಅದು ಲೆಗ್ ಸೈಡ್ನಲ್ಲಿ 57 ಮೀ ಬೌಂಡರಿ ಆಗಿತ್ತು ಮತ್ತು ಇದು ಅವರು ಇನ್ನೂ ಆಟಕ್ಕೆ ತರುವ ಉತ್ಸಾಹವನ್ನು ತೋರಿಸುತ್ತದೆ' ಎಂದು ಅಶ್ವಿನ್ ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜೇಕಬ್ ಡಫಿ ಅವರ ಪ್ರದರ್ಶನವನ್ನು ಭಾರತದ ಪ್ರಮುಖ ಆಫ್-ಸ್ಪಿನ್ನರ್ ಹೊಗಳಿದರು.
ಟಿ20 ವಿಶ್ವಕಪ್ನಲ್ಲಿ ಓವರ್ಗೆ 10ಕ್ಕೂ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟು ಕೇವಲ ಮೂರು ವಿಕೆಟ್ಗಳನ್ನು ಮಾತ್ರ ಗಳಿಸಿದ್ದ ಡಫಿ, ಆರ್ಸಿಬಿ ಪರ ಐಪಿಎಲ್ನಲ್ಲಿ ಪದಾರ್ಪಣೆಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡದ ಅಗ್ರ ಕ್ರಮಾಂಕವನ್ನು ಕಟ್ಟಿಹಾಕಿದರು. 3 ವಿಕೆಟ್ ಪಡೆದು ಮಿಂಚಿದರು.
ಅವರು ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದರು. SRH ಆರಂಭದಲ್ಲಿಯೇ ಎಡವಿತು. ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 201/9 ರನ್ ಗಳಿಸಿತು.
'ಹರಾಜಿನಲ್ಲಿ ಜೇಕಬ್ ಡಫಿಯನ್ನು ಆಯ್ಕೆ ಮಾಡಿದಾಗ, ಜಾಶ್ ಹೇಜಲ್ವುಡ್ ಬದಲಿಗೆ ಅದ್ಭುತ ಆಯ್ಕೆ ಎಂದು ಹೇಳಿದ ಮೊದಲ ವ್ಯಕ್ತಿ ನಾನೇ ಆಗಿರಬಹುದು. ಆ ಸಮಯದಲ್ಲಿ, ಅವರು ನಂಬರ್ 1 ಟಿ20 ಬೌಲರ್ ಆಗಿದ್ದರು. ಅವರು ಟೆಸ್ಟ್ ಪಂದ್ಯವೊಂದರಲ್ಲಿ ಆರು ವಿಕೆಟ್ ಕಬಳಿಸಿದ್ದರು ಮತ್ತು ಅವರ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಅವರು ನ್ಯೂಜಿಲೆಂಡ್ನಲ್ಲಿ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ನಿಖರವಾಗಿ ತಿಳಿದಿದ್ದಾರೆ. ಅವರು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡಬಹುದು. ಆದರೆ, ಅವರು ಅಭಿಷೇಕ್ ಶರ್ಮಾ ವಿರುದ್ಧ ಹಾಗೆ ಮಾಡಲು ಪ್ರಯತ್ನಿಸಲಿಲ್ಲ' ಎಂದರು.
'ಈ ಬೌಲರ್ ಅನುಭವಿ ಮತ್ತು ಕೌಶಲ್ಯಪೂರ್ಣ, ವಿಶೇಷವಾಗಿ ನ್ಯೂಜಿಲೆಂಡ್ ಪರಿಸ್ಥಿತಿಗಳಲ್ಲಿ, ಮತ್ತು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡಬಹುದು. ಆದರೆ, ಅಭಿಷೇಕ್ ಶರ್ಮಾ ವಿರುದ್ಧ, ಅವರು ಸ್ವಿಂಗ್ ಮಾಡಲು ಪ್ರಯತ್ನಿಸಲಿಲ್ಲ. ಬದಲಿಗೆ, ಸುರಕ್ಷಿತ ವಿಧಾನವನ್ನು ಆರಿಸಿಕೊಂಡರು. ಮೊದಲ ಬಾರಿಗೆ ಅವರು ಟ್ರಾವಿಸ್ ಹೆಡ್ಗೆ ಫುಲ್ ಟಾಸ್ ಎಸೆದಾಗ, ಅವರು ಅದನ್ನು ಬೌಂಡರಿಗೆ ಹೊಡೆದರು. ಇದರಿಂದ ಕಲಿತ ಡಫಿ, ತಮ್ಮ ತಂತ್ರವನ್ನು ಬದಲಿಸಿದರು. ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದರು' ಎಂದರು.
ತಂತ್ರದಿಂದಾಗಿ, ಆರ್ಸಿಬಿ ಶ್ರೇಷ್ಠವಾಗಿತ್ತು ಮತ್ತು ಅವರು ಆ ಯೋಜನೆಗಳನ್ನು ಸುಂದರವಾಗಿ ಕಾರ್ಯಗತಗೊಳಿಸಿದರು. ಸ್ಕೋರಿಂಗ್ ನಿಯಂತ್ರಣದಲ್ಲಿಡಲು ಬಹುಶಃ ಅವರೇ ಕಾರಣ. ದಿನದಲ್ಲಿ ಸುಮಾರು 400 ರನ್ಗಳೊಂದಿಗೆ, ಚಿನ್ನಸ್ವಾಮಿ ಮಾನದಂಡಗಳ ಪ್ರಕಾರ, ಇದು ಇನ್ನೂ ಕಡಿಮೆ ಸ್ಕೋರಿಂಗ್ ಆಟವಾಗಿತ್ತು' ಎಂದು ಅಶ್ವಿನ್ ಹೇಳಿದರು.
Advertisement