ಸಾಗರ ಬಳಿ ಅಪಘಾತ: ಹುಬ್ಬಳ್ಳಿಯ ಐವರ ಸಾವು

ತಾಲೂಕಿನ ಸಿಗಂದೂರು ಮಾರ್ಗದಲ್ಲಿನ ಹುಲಿದೇವರಬನಗ್ರಾಮದ ಸಮೀಪ...
ಅಪಘಾತದಲ್ಲಿ ಮೃತಪಟ್ಟವರು
ಅಪಘಾತದಲ್ಲಿ ಮೃತಪಟ್ಟವರು

ಸಾಗರ: ತಾಲೂಕಿನ ಸಿಗಂದೂರು ಮಾರ್ಗದಲ್ಲಿನ ಹುಲಿದೇವರಬನಗ್ರಾಮದ ಸಮೀಪ ಶನಿವಾರ ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಸಂತೋಷ್‌ನಾಯರ್(40), ಅವರ ಪತ್ನಿ ಬಿಂದು (38) ಪುತ್ರಿ ಸಾಧಿಕಾ (6) ಊಮೇಶ್ ಜಾಡರ್ (40) ಅವರ ಪುತ್ರ ರೋಹನ್ (8) ಮೃತರು. ಉಮೇಶ್ ಜಾಡರ್ ಪತ್ನಿ ನಂದಾ, ಮಗಳು ಸುಹಾನಾ ತೀವ್ರವಾಗಿ ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಹುಬ್ಬಳ್ಳಿಯ ಬೊಮ್ಮಾಪುರ ಹೋಲಿಮಠ ಪ್ರದೇಶದವರು ಎಂದು ಗುರುತಿಸಲಾಗಿದೆ. ಸಿಂಗದೂರಿಗೆ ಹೋಗೂತ್ತಿರುವಾಗ ವಾಹನವೊಂದನ್ನು ಹಿಂದಿಕ್ಕಲು ಪ್ರಯತ್ನಿಸಿ, ಎದುರಿನಿಂದ ಬರುತ್ತಿದ್ದ ಬೆಂಗಳೂರಿನ ಖಾಸಗಿ ಬಸ್ಸಿಗೆ ನೇರವಾಗಿ ಅಪ್ಫಳಿಸಿದೆ. ಅಪಘಾತದ ರಭಸಕ್ಕೆ ಕಾರು ಸುಮಾರು 30 ಅಡಿ ಹಿಂದಕ್ಕೆ ಹೋಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್ಸಿನ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಸಾಗರ ಡಿವೈಎಸ್ಪಿ ಬಿ.ಎನ್.ನಂದಿನಿ, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಮಾದಪ್ಪ. ಪಿಎಸ್‌ಐ ಶಶಿಕಾಂತ್ ಮೊದಲಾದವರು ಭೇಟಿ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com