ಬಿಜೆಪಿ ಸಮಾವೇಶ ಪ್ರವೇಶಿಸಲು ಮೈತ್ರಿಯಾ ಗೌಡ ಯತ್ನ: ಪೊಲೀಸರೊಂದಿಗೆ ವಾಗ್ವಾದ

ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದ ವೇಳೆ ನಟಿ ಮೈತ್ರಿಯಾ ಗೌಡ ಅವರು ಸಮಾವೇಶವನ್ನು...
ಮೈತ್ರಿಯಾ ಗೌಡ
ಮೈತ್ರಿಯಾ ಗೌಡ
Updated on

ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದ ವೇಳೆ ನಟಿ ಮೈತ್ರಿಯಾ ಗೌಡ ಅವರು ಸಮಾವೇಶವನ್ನು ಪ್ರವೇಶಿಸಲು ಮುಂದಾಗಿದ್ದು, ಈ ವೇಳೆ ಮೈತ್ರಿಯಾ ಅವರನ್ನು ಪೊಲೀಸರು ತಡೆದು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

ಸಮಾವೇಶದ ಸ್ಥಳಕ್ಕೆ ಮೈತ್ರೇಯಿ ಅವರು ಬರುತ್ತಿದ್ದಂತೆ ಪೊಲೀಸರು ಅವರನ್ನು ಹಿಂಬಾಲಿಸಿ ಪ್ರಶ್ನಿಸಿದರು. ಅಲ್ಲದೆ ಸಮಾವೇಶಕ್ಕೆ ಪ್ರವೇಶಿದಂತೆ ಪೊಲೀಸರು ತಡೆದ ಸಂದರ್ಭದಲ್ಲಿ ತಳ್ಳಾಟ ನೂಕಾಟ ಸಂಭವಿಸಿದೆ. ಈ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದ ಮೈತ್ರಿಯಾ ಸಮಾವೇಶ ನಡೆಯುತ್ತಿರುವ ಮೈದಾನಕ್ಕೆ ತೆರಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಮೈತ್ರಿಯಾ ಗೌಡ ಅವರು ಸಮಾವೇಶ ಸ್ಥಳಕ್ಕೆ ತೆರಳಲು ಅವಕಾಶ ನಿರಾಕರಿಸಿದ ಪೊಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com