ಅಂತೂ ಬೋನಿಗೆ ಹುಲಿ

ಕಾಫಿ ತೋಟದ ಕೆಲಸಕ್ಕಾಗಿ ಹೋಗುತ್ತಿದ್ದ ಮಹಿಳೆಯನ್ನು ಸಾಯಿಸಿದ ಗಂಡು ಹುಲಿ...
ಹುಲಿ
ಹುಲಿ

ಚಿಕ್ಕಮಗಳೂರು: ಕಾಫಿ ತೋಟದ ಕೆಲಸಕ್ಕಾಗಿ ಹೋಗುತ್ತಿದ್ದ ಮಹಿಳೆಯನ್ನು ಸಾಯಿಸಿದ ಗಂಡು ಹುಲಿಯನ್ನು ಕೃತ್ಯ ನಡೆದ ಸ್ಥಳದಲ್ಲೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಸತತ 48 ಗಂಟೆ ಕಾಲ ಕಾರ್ಯಾರಣೆ ನಡೆಸಲಾಗಿದ್ದು, ಸೋಮವಾರ ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಹುಲಿ ಸೆರೆ ಹಿಡಿಯಲಾಗಿದೆ. ಹುಲಿಯನ್ನು ಎಲ್ಲಿಗೆ ಸಾಗಿಸಬೇಕೆಂಬ ಆದೇಶಕ್ಕಾಗಿ ಅರಣ್ಯಾಧಿಕಾರಿ ನಿರೀಕ್ಷೆಯಲ್ಲಿದ್ದು ಸಂಜೆ 6 ಗಂಟೆಯಾಗಿದ್ದರೂ ಆದೇಶ ಬಂದಿರಲಿಲ್ಲ. ಶನಿವಾರ ಬೆಳಗ್ಗೆ ಚಿಕ್ಕಿಮಗಳೂರು ತಾಲೂಕಿನ ಪಂಡರಹಳ್ಳಿ ಬಳಿ ಹುಲಿ ಸುಮಿತ್ರಾರವರನ್ನು ಕೊಂದು ಹಾಕಿತ್ತು.

ಈ ಘಟನೆ ಸಂಭವಿಸಿದ ನಂತರ ಅರಣ್ಯ ಇಲಾಖೆಯವರು ಹುಲಿಯನ್ನು ಸೆರೆ ಹಿಡಿಯಲು 50ಕ್ಕೂ ಹೆಚ್ಚು ಮಂದಿಯನ್ನು ನೇಮಿಸಿದ್ದರು. ಆದರೂ ಶನಿವಾರ ರಾತ್ರಿ ಅದೇ ಹುಲಿ 2 ಹಸುಗಳನ್ನೂ ತಿಂದು ಹಾಕಿತ್ತು. ಹುಲಿಯನ್ನು ಜೀವಂತ ಹಿಡಿಯಬೇಕೆಂಬ ಉದ್ದೇಶದಿಂದ ಅರಿವಳಿಕೆ ತಜ್ಞರನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com