ಬಡ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಸಂಜು ಸ್ಯಾಮ್ಸನ್; 1 ಸಾವಿರ UPSC ಆಕಾಂಕ್ಷಿಗಳಿಗೆ ಸ್ಕಾಲರ್‌ಶಿಪ್!

ಲೀಡ್ ಇಂಡಿಯಾ ಶೃಂಗಸಭೆ 2026 ರಲ್ಲಿ, ಸಿವಿಲ್ ಸರ್ವಿಸಸ್ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸುವ ಯುವ ಪ್ರತಿಭೆಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಘೋಷಿಸಿದರು.
Sanju Samson announced scholarship for 1000 UPSC aspirants across India
ಸಂಜು ಸ್ಯಾಮ್ಸನ್
Updated on

ಭಾರತ, ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ ಮತ್ತು ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ತಮ್ಮ ಅತ್ಯಾಕರ್ಷಕ ಶತಕಗಳ ಮೂಲಕ ದೇಶದ ಕನಸನ್ನು ನನಸುಗೊಳಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅವರು ಈಗ ದೇಶದ ಯುವ ಸಮುದಾಯಕ್ಕೆ ಬೃಹತ್ ಶೈಕ್ಷಣಿಕ ಕೊಡುಗೆಯೊಂದನ್ನು ಪ್ರಕಟಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯಾಗುವ ಕನಸಿಗೆ ನೆರವಾಗಲು ನಿರ್ಧರಿಸಿದ ಸಂಜು ಸ್ಯಾಮ್ಸನ್ ಅವರು, ದೇಶಾದ್ಯಂತ ಒಟ್ಟು 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದ್ದಾರೆ.

ಲೀಡ್ ಇಂಡಿಯಾ ಶೃಂಗಸಭೆ 2026 ರಲ್ಲಿ, ಸಿವಿಲ್ ಸರ್ವಿಸಸ್ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸುವ ಯುವ ಪ್ರತಿಭೆಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಘೋಷಿಸಿದರು.

Sanju Samson announced scholarship for 1000 UPSC aspirants across India
IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್‌!

‘ಸಂಜು ಸ್ಯಾಮ್ಸನ್ ಫೌಂಡೇಶನ್’ ಮತ್ತು ‘ಲೀಡ್ ಐಎಎಸ್ ಅಕಾಡೆಮಿ’ ಜಂಟಿಯಾಗಿ ಹಮ್ಮಿಕೊಂಡಿರುವ ಈ ವಿದ್ಯಾರ್ಥಿವೇತನ ಯೋಜನೆಯು ದೇಶದ ಭವಿಷ್ಯದ ಆಡಳಿತಗಾರರನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

ಲೀಡ್ ಐಎಎಸ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್ ಪಡೆಯಲು 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನ ಸೌಲಭ್ಯವು ಇಡೀ ದೇಶದಾದ್ಯಂತ ಇರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಆದಾಗ್ಯೂ, ಸಂಜು ಸ್ಯಾಮ್ಸನ್ ಅವರ ತಾಯ್ನಾಡಾದ ಕೇರಳದ ವಿಳಿಂಜಂ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳ ಮೀನುಗಾರಿಕಾ ಸಮುದಾಯದ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ವಿಶೇಷ ಆದ್ಯತೆ ಮತ್ತು ಹೆಚ್ಚಿನ ಗಮನ ನೀಡಲಾಗುವುದು ಎಂದು ಫೌಂಡೇಶನ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com