ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವು ಭಾನುವಾರ ಸತತ ಆರನೇ ಸೋಲಿಗೆ ಶರಣಾಗಿದ್ದು, ಭಾರಿ ಹಿನ್ನಡೆ ಅನುಭವಿಸಿತು. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು 23 ರನ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್ಸಿಬಿಗೆ ವೆಂಕಟೇಶ್ ಅಯ್ಯರ್ ಅಜೇಯ 73 ರನ್ ಗಳಿಸುವ ಮೂಲಕ ಅಗ್ರ ಸ್ಕೋರರ್ ಆಗಿದ್ದರು ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಆರ್ಸಿಬಿ 20 ಓವರ್ಗಳಲ್ಲಿ 222/4 ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ರಸಿಕ್ ಸಲಾಂ ದಾರ್ ಮೂರು ವಿಕೆಟ್ಗಳನ್ನು ಮತ್ತು ಭುವನೇಶ್ವರ್ ಕುಮಾರ್ ಎರಡು ವಿಕೆಟ್ಗಳನ್ನು ಪಡೆದರು. ಈ ಗುರಿ ಬೆನ್ನತ್ತಿದ ಪಿಬಿಕೆಎಸ್ 8 ವಿಕೆಟ್ ಕಳೆದುಕೊಂಡು ಕೇವಲ 199 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದ ನಂತರ, ಪಂಜಾಬ್ ಕಿಂಗ್ಸ್ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಡ್ರೆಸ್ಸಿಂಗ್ ರೂಂನಲ್ಲಿ ನಿರಾಶೆಯಿಂದ ಕುಳಿತಿದ್ದು ಕಂಡುಬಂತು. ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಸಹ-ಮಾಲೀಕರಾದ ಪ್ರೀತಿ ಜಿಂಟಾ ಅವರೊಂದಿಗೆ ಗಂಭೀರ ಚರ್ಚೆ ನಡೆಸುತ್ತಿರುವುದು ಕಂಡುಬಂತು.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಫೋಟಕ ಆರಂಭ ಮತ್ತು 223 ರನ್ಗಳ ಚೇಸ್ ಸಮಯದಲ್ಲಿ ಆರಂಭಿಕ ಹಿನ್ನಡೆಗಳ ನಂತರ, ತಮ್ಮ ತಂಡವು ಪವರ್ಪ್ಲೇನಲ್ಲಿಯೇ ತಮ್ಮ ಪಂದ್ಯವನ್ನು ಸೋತಿತು ಎಂದು ಶ್ರೇಯಸ್ ಅಯ್ಯರ್ ಒಪ್ಪಿಕೊಂಡರು.
'ಖಂಡಿತ, ಅವರು ಉತ್ತಮ ಆರಂಭವನ್ನು ಪಡೆದರು ಮತ್ತು ಪವರ್ಪ್ಲೇ ನಂತರ ಬೌಲರ್ಗಳನ್ನು ಎದುರಿಸಲು ಪ್ರಾರಂಭಿಸಿದರು. 222 ರನ್ ಗಳಿಸಿದ್ದು ಶ್ಲಾಘನೀಯ ಪ್ರದರ್ಶನ ಎಂದು ನಾನು ಭಾವಿಸುತ್ತೇನೆ ಮತ್ತು ಬೌಲಿಂಗ್ನಲ್ಲಿ ನಮಗೆ ಅಷ್ಟೊಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಹೌದು, ಪವರ್ಪ್ಲೇನಲ್ಲಿಯೇ ಪಂದ್ಯ ನಮ್ಮಿಂದ ಕೈಜಾರಿತು' ಎಂದು ಪಂದ್ಯದ ನಂತರ ಶ್ರೇಯಸ್ ಹೇಳಿದರು.
ವಿಶೇಷವಾಗಿ ಆವೃತ್ತಿಯ ಉದ್ದಕ್ಕೂ ತಂಡಕ್ಕೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪ್ರಭ್ಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಅವರ ವಿಕೆಟ್ ಅನ್ನು ಆರಂಭದಲ್ಲಿಯೇ ಕಳೆದುಕೊಂಡಿತು. ನಂತರ ಶ್ರೇಯಸ್ ಅಯ್ಯರ್ ಕೂಡ ವಿಕೆಟ್ ಒಪ್ಪಿಸಿದರು. ಇದರಿಂದ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು.
'ನಾವು ಮೂರು ವಿಕೆಟ್ಗಳ ಕೆಳಗೆ ಇದ್ದೆವು ಮತ್ತು ನಮ್ಮ ಹೆಚ್ಚಿನ ರನ್ ಸ್ಕೋರರ್ಗಳು ಪ್ರಭ್ಸಿಮ್ರನ್ ಮತ್ತು ಪ್ರಿಯಾಂಶ್ ಆಗಿದ್ದರು. ಪವರ್ಪ್ಲೇನಲ್ಲಿ ಅವರು ನಮಗೆ ನೀಡುತ್ತಿದ್ದ ಆರಂಭಗಳು, ಸ್ಪಷ್ಟವಾಗಿಯೂ ನಮಗೆ ಈ ಬಾರಿ ಸಿಗಲಿಲ್ಲ ಮತ್ತು ನಾನು ಬೇಗನೆ ಬಂದು ಔಟ್ ಆಗುತ್ತಿದ್ದೆ. ನಿಜವಾಗಿಯೂ ನಿರಾಶೆಯಾಯಿತು. ಆದರೆ, ಶಶಾಂಕ್ ಮತ್ತು ಸ್ಟೊಯಿನಿಸ್ ಮತ್ತು ಮಧ್ಯದಲ್ಲಿ ಕೆಲವು ಇತರರಿಂದ ಶ್ಲಾಘನೀಯ ಪ್ರದರ್ಶನ ಬಂತು' ಎಂದು ಅವರು ಹೇಳಿದರು.
'ಫಲಿತಾಂಶಗಳು ಏನೇ ಇರಲಿ ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ. ಇಂದು ಮುಗಿದಿದೆ. ನಾಳೆ ಮತ್ತೆ ನಾನು ಸೂರ್ಯೋದಯವನ್ನು ನೋಡಲಿದ್ದೇನೆ ಮತ್ತು ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ' ಎಂದು ಅವರು ಹೇಳಿದರು.
Advertisement