'ಒಪ್ಪಿಕೊಳ್ಳಿ, ಸೊಕ್ಕನ್ನು ಬಿಡಿ': CSK ವಿರುದ್ಧದ ಸೋಲಿನ ನಂತರ MI ನಾಯಕ ಹಾರ್ದಿಕ್ ಪಾಂಡ್ಯಗೆ ಅಂಬಟಿ ರಾಯುಡು ಸಲಹೆ

ಹಾರ್ದಿಕ್ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತಿದೆ. ಇನ್ನೂ ಐದು ಪಂದ್ಯಗಳು ಬಾಕಿ ಉಳಿದಿದ್ದು, ಪ್ಲೇಆಫ್ ಆಸೆ ಬಹುತೇಕ ಮುಗಿದಿದೆ.
Ambati Rayudu - Hardik Pandya
ಅಂಬಟಿ ರಾಯುಡು - ಹಾರ್ದಿಕ್ ಪಾಂಡ್ಯ
Updated on

ಐಪಿಎಲ್ 2026ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಮತ್ತೊಂದೆಡೆ ನಾಯಕ ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ಕೂಡ ಮುಂದುವರಿದಿದೆ. ಶನಿವಾರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ 'ಎಲ್ ಕ್ಲಾಸಿಕೊ'ದಲ್ಲಿ, ಹಾರ್ದಿಕ್ 23 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾದರು. ಅವರು ಎಂಟು ಪಂದ್ಯಗಳಲ್ಲಿ 136.44ರ ಸ್ಟ್ರೈಕ್-ರೇಟ್‌ನಲ್ಲಿ ಕೇವಲ 146 ರನ್ ಗಳಿಸಿದ್ದಾರೆ. ಹಾರ್ದಿಕ್ ಫಾರ್ಮ್ ಕಳೆದುಕೊಂಡಿರುವುದನ್ನು ಒಪ್ಪಿಕೊಂಡು, 'ದುರಹಂಕಾರ'ದಿಂದ ಹೊರಬರಲು ಪ್ರಯತ್ನಿಸಬೇಕು ಎಂದು ಮುಂಬೈ ಇಂಡಿಯನ್ಸ್‌ನ ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದ್ದಾರೆ.

'ಬಹುತೇಕ ಬ್ಯಾಟ್ಸ್‌ಮನ್‌ಗಳಿಗೆ ಅವರ ವೃತ್ತಿಜೀವನದ ಯಾವುದೋ ಒಂದು ಹಂತದಲ್ಲಿ ಇದು ಖಚಿತವಾಗಿ ಸಂಭವಿಸುತ್ತದೆ. ಆದರೆ, ಅದರಿಂದ ಹೊರಬರಲು ನೀವು ಒಂದು ಮಾರ್ಗವನ್ನು ಹೊಂದಿರಬೇಕು ಮತ್ತು ನಾನು ಫಾರ್ಮ್‌ನಲ್ಲಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು' ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋದಲ್ಲಿ ಮಾತನಾಡುತ್ತಾ ಅಂಬಟಿ ರಾಯುಡು ಹೇಳಿದರು.

'ನೀವು ಸ್ವಲ್ಪ ಹೆಚ್ಚು ಸ್ಟ್ರೈಕ್ ಅನ್ನು ರೊಟೇಟ್ ಮಾಡಬೇಕು. ಪ್ರತಿ ಚೆಂಡಿಗೂ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸುವ ಬದಲು, ಸಿಂಗಲ್ಸ್ ತೆಗೆದುಕೊಂಡು ಸ್ಕೋರ್‌ಬೋರ್ಡ್ ಅನ್ನು ಚಲಿಸುವಂತೆ ಮಾಡಬೇಕು. ಪರಿಸ್ಥಿತಿ ಸರಿಯಾಗಿದ್ದಾಗ ಮಾತ್ರ ನೀವು ದಾಳಿ ಮಾಡಬೇಕು ಮತ್ತು ದುರ್ಬಲ ಬೌಲರ್‌ಗಳನ್ನು ಗುರಿಯಾಗಿಸಿಕೊಳ್ಳಬೇಕು, ಪ್ರತಿ ಎಸೆತವನ್ನು ಗುರಿಯಾಗಿಸಿಕೊಳ್ಳಬಾರದು. ಹಠಮಾರಿಯಾಗಿರುವುದರ ಬದಲು ಅದರ ಬಗ್ಗೆ ಸ್ಮಾರ್ಟ್ ಆಗಿರಬೇಕು' ಎಂದು ರಾಯುಡು ಹೇಳಿದರು.

ಸಿಎಸ್‌ಕೆ ವಿರುದ್ಧ ಮುಂಬೈ ತಂಡವು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಇನಿಂಗ್ಸ್‌ನ ಕೊನೆಯ 10 ಓವರ್‌ಗಳಲ್ಲಿ ಕೇವಲ 69 ರನ್ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು.

Ambati Rayudu - Hardik Pandya
CSK ವಿರುದ್ಧ MI ಹೀನಾಯ ಸೋಲು: 'ಚೆನ್ನೈ ಸ್ಮಾರ್ಟ್ ಕ್ರಿಕೆಟ್ ಆಡಿತು, ಮುಂಬೈಗೆ ಇದು ಮರೆಯಲೇಬೇಕಾದ ಸೀಸನ್'- ಹಾರ್ದಿಕ್ ಪಾಂಡ್ಯ

CSK ವಿರುದ್ಧ ಹಾರ್ದಿಕ್ ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸಬಹುದಿತ್ತು ಎಂಬುದನ್ನು ರಾಯುಡು ವಿವರಿಸಿದರು.

'ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಹಲವರು ಸ್ವಾಭಾವಿಕವಾಗಿ ಲೆಗ್ ಸೈಡ್ (ಆನ್-ಸೈಡ್) ಕಡೆಗೆ ಹೊಡೆಯುತ್ತಾರೆ. ನಿಮ್ಮಿಂದ ದೂರ ಸರಿಯುವು ಚೆಂಡಿಗೆ ಒಗ್ಗಿಕೊಂಡಿಲ್ಲದಿದ್ದರೆ, ವಿಶೇಷವಾಗಿ ಕೊನೆಯ 6-7 ಓವರ್‌ಗಳಲ್ಲಿ, ನೀವು ಓವರ್ ಪಾಯಿಂಟ್‌ಗೆ ಹೊಡೆಯಲು ಅಥವಾ ಆಫ್ ಸೈಡ್‌ನಲ್ಲಿ ವೇಗವನ್ನು ಬಳಸಲು ಸಿದ್ಧರಿರುವುದಿಲ್ಲ. ಆದರೆ, ಅವರು ಮಾಡಬೇಕಾಗಿರುವುದು ಅದನ್ನೇ. ಅವರು ಸ್ವಲ್ಪ ಸ್ಥಳಾವಕಾಶ ತೆಗೆದುಕೊಂಡು ಪಾಯಿಂಟ್ ಅಥವಾ ಥರ್ಡ್-ಮ್ಯಾನ್ ಮೇಲೆ ಹೊಡೆಯಲು ಪ್ರಯತ್ನಿಸಬಹುದಾಗಿತ್ತು' ಎಂದು ರಾಯುಡು ವಿವರಿಸಿದರು.

ಹಾರ್ದಿಕ್ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತಿದೆ. ಇನ್ನೂ ಐದು ಪಂದ್ಯಗಳು ಬಾಕಿ ಉಳಿದಿದ್ದು, ಪ್ಲೇಆಫ್ ಆಸೆ ಬಹುತೇಕ ಮುಗಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com