MI ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡದ ಕ್ಯಾಮರೂನ್ ಗ್ರೀನ್; ಅಜಿಂಕ್ಯ ರಹಾನೆ ಹೇಳಿಕೆ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯೆ!

ನಾಯಕ ಅಜಿಂಕ್ಯ ರಹಾನೆ (67) ಮತ್ತು ಅಂಗ್‌ಕ್ರಿಶ್ ರಘುವಂಶಿ (51) ಅರ್ಧಶತಕಗಳೊಂದಿಗೆ ಕೆಕೆಆರ್ ತಂಡವು ಬೃಹತ್ ಮೊತ್ತ ಕಲೆಹಾಕಿದರೂ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
Cameron Green
ಕ್ಯಾಮರೂನ್ ಗ್ರೀನ್
Updated on

ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡದಿರುವುದಕ್ಕೆ ಅವರ ಕ್ರಿಕೆಟ್ ಮಂಡಳಿಯೇ ಕಾರಣ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ಅಜಿಂಕ್ಯ ರಹಾನೆ ಮಾಡಿದ ಆರೋಪಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೊನೆಗೂ ಪ್ರತಿಕ್ರಿಯಿಸಿದೆ. ಐಪಿಎಲ್ 2026ರ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಆರು ವಿಕೆಟ್‌ಗಳ ಸೋಲು ಅನುಭವಿಸಿತು. 220/4 ರನ್ ಗಳಿಸಿದ ಹೊರತಾಗಿಯೂ, ಮುಂಬೈ ಐದು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿದ್ದರಿಂದ ಕೆಕೆಆರ್ ಸೋಲಿನ ಹಾದಿಯತ್ತ ಸಾಗಿತು. ಪಂದ್ಯದ ನಂತರ, ಗ್ರೀನ್ ಅವರನ್ನು ಬೌಲಿಂಗ್ ಆಯ್ಕೆಯಾಗಿ ಬಳಸಲು ಸಾಧ್ಯವಾಗದ ಕಾರಣ ರಹಾನೆ ನಿರಾಶೆಗೊಂಡಂತೆ ಕಂಡುಬಂದರು.

ಪಂದ್ಯದ ನಂತರದ ಸಂವಾದದಲ್ಲಿ, ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಕ್ಯಾಮರೂನ್ ಗ್ರೀನ್‌ ಅವರಿಗೆ ಬೌಲಿಂಗ್ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಸಂಪೂರ್ಣವಾಗಿ ಅನುಮತಿ ನೀಡಿಲ್ಲ ಎಂದು ರಹಾನೆ ದೃಢಪಡಿಸಿದರು.

'ಆಶಾದಾಯಕವಾಗಿ ಗ್ರೀನ್ ಶೀಘ್ರದಲ್ಲೇ ಬೌಲಿಂಗ್ ಪ್ರಾರಂಭಿಸುತ್ತಾರೆ ಮತ್ತು ತಂಡದ ಸಂಯೋಜನೆಯು ಸ್ವಲ್ಪ ಭಿನ್ನವಾಗಿರುತ್ತದೆ. ನಾವು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದೆವು. ಆದರೆ, ಚೆಂಡಿನೊಂದಿಗೆ ಸಮತೋಲನವನ್ನು ಕಂಡುಕೊಳ್ಳುವುದು ನಿಜವಾಗಿಯೂ ಮುಖ್ಯವಾಗಿದೆ. ಗ್ರೀನ್ ಏಕೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂಬ ಕುರಿತು ನೀವು ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೇಳಬೇಕಾದ ಪ್ರಶ್ನೆ ಇದು. ಧನಾತ್ಮಕವಾಗಿ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿದೆವು ಮತ್ತು ಕಾರ್ತಿಕ್ ತ್ಯಾಗಿ ಚೆನ್ನಾಗಿ ಬೌಲಿಂಗ್ ಮಾಡಿದರು ಎಂದು ನಾನು ಭಾವಿಸುತ್ತೇನೆ. ಅವರು ಬಹಳ ಸಮಯದ ನಂತರ ಆಡಿದರು. ಅವರು ನಿಜವಾಗಿಯೂ ಉತ್ತಮರಾಗಿದ್ದರು. ಬಹಳಷ್ಟು ಸಕಾರಾತ್ಮಕ ಅಂಶಗಳಿವೆ ಮತ್ತು ಇನ್ನೂ ಬಹಳ ದೂರ ಸಾಗಬೇಕಾಗಿದೆ' ಎಂದು ರಹಾನೆ ಹೇಳಿದರು.

Cameron Green
IPL 2026: ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ವೇಳೆ ಟಾಸ್ ವಿವಾದ; ಅಭಿಮಾನಿಗಳ ಆಕ್ರೋಶ!

ಗ್ರೀನ್ ಅವರ ಲಭ್ಯತೆಯ ಬಗ್ಗೆ ರಹಾನೆ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಟಿ20 ವಿಶ್ವಕಪ್ ಸಮಯದಲ್ಲಿ ಅವರು ಅನುಭವಿಸಿದ ಬೆನ್ನಿನ ಗಾಯದಿಂದ ಗ್ರೀನ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (CA) ಈಗ ಸ್ಪಷ್ಟಪಡಿಸಿದೆ.

'ಕ್ಯಾಮರೂನ್ ಬೆನ್ನಿನ ಕೆಳಭಾಗದ ಗಾಯದಿಂದ ಬಳಲುತ್ತಿದ್ದಾರೆ. ಆದರೆ, ಸ್ವಲ್ಪ ಸಮಯದವರೆಗೆ ಬೌಲಿಂಗ್ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ' ಎಂದು ಸಿಎ ವಕ್ತಾರರು ತಿಳಿಸಿದ್ದಾರೆ.

'ಕ್ಯಾಮರೂನ್ ಸದ್ಯ ಭಾರತದಲ್ಲಿ ತನ್ನ ಬೌಲಿಂಗ್ ಲೋಡ್ ಅನ್ನು ಪುನರ್ನಿರ್ಮಿಸುತ್ತಿದ್ದಾರೆ. ಸುಮಾರು 10-12 ದಿನಗಳಲ್ಲಿ ತಂಡಕ್ಕೆ ಮರಳುವ ಗುರಿಯನ್ನು ಹೊಂದಿದ್ದಾರೆ. ಕೆಕೆಆರ್ ಜೊತೆ ಮಾತುಕತೆ ನಡೆಸಲಾಗಿದೆ ಮತ್ತು ಈ ಮಾಹಿತಿ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿದೆ' ಎಂದು ವಕ್ತಾರರು ಹೇಳಿದರು.

ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಭರ್ಜರಿ ಅರ್ಧಶತಕಗಳನ್ನು ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಆರು ವಿಕೆಟ್‌ಗಳ ಜಯ ಸಾಧಿಸುವಲ್ಲಿ ಸಹಾಯ ಮಾಡಿತು. 13 ಋತುಗಳಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆಲ್ಲದ ಮುಜುಗರದಿಂದ ಪಾರಾಯಿತು. ಆವೃತ್ತಿಯ ಮೊದಲ ಪಂದ್ಯದಲ್ಲೇ ಜಯ ಸಾಧಿಸಿತು.

ನಾಯಕ ಅಜಿಂಕ್ಯ ರಹಾನೆ (67) ಮತ್ತು ಅಂಗ್‌ಕ್ರಿಶ್ ರಘುವಂಶಿ (51) ಅರ್ಧಶತಕಗಳೊಂದಿಗೆ ಕೆಕೆಆರ್ ತಂಡವು ಬೃಹತ್ ಮೊತ್ತ ಕಲೆಹಾಕಿದರೂ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ 224/4 ತಲುಪುವ ಮೂಲಕ 2012ರ ನಂತರ ಮೊದಲ ಸೀಸನ್-ಆರಂಭಿಕ ಪಂದ್ಯದಲ್ಲಿ ಜಯ ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com