ವಿದ್ಯಾಪೀಠ ವಾರ್ಡ್‌ಗೆ ಮೇಯರ್ ಭೇಟಿ

ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳನ್ನು ವೀಕ್ಷಿಸಿದ ಮೇಯರ್...
ಮೇಯರ್ ಶಾಂತಕುಮಾರಿ
ಮೇಯರ್ ಶಾಂತಕುಮಾರಿ
Updated on


ಬೆಂಗಳೂರು: ವಿದ್ಯಾಪೀಠ ವಾರ್ಡ್‌ನಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳನ್ನು ಮೇಯರ್ ಶಾಂತಕುಮಾರಿ ವೀಕ್ಷಿಸಿದರು.

ಬನಶಂಕರಿ 3ನೇ ಹಂತದ, 3ನೇ ಅಡ್ಡರಸ್ತೆಯ ಬಳಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಪರಿಶೀಲಿಸಿ, ರಸ್ತೆಯ ಬಳಿ ಬೃಹತ್ ನೀರಿನ ಕಾಲುವೆಯ ಚರಂಡಿ ಮುಚ್ಚಿದ್ದು, ಕಾಲುವೆಗೆ ಹಾನಿಯಾಗದಂತೆ ಎಚ್ಚರವಹಿಸಬೇಕು ಎಂದರು. ಸುತ್ತಮುತ್ತಲ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಿದ್ದು, ಡಾಂಬರೀಕರಣ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿನಾಯಕನಗರದಲ್ಲಿ ಕೆಲವೆಡೆ ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳನ್ನು ವೀಕ್ಷಿಸಿದ ಮೇಯರ್, ಮಾಲೀಕರಿಗೆ ಎಚ್ಚರಿಕೆ ನೀಡಿ, ಅವಕಾಶ ನೀಡಿದ ವಲಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಿದರು. ಕುಮಾರಸ್ವಾಮಿ ದೇವಸ್ಥಾನದ ಉದ್ಯಾನ ಹಾಗೂ ಚನ್ನಮ್ಮನ ಕಟ್ಟೆ ಪ್ರದೇಶದ ಆಟದ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com